ರಸವೇ ಜನನ.. ವಿರಸ ಮರಣ.. ಸಮರಸವೇ ಜೀವನ.. – ದ ರಾ ಬೇಂದ್ರೆ

ಸಲಹೆ ಸೂಚನೆಗಳು

ಸಮರಸದಲ್ಲಿ ಬರೆಯುವಾಗ ಕೆಲವು ಸಲಹೆಗಳನ್ನು ದಯವಿಟ್ಟು ಗಮನದಲ್ಲಿಡಿ

೧) ಯೂನಿಕೋಡ್ ನಲ್ಲೇ ಬರೆಯಿರಿ.
೨) ನಿಮ್ಮ ಲೇಖನಗಳಲ್ಲಿ ಕನ್ನಡತನವಿರಲಿ. ಬೇರೆ ಭಾಷೆಯ ಬಳಕೆ ಅಗತ್ಯವಿದ್ದರೆ ಮಾತ್ರ ಉಪಯೋಗಿಸಿ.
೩) ಕಾಗುಣಿತ/ಅಕ್ಷರ ದೋಷ, ವ್ಯಾಕರಣದ ಬಗ್ಗೆ ಹೆಚ್ಚಿನ ಗಮನ ಹರಿಸಿ.
೪) ಚರ್ಚೆ ಅವಶ್ಯಕ. ಆದರೆ ಚರ್ಚೆ ನಿಂದನಾತ್ಮಕವಾಗಬಾರದು, ವೈಯಕ್ತಿಕ/ವ್ಯಕ್ತಿಗತ ಟೀಕೆಯಾಗಬಾರದು.ಚರ್ಚೆಯ ವಿಷಯ ವಸ್ತುನಿಷ್ಠವಾಗಿರಲಿ.
೫) ಸಾಧ್ಯವಾದೊಷ್ಟು ಧಾರ್ಮಿಕ ಚರ್ಚೆಗಳಿಂದ (ಯಾವುದೇ ಧರ್ಮದ ಬಗ್ಗೆ ಗೊತ್ತಿಲ್ಲದ್ದನ್ನು, ನಿಂದನಾತ್ಮಕವಾದದ್ದನ್ನು ಬರೆಯದಿರಿ) ದೂರವಿರಿ.
೬) ಸ್ವಂತದಲ್ಲದ್ದನು (ನಕಲನ್ನು) ಸೇರಿಸುವುದರಿಂದ ದೂರವಿರಿ.
೭) ಬೇರೆ ತಾಣಗಳಿಂದ/ವ್ಯಕ್ತಿಗಳಿಂದ ಮಾಹಿತಿ/ಫೋಟೋಗಳನ್ನು ಪಡೆದಾಗ ಆ ತಾಣದ/ವ್ಯಕ್ತಿಯ ಹೆಸರನ್ನು ಸೂಚಿಸಿ.
೮) ಅಸಂವಿಧಾನಕ ಭಾಷೆಯ ಪ್ರಯೋಗದ ಬಗ್ಗೆ ಎಚ್ಚರವಿರಲಿ.
೯) ವಿಕೃತ ಲೈಂಗಿಕತೆಯ ಬಗೆಗಿನ ಲೇಖನಗಳು, ಲೈಂಗಿಕತೆಯನ್ನು ಪ್ರಚೋದಿಸುವಂತಹ ಚಿತ್ರಗಳು ಬೇಡ.
೧೦) ಆರೋಗ್ಯಕರ ಚರ್ಚೆ, ಹೆಚ್ಚಿನ ತಿಳುವಳಿಕೆ, ಸಾಮರಸ್ಯ ಸಮಾಜ, ಸಮರಸ ಜೀವನ ನಮ್ಮ ಧ್ಯೇಯ. ನೆನಪಿರಲಿ.



2 ಪ್ರತಿಕ್ರಿಯೆಗಳು

  1. ಸಮರಸ ಈ-ಪತ್ರಿಕೆ ಓದಿದೆ. ಉಪಯುಕ್ತವಾಗಿದೆ. ರಂಗಭೂಮಿಯ ಬಗೆಗೆ ತಿಳಿಸುವ ಒಂದು ಕಿಂಡಿ ಇದ್ದಿದ್ದರೆ ಚೆನ್ನಾಗಿತ್ತು.

  2. ಆತ್ಮೀಯ ವೇಣುಗೋಪಾಲ್ ರವರೆ,

    ಧನ್ಯವಾದಗಳು. ನಿಮ್ಮ ಉಪಯುಕ್ತ ಸಲಹೆಯನ್ನು ಸಮರಸದಲ್ಲಿ ಶೀಘ್ರವಾಗಿ ಅಳವಡಿಸುತ್ತೇವೆ.

ಪ್ರತಿಕ್ರಿಯಿಸಿ