ರಕ್ಷಕ ಅನಾಥದ ನಿಮ್ಮ ನೆಚ್ಚಿನ ಪ್ರಬಂಧವನ್ನು ವಸುಧೇಂದ್ರ ಓದಲಿದ್ದಾರೆ!! | ಸಮರಸ

ರಸವೇ ಜನನ.. ವಿರಸ ಮರಣ.. ಸಮರಸವೇ ಜೀವನ.. – ದ ರಾ ಬೇಂದ್ರೆ

ರಕ್ಷಕ ಅನಾಥದ ನಿಮ್ಮ ನೆಚ್ಚಿನ ಪ್ರಬಂಧವನ್ನು ವಸುಧೇಂದ್ರ ಓದಲಿದ್ದಾರೆ!!

ವಸುಧೇಂದ್ರ ಪ್ರಬಂಧ ಬರೆಯುವಷ್ಟೇ ಚೆನ್ನಾಗಿ, ಅದನ್ನು ಓದುವರೇ? ನಾವು ಅವರ ಪುಸ್ತಕವನ್ನು ಓದಿ ಆನಂದಿಸುವುದಕ್ಕಿಂತ, ಅವರಿಂದಲೇ ಅದನ್ನು ಓದಿಸಿದಾಗ ನಮಗೆ ಹೆಚ್ಚು ಆನಂದ aಸಿಗುವುದೇ? ಇವೆಲ್ಲಾ ಕುತೂಹಲಕ್ಕೆ, ಉತ್ತರ ನಿಮಗೆ 11 ಜುಲೈ 2010 ಭಾನುವಾರ, ಆಕೃತಿ ಪುಸ್ತಕ ಮಳಿಗೆಯಲ್ಲಿ ಸಿಗಲಿದೆ!

ಬನ್ನಿ,ಭಾಗವಹಿಸಿ, ವಸುಧೇಂದ್ರರ ಜೊತೆ ಹರಟೆ ಹೊಡೆಯೋಣ! ವಸುಧೇಂದ್ರರ ಪುಸ್ತಕದಲ್ಲಿ ನಮಗೆ ಇಷ್ಟವಾದದ್ದನ್ನ, ಇಷ್ಟವಾಗದೆ ಇದ್ದದ್ದನ್ನ ಹೇಳೋಣ! ವಸುಧೇಂದ್ರರಿಗೆ ಸರಿ ಬಂದರೆ ನಮ್ಮ ಹರಟೆ ಅವರ ಮುಂದಿನ ಪುಸ್ತಕದಲ್ಲಿ ಪ್ರಬಂಧವಾಗಬಾರದೇಕೆ?

ಫೋಟೋ ಕೃಪೆ: http://kadalateera.blogspot.com/2009/02/blog-post_15.html

ಸ್ಥಳ:  ಆಕೃತಿ ಬುಕ್ಸ್
ನಂ. 28 ( ಹಳೆ ನಂ: 733), 2ನೇ ಮಹಡಿ,
12 ನೇ ಮುಖ್ಯರಸ್ತೆ, 3 ನೇ ಬ್ಲಾಕ್,
ರಾಜಾಜಿನಗರ, ಬೆಂಗಳೂರು- 560010

ದಿನಾಂಕ : 11 ಜುಲೈ 2010 ಭಾನುವಾರ

ಸಮಯ: ಬೆಳಗ್ಗೆ 11 ಘಂಟೆಗೆ

ಗುರುತು: ಇ. ಎಸ್. ಐ. ಆಸ್ಪತ್ರೆ ಹತ್ತಿರ, ಸ್ವಾತಿ ಗಿಫ್ಟ್ ಸೆಂಟರ್‌‍ನ ಪಕ್ಕ, ಎಫ್-ಸ್ಕ್ವಾರ್ ಮಳಿಗೆಯ ಮೇಲೆ

ಹೆಚ್ಚಿನ ವಿವರಗಳಿಗೆ ದೂರವಾಣಿಯಲ್ಲಿ ಸಂಪರ್ಕಿಸಲು: 9886694580

ನೀವೂ ಬನ್ನಿ, ನಿಮ್ಮ ಗೆಳೆಯರನ್ನೂ ಕರೆತನ್ನಿ..

ರಕ್ಷಕ ಅನಾಥನ ಬಗ್ಗೆ ಅಕ್ಷರ ವಿಹಾರದಲ್ಲಿ ಹೀಗಿದೆ.. ಓದಿ..

ರಕ್ಷಕ ಅನಾಥದ ಯಾವ ಪ್ರಬಂಧ ವಸುಧೇಂದ್ರ ಓದಬೇಕೆಂದು ನಿಮಗನ್ನಿಸುತ್ತದೆ? ಕೆಳಗೆ ಪ್ರತಿಕ್ರಿಯಿಸಿ..



ಪ್ರತಿಕ್ರಿಯಿಸಿ