<?xml version="1.0" encoding="UTF-8"?>
<rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>ಸಮರಸ</title>
	<atom:link href="http://samarasa.net/samarasa/?feed=rss2" rel="self" type="application/rss+xml" />
	<link>http://samarasa.net/samarasa</link>
	<description>ರಸವೇ ಜನನ.. ವಿರಸ ಮರಣ.. ಸಮರಸವೇ ಜೀವನ.. - ದ ರಾ ಬೇಂದ್ರೆ</description>
	<lastBuildDate>Fri, 30 Jul 2010 08:04:48 +0000</lastBuildDate>
	<generator>http://wordpress.org/?v=2.9.2</generator>
	<language>en</language>
	<sy:updatePeriod>hourly</sy:updatePeriod>
	<sy:updateFrequency>1</sy:updateFrequency>
			<item>
		<title>ಆಗಸ್ಟ್ ೧ ರಂದು &#8211; ಛಂದದ ಹೊಸ ಪುಸ್ತಕಗಳ ವಾಚನ ಕಾರ್ಯಕ್ರಮ</title>
		<link>http://samarasa.net/samarasa/?p=964</link>
		<comments>http://samarasa.net/samarasa/?p=964#comments</comments>
		<pubDate>Fri, 30 Jul 2010 08:04:48 +0000</pubDate>
		<dc:creator>admin</dc:creator>
				<category><![CDATA[ಕಾರ್ಯಕ್ರಮಗಳು]]></category>

		<guid isPermaLink="false">http://samarasa.net/samarasa/?p=964</guid>
		<description><![CDATA[
]]></description>
			<content:encoded><![CDATA[<p><a href="http://samarasa.net/samarasa/wp-content/uploads/2010/07/inv-chanda.jpg"><img class="aligncenter size-full wp-image-965" title="inv chanda" src="http://samarasa.net/samarasa/wp-content/uploads/2010/07/inv-chanda-e1280476801187.jpg" alt="" width="550" height="359" /></a></p>
]]></content:encoded>
			<wfw:commentRss>http://samarasa.net/samarasa/?feed=rss2&amp;p=964</wfw:commentRss>
		<slash:comments>0</slash:comments>
		</item>
		<item>
		<title>ಮಡದಿ ಹಾರಿಸಿದ Missile&#8230;..</title>
		<link>http://samarasa.net/samarasa/?p=962</link>
		<comments>http://samarasa.net/samarasa/?p=962#comments</comments>
		<pubDate>Thu, 29 Jul 2010 13:49:23 +0000</pubDate>
		<dc:creator>gopaljsr</dc:creator>
				<category><![CDATA[ಹಾಸ್ಯ]]></category>

		<guid isPermaLink="false">http://samarasa.net/samarasa/?p=962</guid>
		<description><![CDATA[ಬೆಳಿಗ್ಗೆ &#8220;ಕೊಸಲ್ಯ (ಸಾರಿ&#8230;. ಕೌಸಲ್ಯ ಕೋಸು ಪಲ್ಯ ಅಂತ ತಿಳಿದುಕೊಂಡಿರಿ. ನನಗೆ ಸ್ವಲ್ಪ ಕರ್ಣ ದೋಷ. ನಿಮಗೆ ಸರಿಯಾಗಿ ತಿಳಿಯಿತಲ್ಲ ಅಷ್ಟು ಸಾಕು.) ಸುಪ್ರಜಾ ರಾಮ &#8230; &#8221; ಆಗಲೇ ನನ್ನ ಮಡದಿಯ ಸುಪ್ರಭಾತ ಮುಗಿದು, ಅಷ್ಟೊತ್ತರ ನಾಮಾವಳಿ ನಡೆಯುತ್ತಿತ್ತು. &#8220;ಎಷ್ಟು ಸಾರಿ ನಿನಗೆ ಹೇಳುವದು ಹೀಗೆಲ್ಲ ಮಾಡಬೇಡ ಎಂದು&#8221;. ದೇವರ ಮನೆ ಇಂದ ಕಣ್ಣಾಡಿಸಿದಾಗ ತಿಳಿಯಿತು ಆಗಲೇ ನಮ್ಮ ೨ ವರ್ಷದ ಕುಮಾರ ಕಂಠೀರವ ಸಬ್ಬಕ್ಕಿ ಉಪ್ಪಿಟ್ಟಿನಿಂದ ಅಭಿಷೇಕ ಮಾಡಿಕೊಂಡಿದ್ದನೆಂದು. ನಿನ್ನೆಯೇ ನನಗೆ ಲಾಲಿ ಹಾಡು [...]]]></description>
			<content:encoded><![CDATA[<p>ಬೆಳಿಗ್ಗೆ &#8220;ಕೊಸಲ್ಯ (ಸಾರಿ&#8230;. ಕೌಸಲ್ಯ ಕೋಸು ಪಲ್ಯ ಅಂತ ತಿಳಿದುಕೊಂಡಿರಿ. ನನಗೆ ಸ್ವಲ್ಪ ಕರ್ಣ ದೋಷ. ನಿಮಗೆ ಸರಿಯಾಗಿ ತಿಳಿಯಿತಲ್ಲ ಅಷ್ಟು ಸಾಕು.) ಸುಪ್ರಜಾ ರಾಮ &#8230; &#8221; ಆಗಲೇ ನನ್ನ ಮಡದಿಯ ಸುಪ್ರಭಾತ ಮುಗಿದು, ಅಷ್ಟೊತ್ತರ ನಾಮಾವಳಿ ನಡೆಯುತ್ತಿತ್ತು. &#8220;ಎಷ್ಟು ಸಾರಿ ನಿನಗೆ ಹೇಳುವದು ಹೀಗೆಲ್ಲ ಮಾಡಬೇಡ ಎಂದು&#8221;. ದೇವರ ಮನೆ ಇಂದ ಕಣ್ಣಾಡಿಸಿದಾಗ ತಿಳಿಯಿತು ಆಗಲೇ ನಮ್ಮ ೨ ವರ್ಷದ ಕುಮಾರ ಕಂಠೀರವ ಸಬ್ಬಕ್ಕಿ ಉಪ್ಪಿಟ್ಟಿನಿಂದ ಅಭಿಷೇಕ ಮಾಡಿಕೊಂಡಿದ್ದನೆಂದು. ನಿನ್ನೆಯೇ ನನಗೆ ಲಾಲಿ ಹಾಡು ಆಗಿತ್ತು &#8220;೪ ದಿವಸಗಳಿಂದ ಹೇಳ್ತಾ ಇದ್ದೇನೆ ದಿನಸಿ ಯಾವಾಗ್ರಿ ತರ್ತಿರ&#8221; ಎಂದು. ಇವತ್ತೇನಾದರೂ ದಿನಸಿ ತರ್ದಿದ್ರೆ ನನಗೆ ಸಹಸ್ರನಾಮಾವಳಿ ಗ್ಯಾರಂಟೀ ಎಂದು ಗೊತ್ತಿದ್ದರಿಂದ ಮೊಬೈಲ್ನಲ್ಲಿ Reminder ಇಟ್ಟು ಆಫೀಸ್ಗೆ ಹೊರಟೆ.</p>
<p>ಆಫೀಸ್ನಲ್ಲಿ ದಿನಸಿ ಪಟ್ಟಿಯನ್ನು ತೆಗೆದೆ.. ಪಟ್ಟಿ ಹೀಗಿತ್ತು</p>
<p>ಇಡ್ಲಿ ರವ<br />
ಅವಲಕ್ಕಿ<br />
&#8230;<br />
Missile<br />
&#8230;..</p>
<p>ತಟ್ಟನೆ ಕಣ್ಣು ಅಲ್ಲಿಯೇ ಸ್ಟಾಪ್ ಆಗಿಬಿಟ್ಟಿತು ಏನಿದು Missile ಎಂದು ಯೋಚನೆ ಮಾಡಿದೆ. ನಾನೇನಾದರೂ ಡಾಕ್ಟರ ಆಗಿದ್ದರೆ ಅಥವಾ ಮೆಡಿಕಲ್ ಶಾಪ್ನಲ್ಲಿ ಕೆಲಸ ಮಾಡುತ್ತಿದ್ದರೆ ಅರ್ಥವಾಗುತಿತ್ತೇನೋ?. ಆದರೆ ನಾನೊಬ್ಬ ಸಾಫ್ಟ್ವೇರ್ ಇಂಜಿನಿಯರ್. ಏನೆಂದು ಹೊಳಿಲೆ ಇಲ್ಲ. ಈಗೆನಾದ್ರು ಅವಳಿಗೆ ಫೋನ್ ಮಾಡಿ ಕೇಳಿದ್ರೆ, &#8220;ನಾಲ್ಕು ದಿನಗಳು ಆಯಿತು ಏನ್ ಎಮ್ಮೆ ಮೆಯ್ತಿದ್ರಾ? ಸಾರೀ ಮೆಯಿಸ್ತಿದ್ರ ಅಂತ ಕೊಪಿಸ್ಕೊತಾಳೆ&#8221; (ಅವಳಿಗೂ ಗೊತ್ತು ನಾನು ಗೋವುಗಳ ಪಾಲ (ಯಾನಿ ಗೋಪಾಲ)). ನಾನೆ ಕಂಡುಹಿಡಿಯೋಣವೆಂದು ಇಂಟರ್ನೆಟ್ ಜಾಲಾಡಿದೆ. ನಾನು ಓದಿರೋ &#8220;Wren And Martin&#8221; ಮತ್ತು &#8220;Oxford Dictionary&#8221; ಕೂಡ ಏನು ಸಹಾಯಕ್ಕೆ ಬರಲಿಲ್ಲ. ಕೊನೆಯ ಪ್ರಯತ್ನವಾಗಿ ಎಲ್ಲ ಗೆಳೆಯರಿಗೆ SMS ಮಾಡಿ &#8220;ಮ್&#8221; ನಿಂದ start ಆಗುವ ಮತ್ತು &#8220;Missile&#8221; ಗೆ ಪ್ರಸಬದ್ದ ಆಗಿರೋ ದಿನಸಿ ವಸ್ತುಗಳೆನೆಂದು. ಒಂದೊಂದೇ ಉತ್ತರಗಳು ಬರಲಾರಂಬಿಸಿದವು. Masala, Masaladose, Mausambi,Mosaru, Moongdal,Munch,Manchuri, ಮಂಡಾಳ(ಕಡಲೆಪುರಿ),Meera Shikakai, Masala Vade etc&#8230; ಎಲ್ಲವನ್ನು ಕೇಳಿ Confirm ಮಾಡುವದಕ್ಕೆ ಹೆಂಡತಿಯನ್ನು ಒಂದೊಂದಾಗಿ ಫೋನ್ ಮಾಡಿ ಕೇಳಿದೆನು ಇವು ಏನಾದ್ರು ಬೇಕ ಅಂತ. ಎಲ್ಲಕ್ಕೂ ನಕಾರಾತ್ಮಕ ಉತ್ತರ. ಅವಳಿಗೂ ಸ್ವಲ್ಪ ಅನುಮಾನ ಬಂತು ಏಕೆ? ಎಂದಾಗ ಏನಿಲ್ಲ ಹಾಗೆ ಕೇಳಿದೆ ಎಂದೆ. ಆನಂತರ ಒಬ್ಬ ಮಿತ್ರನು ಫೋನ್ ಮಾಡಿ ಏನೋ ನಿನ್ನ ಹೆಂಡತಿ ಮಲೆಯಾಳಿ ಏನೋ ಎಂದ. ಏಕೆ? ಎಂದಾಗ murukku ಇರಬಹುದಾ? ಎಂದ. ಅದನ್ನು ನೋಟ್ ಮಾಡಿ ಮತ್ತೆ ಯಾವದಾದ್ರು ಶಬ್ದಗಳು ಇವೆಯಾ?. ಮೊಸಳೆ(Crocodile), ನಿನಗೆ ಬಾರಿಸುವದಕ್ಕೆ ಮುಸಲ(ಸಂಸ್ಕೃತದಲ್ಲಿ ದೊಣ್ಣೆ) ಎಂದ. ಕೆಟ್ಟ ಕೋಪ ಬಂತು. ಕೊನೆಗೆ ಕೇಳಿಯೇ ಬಿಡೋಣ ಎಂದು ಹೆಂಡತಿಗೆ ಫೋನ್ ಮಾಡಿ ಏನಿದು? ನೀನು ಬರ್ದಿರೋದು Missile ಎಂದಾಗ. ಅದು mixture ಎಂದು ತಿಳಿಯಿತು. ಬಿಜಾಪುರ ಕಡೆ ಅದನ್ನ &#8220;ಮಿಸಳ್&#8221; ಎಂದು ಕರೆಯುತ್ತಾರೆ.</p>
<p>ಮನಸ್ಸಿಗೆ ಮಸಾಲೆ ದೋಸೆ ತಿಂದಷ್ಟು ಸಂತೋಷವಾಯಿತು. ಮನೇಲಿ ಹೊಸ ರುಚಿಗಳ ಪ್ರಯೋಗ ಬೇರೆ ನಡೀತಾ ಇದೆ ಈ Missile ನನ್ನ ಹೊಟ್ಟೆ ಮೇಲೆ ಪ್ರಯೋಗ ಮಾಡಬಹುದು.</p>
<p>ಮದುವೆಯ ಹೊಸದರಲ್ಲೂ ಹೀಗೆ ಒಂದು ಹೊಸ ಪ್ರಯೋಗ ನನ್ನ ಹೊಟ್ಟೆ ಮೇಲೆ ನಡೀತು. ಹೊಸ ರುಚಿ ಅಂತ ಒಂದು ಬಣ್ಣ ಬಣ್ಣದ ತಿಂಡಿ ಮಾಡಿದ್ದಳು ನನ್ನ ಮಮತೆಯ ಮಡದಿ. ತಿಂಡಿಯ ಮೇಲೆ ಒಂದು ನಿಂಬೆ ಹಣ್ಣಿನ ಹೋಳು, ಸವತೆ ಹೋಳು, ಮತ್ತು ಗಜ್ಜರಿ piece ಗಳು ಸಹ ಇದ್ದವು. &#8220;ನವರತ್ನ ಕುರ್ಮಾ ಚೆನ್ನಾಗಿದೆ &#8221; ಎಂದೆನು. ರೋಟಿ ಅಥವಾ ಚಪಾತಿ ಇದ್ದರೆ ಕೊಡು ಎನ್ದೆನು. ಸಿಟ್ಟಿನಿಂದ &#8220;ನಾನು ಪಾಯಸ ಮಾಡಿದ್ದು&#8221; ಎಂದು ಮುಖ ತಿರುಚಿದಳು. ಮತ್ತೆ ಇದೇನೆ ನೆಂಚಿಕೊಳ್ಳಲು ನಿಂಬೆ, ಸವತೆ, ಗಜ್ಜರಿ piece ಗಳು ಏಕೆ?. ಎಂದಾಗ ಓ ಅದಾ ಅದು ಹಾಗೆ ಡಿಶ್ ಚೆನ್ನಾಗೆ ಕಾಣಲೆಂದು ಇಟ್ಟಿದ್ದು ಅದನ್ನೇ ನೆಂಚಿಕೊಂಡಿರ ಎಂದಳು. ಮರುದಿನ ಹೊಟ್ಟೆಯಲ್ಲಿರೋ ಮೂಳೆಗಳು ಸಡಿಲವಾಗಿಬಿಟ್ಟಿದ್ದವು.</p>
<p>ಈಗ ಅವಳಿಗೆ ಹೊಸ Testing Engineer ಸಿಕ್ಕಿದ್ದಾನೆ, ಅದಕ್ಕೆ ಇರಬೇಕು ನನ್ನ ಮಗ ಕನ್ಫ್ಯೂಸ್ ಆಗಿ ಅವಳು ಮಾಡಿದ Program( ಹೊಸ ರುಚಿಯನ್ನು) ನ್ನು Automatic testing ಮಾಡಿದ್ದಾನೆ(ತಲೆಯಿಂದ ತಿನ್ನಲು ಪ್ರಯತ್ನಿಸಿದ್ದಾನೆ).<br />
ಏನೇ ಆಗಲಿ&#8230; ನಿಜವಾಗ್ಲೂ ಮೊದಲು ನನ್ನ ದೇಹದಲ್ಲಿ ಇದ್ದದ್ದು ಎಲವುಗಳು ಮಾತ್ರ, ಈಗ ಖಂಡವು ಇದೆ ಮಾಂಸವು ಇದೆ. ಇದು ನನ್ನ ಮಡದಿಯ ಹೊಸ ರುಚಿಯ Missile ಪ್ರಯೋಗದಿಂದಲೇ ಆಗಿರಬೇಕು.</p>
<p>ಮರುದಿನ ಮಾರುತಿ ಮಂದಿರಕ್ಕೆ ಹೋಗಿ ನನ್ನ ಮಡದಿಯ ಕಂಗ್ಲಿಷ್ ಅಲ್ಲಾ..ಸಾರೀ(Sorry) ಇಂಗ್ಲಿಷ್ ಸರಿ ಮಾಡೆಂದು ಬೇಡಿಕೊಂಡೆನು.</p>
]]></content:encoded>
			<wfw:commentRss>http://samarasa.net/samarasa/?feed=rss2&amp;p=962</wfw:commentRss>
		<slash:comments>0</slash:comments>
		</item>
		<item>
		<title>ಏಳು ಬಣ್ಣ ಸೇರಿ ಬಿಳಿ ಬಣ್ಣವಾಯಿತು&#8230;.</title>
		<link>http://samarasa.net/samarasa/?p=959</link>
		<comments>http://samarasa.net/samarasa/?p=959#comments</comments>
		<pubDate>Tue, 27 Jul 2010 04:37:33 +0000</pubDate>
		<dc:creator>gopaljsr</dc:creator>
				<category><![CDATA[ಹಾಸ್ಯ]]></category>

		<guid isPermaLink="false">http://samarasa.net/samarasa/?p=959</guid>
		<description><![CDATA[
&#8220;ಕಟ್&#8230; ಕಟ್ &#8230;&#8221; ಸ್ವಲ್ಪ ಸಮಯದ ನಂತರ ಮತ್ತೆ ಅದೇ &#8220;ಕಟ್ ಕಟ್&#8221;. ನನ್ನ ಹೆಂಡತಿ ಗೊಣಗುತ್ತ ಎದ್ದು ಬಾಗಿಲು ತೆರೆದಳು. ಒಂದು ಹುಡುಗಿಯ ಧ್ವನಿ. ಇನ್ನೂ ನಿದ್ದೆಯಲ್ಲಿ ಇದ್ದವ. ಜಿಗಿದು ಕುಳಿತು. ಯಾರೇ ಅದು ಎಂದು ಕೇಳಿದೆ. ಅದೇ ಪಕ್ಕದ ಮನೆ ಪ್ರಿಯ. ಏನಂತೆ ಅವಳಿಗೆ. ಹಾಲಿನವನು ಬಂದರೆ, ನಾನು ಒಂದು ವಾರ ಮನೆಯಲ್ಲಿ ಇರಲ್ಲ ಊರಿಗೆ ಹೊರಟಿದ್ದೇನೆ ಎಂದು ಹೇಳಿ ಹೋದಳು. ಅಯ್ಯೋ ಪಾಪಿ ನಿದ್ದೆ.. ನಿದ್ದೆ.. ಎಂದು ಸಾಯುತ್ತಿ. ನೀನೆ ಹೋಗಿ ಬಾಗಿಲು [...]]]></description>
			<content:encoded><![CDATA[<div>
<p>&#8220;ಕಟ್&#8230; ಕಟ್ &#8230;&#8221; ಸ್ವಲ್ಪ ಸಮಯದ ನಂತರ ಮತ್ತೆ ಅದೇ &#8220;ಕಟ್ ಕಟ್&#8221;. ನನ್ನ ಹೆಂಡತಿ ಗೊಣಗುತ್ತ ಎದ್ದು ಬಾಗಿಲು ತೆರೆದಳು. ಒಂದು ಹುಡುಗಿಯ ಧ್ವನಿ. ಇನ್ನೂ ನಿದ್ದೆಯಲ್ಲಿ ಇದ್ದವ. ಜಿಗಿದು ಕುಳಿತು. ಯಾರೇ ಅದು ಎಂದು ಕೇಳಿದೆ. ಅದೇ ಪಕ್ಕದ ಮನೆ ಪ್ರಿಯ. ಏನಂತೆ ಅವಳಿಗೆ. ಹಾಲಿನವನು ಬಂದರೆ, ನಾನು ಒಂದು ವಾರ ಮನೆಯಲ್ಲಿ ಇರಲ್ಲ ಊರಿಗೆ ಹೊರಟಿದ್ದೇನೆ ಎಂದು ಹೇಳಿ ಹೋದಳು. ಅಯ್ಯೋ ಪಾಪಿ ನಿದ್ದೆ.. ನಿದ್ದೆ.. ಎಂದು ಸಾಯುತ್ತಿ. ನೀನೆ ಹೋಗಿ ಬಾಗಿಲು ತೆಗೆದಿದ್ದರೆ? ಎಂದು ಮನದೊಳಗೆ ನನ್ನನ್ನು ಬೈದು ಕೊಂಡೆ. ನನ್ನ ಮಡದಿ ಮುಖ ತೊಳೆಯಲು ಬಾತ್ ರೂಮ್ ಹೋಗುತ್ತಿದ್ದಂತೆ ಮತ್ತೆ &#8220;ಕಟ್&#8230; ಕಟ್&#8230;. &#8221; ಶಬ್ದ. ನಾನು ಹೋಗಿ ಬಾಗಿಲು ತೆಗೆದೆ. ಮತ್ತೆ ಅವಳೇ ಪಕ್ಕದ ಮನೆ ಪ್ರಿಯ.ನನ್ನ ಖುಷಿಗೆ ಪಾರವೇ ಇರಲಿಲ್ಲ. &#8220;ಅಂಕಲ್ ಪೇಪರ್ ನವನು ಬಂದರೆ ಒಂದು ವಾರ ಇರಲ್ಲ ಎಂದು ಹೇಳಿ&#8221;. ನಾನು ಮರೆತು ಬಿಟ್ಟೆ ಎಂದಳು. ಹೂವಿನ ಹಾಗೆ ಅರಳಿದ ನನ್ನ ಮುಖ ಅಂಕಲ್ ಶಬ್ದ ಕೇಳಿ ಬಾಡಿ ಬೆಂಡಾಗಿತ್ತು .ಆಯಿತು ಎಂದು ಹೇಳಿ ಬಾಗಿಲು ಮುಚ್ಚಿ ಕೊಂಡೆ.</p>
<p>ಯಾರು ಎಂದು ಕೇಳಿದಳು ನನ್ನ ಮಡದಿ. ಅದೇ ಪ್ರಿಯ ಪೇಪರ್ ನವನಿಗೆ ಹೇಳಬೇಕಂತೆ ಎಂದೆ. ಮನದಲ್ಲಿ ಮತ್ತೆ ಅದೇ ಯೋಚನೆ&#8230; ಅಂಕಲ್ &#8230;.?. ಹೋಗಿ ಕನ್ನಡಿ ಮುಂದೆ ನಿಂತೆ. ಪೂರ್ತಿಯಾಗಿ ಎಲ್ಲಡೆ ಕಣ್ಣು ಹಾಯಿಸಿ ನೋಡಿದೆ. ತಲೆ ಒಂದು ಬಿಟ್ಟು ಎಲ್ಲವೂ ಸರಿ ಇತ್ತು(ಕೂದಲು ಸರ್ ಮತ್ತೆ ನಿಮಾನ್ಸ್ ಗೆ ಹೇಳಿ ಬಿಟ್ಟೀರ? <img src='http://samarasa.net/samarasa/wp-includes/images/smilies/icon_smile.gif' alt=':)' class='wp-smiley' />  ). ಈ ಕೂದಲಿಗೆ ಏನು ಮಾಡುವದು ಎಂದು ಯೋಚಿಸುತ್ತಿದ್ದೆ. ಅಲ್ಲೇ ಬಿದ್ದ ಏಶಿಯನ್ ಕರಿ ಪೈಂಟ್ ನನ್ನ ನೋಡಿ &#8220;ಬಣ್ಣ ನನ್ನ ಒಲವಿನ ಬಣ್ಣ&#8221; ಎಂದು ಹಾಡುತ್ತಿದ್ದ ಹಾಗೇ ಅನ್ನಿಸಿತು. ಪೈಂಟ್ ಡಬ್ಬಿ ತೆಗೆದೆ ಸೀಮೆ ಎಣ್ಣೆ ವಾಸನೆ. ಒಯಿಕ&#8230; ಒಯಿಕ&#8230; ಎಂದು ಎರಡು ಸಾರಿ ಹೊಟ್ಟೆ ತೊಳಿಸುವ ಹಾಗೆ ಅನ್ನಿಸಿತು. ಎತ್ತಿ ಪಕ್ಕಕ್ಕೆ ಇಟ್ಟೆ. ನೀರು ಕಾಯಿಸಲು ಹೋದಾಗ ಇದ್ದಿಲು ಕಾಣಿಸಿತು. ಆ &#8220;ಯುರೇಕಾ&#8230;..&#8221; ಎಂದು ಕಿರುಚೋಣ ಎಂದು ಕೊಂಡೆ. ಮಗ ಇನ್ನೂ ಎದ್ದಿರಲಿಲ್ಲ. ಕಿರುಚಿದರೆ ಅಷ್ಟೇ ನನ್ನ ಮಡದಿ ಪರಚಿ ಬಿಡುತ್ತಾಳೆ ಎಂದು ಸುಮ್ಮನಾದೆ. ಆದರೆ ಇದನ್ನು ಹಚ್ಚಿಕೊಂಡರೆ ಮಳೆ ಬಂದರೆ ಕಷ್ಟ. ಮತ್ತೆ ಆ ಐಡಿಯಾ ಕೂಡ ತಲೆ ಕೆಳಗಾಯಿತು.</p>
<p>ಸ್ನಾನ ಮುಗಿಸಿ ಬಂದ ಕೂಡಲೇ &#8230; ಕಾಣಿಸಿದ್ದು ಕಾಡಿಗೆ ಡಬ್ಬಿ. ತೆಗೆದೆ ಅದು ಪೂರ್ತಿ ಖಾಲಿ ಆಗಿತ್ತು. ಮತ್ತೆ ನಿರಾಸೆಯ ಅಲೆಯಲ್ಲಿ ತೇಲುತ್ತ ತಿಂಡಿ ತಿಂದು ಆಫೀಸ್ ಹೋಗಲು ಅನುವಾದೆ. ಬೂಟ್ ಹಾಕಿಕೊಳ್ಳುವಾಗ ಕಾಣಿಸಿತು ನೋಡಿ. ನನ್ನ ಬೂಟ್ ಪಾಲಿಷ್. ಅದನ್ನೇ ಹಚ್ಚಿ ಕೊಳ್ಳೋಣ ಎಂದು ಬ್ರಶ್ ಎತ್ತಿದೆ. ನನ್ನ ಮಡದಿ ಒಳಗಿನಿಂದ ಬಂದು ರೀ ಹಾಲು ಕುಡಿದು ಹೋಗಿ ಎಂದಳು. ಮೊದಲೇ ಆ ಬಿಳಿ ಬಣ್ಣದ ಮೇಲೆ ಕೋಪವಿದ್ದಿದರಿಂದ. ಇವತ್ತು ನನಗೆ ಹಾಲುಬೇಡ ಕಣೆ ಎಂದೆ. ಏನು ಮಾಡುತ್ತಾ ಇದ್ದೀರ? ಎಂದು ಕೇಳಿದಳು ಮಡದಿ. ಏನು ಇಲ್ಲ, ಕಣೆ ಬೂಟ್ ಪಾಲಿಷ್ ಮಾಡುತ್ತಾ ಇದ್ದೇನೆ ಎಂದೆ. ಬೂಟ್ ತೆಗೆದು ಕೊಂಡೆ. ರೀ ನಾನು ಆಗಲೇ ಪಾಲಿಷ್ ಮಾಡಿ ಆಗಿದೆ ಎಂದಳು. ನೋಡು ಎಷ್ಟು ಕೊಳೆಯಾಗಿದೆ ಎಂದು ಪಾಲಿಷ್ ಮಾಡಲು ಅನುವಾದೆ. ನೋಡಿ ನನ್ನನ್ನು ಜೋರಾಗಿ ಕುಹಕವಾಡಿ ನಗಲು ಶುರು ಹಚ್ಚಿಕೊಂಡಳು. ನಾನು ಅರಿವಿಲ್ಲದೇ ಏಕೆ? ಎಂದು ದಬಾಯಿಸಿ ಕೇಳಿದಾಗ. ಮತ್ತೆ ಏನು ಬ್ರೌನ್ ಬೂಟ್ ಗೆ ಕರಿ ಪಾಲಿಷ್ ಎಂದು ಕುಹಕವಾಡಿದಳು. ನಾನು ಅದನ್ನು ನೋಡಿ ನನ್ನ ಬುದ್ದಿಗೆ ಮಲ.. ಮಲ.. ಮರಗಿ, ಅವಳು ಪಾಲಿಷ್ ಮಾಡಿದ ಕರಿ ಬೂಟ್ ಹಾಕಿಕೊಂಡು ಆಫೀಸ್ ಹೋಗಲು ಬಸ್ ಸ್ಟಾಪ್ಗೆ ಹೋದೆ. ಅಷ್ಟರಲ್ಲಿ ಒಬ್ಬ ಶಾಲೆಗೆ ಹೋಗುತ್ತಿದ್ದ ಒಂದು ಹುಡುಗಿ &#8220;ಅಂಕಲ್ ಟೈಮ್ ಎಷ್ಟು&#8221; ಎಂದು ಕೇಳಿದಳು. ಅವಳಿಗೆ ಟೈಮ್ ಹೇಳಿ ನಿಂತ ಎರಡೇ ನಿಮಿಷದಲ್ಲಿ ಬಸ್ ಬಂತು.</p>
<p>ಬಸ್ನಲ್ಲಿ ತುಂಬಾ ಜನ ಜಂಗುಳಿ ಇತ್ತು. ಮುಂದೆ ಹೋಗಿ ನಿಂತೆ. ಅಷ್ಟರಲ್ಲಿ ಒಬ್ಬ ಹುಡುಗ ಅಂಕಲ್ ನೀವು ಕುಳಿತು ಕೊಳ್ಳಿ ಎಂದು ತನ್ನ ಸೀಟ್ ನನಗೆ ಬಿಟ್ಟು ಕೊಟ್ಟ. ಕಡೆಗೆ ಶತಾಯುಗತಾಯ ಈ ಬಿಳಿ ಕೂದಲಿಗೆ ಏನಾದರೂ ಪರಿಹಾರ ಹುಡುಕಲೆ ಬೇಕು ಎಂದು ಆಫೀಸ್ ಹೋಗಿ ರಜೆ ಹಾಕಿ ಡಾಕ್ಟರ್ ಹುಡುಕಲು ಹೊರಟೆ. ಹೋದ ಕೂಡಲೇ ಸಿಗಬೇಕಲ್ಲ. ಒಂದೆರಡು ತಾಸು ತಿರುಗಿದ ಮೇಲೆ ಒಬ್ಬ ಡಾಕ್ಟರ್ ಕ್ಲಿನಿಕ್ ಸಿಕ್ಕಿತು. ಡಾಕ್ಟರ್ ಹೆಸರು ಕರಿಯಪ್ಪ. ತಕ್ಕ ಹೆಸರು ಎಂದು ಅಂದು ಕೊಂಡು ಕುಳಿತೆ. ಡಾಕ್ಟರ್ ಬಂದರು. ಆದರೆ ಡಾಕ್ಟರ್ ಕೂದಲು ಮಾತ್ರ ಪೂರ್ತಿ ಸಿಲ್ವರ್ ಕಲರ್. ಬೇಡ ಎಂದು ಎದ್ದು ಹೋಗಲು ಅನುವಾದೆ. ರೀ ಒಳಗೆ ಹೋಗಿ ಎಂದರು. ಏಕೆಂದರೆ ನಾನೇ ಮೊದಲನೆ ಪೇಶೆಂಟ್. ಮನಸ್ಸಿಲ್ಲದೆ ಒಳಗೆ ಹೋದೆ. ಏನು ಸಮಸ್ಯೆ ಎಂದರು ಡಾಕ್ಟರ್. ಸರ್ ನನ್ನ ತಲೆ &#8230;. ಎಂದೆ. ನಾನು ಸ್ಕಿನ್ ಸ್ಪೆಶಲಿಸ್ಟ್. ನಿಮ್ಮ ತಲೆ ನೋಡೋಕೆ ಬೇಕಾದರೆ ನಿಮಾನ್ಸ್ ಗೆ ಹೋಗಿ ಎಂದರು. ಸರ್ ಅದು ನನ್ನ ತಲೆಯಲ್ಲಿ ತುಂಬಾ ಬಿಳಿ ಕೂದಲು ಏನಾದರೂ ಔಷಧಿ ಕೊಟ್ಟು ಕರಿ ಮಾಡಿ ಎಂದೆ. ಸರ್ ನಿಮಗೆ ಬೇಕಾಗೋದು ಹಜಾಮತಿ ಅಂಗಡಿ. ಕಾರ್ನರ್ ಬಳಿ ಇದೆ ನೋಡಿ ಎಂದರು. ಸರ್ ನಾನು ಮೊದಲು ಅಲ್ಲೇ ಹೇರ್ ಡೈ ಮಾಡಿಸುತ್ತಾ ಇದ್ದೇ. ಆಗ ನನ್ನ ಕೂದಲು ಎರಡೋ ಮೂರೋ ಬಿಳಿ ಇದ್ದವು ಈಗ ನೋಡಿ ಎಂದೆ. ನನ್ನದು ಅದೇ ಕತೆ ಮಹಾರಾಯ ಎಂದರು ಡಾಕ್ಟರ್. ನಾನು ನಿಮಗೆ ಇನ್ನೊಬ್ಬ ಡಾಕ್ಟರ್ ಅಡ್ರೆಸ್ ಕೂಡುತ್ತೇನೆ. ಅವರು ನಾಟಿ ಔಷಧಿ ಕೊಡುತ್ತಾರೆ ಹೋಗಿ ಎಂದು ಹೇಳಿದರು.</p>
<p>ಆ ನಾಟಿ ಔಷಧಿ ಡಾಕ್ಟರ್ ಅಡ್ರೆಸ್ ಹುಡುಕಿ&#8230; ಹುಡುಕಿ&#8230; ಅರ್ಧ ಬೆಂಗಳೂರು ತಿರುಗಿದ್ದೆ. ಏಕೆಂದರೆ ಆ ಆಸಾಮಿ ತನ್ನ ಔಷಧಿ ಅಂಗಡಿಯನ್ನು ಒಂದು ಜಾಗದಲ್ಲಿ ಇಡುವದಿಲ್ಲ ಎಂದು ಎಲ್ಲರೂ ಹೇಳಿದರು. ಕಡೆಗೆ ಮನೆಗೆ ಹೋಗುವ ಮನಸಿಲ್ಲದೇ ಕಡೆಯ ಪ್ರಯತ್ನ ಎಂದು ಒಬ್ಬರು ಹೇಳಿದ ಅಡ್ರೆಸ್ ಬಳಿ ಹೋದೆ. ಆಸಾಮಿ ಸಿಕ್ಕೇ ಬಿಟ್ಟ. ಸರ್ &#8230; ಎಂದು ಒಳಗೆ ಹೋದ ಕೂಡಲೇ ನಿಮ್ಮ ಸಮಸ್ಯೆ ಏನು ಎಂದು ಕೇಳದೇ. ಒಂದಿಷ್ಟ ಎಣ್ಣೆ ಕೈಗೆ ಕೊಟ್ಟ. ಸರ್ ಇದು ಏನು?. ಎಂದೆ. ನಿಮ್ಮ ತಲೆ ನೋಡಿ ಗೊತ್ತಾಗುತ್ತೆ?. ನೀವು ಏತಕ್ಕೆ ಬಂದಿದ್ದೀರಿ ಎಂದ. ಸರ್ ನೀವು ದೇವರು ಎಂದು ಹೇಳಿ. ಹೇಗಾದರೂ ಮಾಡಿ ಈ ಬಿಳಿ ಕೂದಲಿಗೆ ಅಂತ್ಯ ಕಾಣಿಸಿ ಎಂದೆ. ಡಾಕ್ಟರ್ ತಲೆ ಕೆರೆದು ಕೊಳ್ಳಲು ಶುರು ಮಾಡಿದರು. ಪಾಪ ಏನೋ ಸಮಾಧಾನ ಆಗಲಿಲ್ಲ ಅಂತ ಕಾಣುತ್ತೆ. ನೋಡ.. ನೋಡುತ್ತಲೇ.. ವೀಗ್ ತೆಗೆದು ಕೆರೆದುಕೊಂಡರು. ನಾನು ಘಾಬರಿ. ಏನು ಹೆದರ ಬೇಡಿ ಎಂದು ಹೇಳಿದರು. ಕೂದಲು ನನಗೆ ಹುಟ್ಟಾ ಇಲ್ಲ ಎಂದರು. ಅದಕ್ಕೆ ಇರಬೇಕು ಇಷ್ಟು ಜಾಣ ಡಾಕ್ಟರ್ ಎಂದು ಮನದಲ್ಲೇ ಅಂದು ಕೊಳ್ಳುತ್ತಿದ್ದಾಗ, ಒಬ್ಬ ವೀಗ್ ವ್ಯಾಪಾರ ಮಾಡುವ ಆಸಾಮಿ ಬಂದು, ಸರ್ ಎಷ್ಟು ವೀಗ್ ಕೊಡಲಿ ಎಂದು ಡಾಕ್ಟರ್ ನ್ನು ಕೇಳಿದ. ಮತ್ತೆ ಡಾಕ್ಟರ್ ನನಗೆ ಸಮಾಧಾನ ಮಾಡಿ ಅದು ನಿಮಗೆ ಅಲ್ಲ ಎಂದು ಹೇಳಿ. ನನಗೆ ಫೀಸ್ ಕೊಡಿ ಎಂದು ಹೇಳಿದರು. ಎಷ್ಟು ಎಂದು ಕೇಳಿದಾಗ. ಬರಿ ೨೦೦೦ ರೂಪಾಯಿ ಮಾತ್ರ ಎಂದರು.</p>
<p>ವಿಧಿ ಇಲ್ಲದೇ ಕೊಟ್ಟು ಮನೆಗೆ ಬಂದೆ. ದಿನವೂ ಔಷಧ ಲೇಪನ ಶುರು ಹಚ್ಚಿ ಕೊಂಡೆ. ನನ್ನ ಮಡದಿ ರೀ&#8230; ನಿಮ್ಮ ತಲೆ ವಾಸನೆ ಗೋಮೂತ್ರ ಹಾಗೆ ಬರುತ್ತೆ ಎಂದಳು. ಲೇ ಅದು ಫೇಮಸ್ ಡಾಕ್ಟರ್ ಕೊಟ್ಟ ಔಷಧಿ ಎಂದು ಹೇಳಿ ಸಮಾಧಾನ ಮಾಡಿದೆ. ಅಪ್ಪ ನೀನು ಹೊರಗೆ ಬಿದ್ದುಕೊ ಎಂದು ಮಗ ತಾಕಿತ ಮಾಡಿದ. ವಿಧಿ ಇಲ್ಲ ಎಂದು ಹೊರಗೆ ಮಲಗಿ ಕೊಂಡೆ. ಹತ್ತು ದಿನ ಹಾಗೆ ಲೇಪನ ಮಾಡಿದ್ದೆ ಮಾಡಿದ್ದು. ಮಡದಿ ಎಂದಳು ರೀ&#8230; ಮೇಹಂದಿ ಹಚ್ಚಿಕೊಳ್ಳಬಾರದೇ ಎಂದು ಹೇಳಿದರು ಕೇಳಲಿಲ್ಲ . ಒಂದು ತಿಂಗಳು ಆದರೂ ಒಂದು ಕೂದಲು ಕರಿ ಆಗಲಿಲ್ಲ.</p>
<p>ಕಡೆಗೆ ಒಂದು ದಿನ ನನ್ನ ಗೆಳೆಯ ಕೇಶವ್ ಕುಲ್ಕರ್ಣಿ ಕರೆ ಮಾಡಿದ್ದ. ನನ್ನ ಸಮಸ್ಯೆ ಹೇಳಿದೆ. ಅವನು ನೋಡು ಗೋಪಿ ದಿನಾಲೂ ರಾಗಿ ಹಿಟ್ಟು ಹಚ್ಚು ಎಂದು ಹೇಳಿದ. ಕಡೆಗೆ ದಿನವೂ ರಾಗಿ ಹಿಟ್ಟು. ಒಂದು ದಿನ ರಾಗಿ ಹಿಟ್ಟು ಹಚ್ಚಿ ಮಲಗಿ ಕೊಂಡಾಗ. ತಲೆಯಲ್ಲ ಕೆರೆತ ಮತ್ತು ಉರಿ ಎದ್ದು ನೋಡುತ್ತೇನೆ. ತಲೆ ತುಂಬಾ ಇರುವೆ. ನನ್ನ ಮಡದಿ ಸಿಹಿ ತಿಂಡಿಗೆ ಮಾಡಿದ ಸಿಹಿ ರಾಗಿ ಬಾಳೆದು ಕೊಂಡಿದ್ದೆ.</p>
<p>ಮತ್ತೊಂದು ತಿಂಗಳು ಕಳೆಯಿತೇ ಹೊರತು. ಬಿಳಿ ಕೂದಲು ಕರಿ ಆಗಲಿಲ್ಲ. ಮತ್ತೆ ಅದೇ ನಾಟಿ ಡಾಕ್ಟರ್ ಹುಡುಕಿ ಹೋದೆ. ಮತ್ತೆ ಒಂದು ಸಾವಿರ ರೂಪಾಯಿ ಕೊಟ್ಟು ಮತ್ತೊಂದು ಔಷಧ ತಂದೆ. ಮತ್ತೆ ದಿನವೂ ಅದನ್ನು ಹಚ್ಚಿಕೊಂಡು ಮಲಗಿದೆ. ಒಂದೇ ತಿಂಗಳ ಪ್ರಯೋಗದ ನಂತರ ನನ್ನ ತಲೆಯಲ್ಲಿ ಎಲ್ಲ ಕೂದಲು ಕರಿ&#8230;. <img src='http://samarasa.net/samarasa/wp-includes/images/smilies/icon_smile.gif' alt=':-)' class='wp-smiley' />  ಆದರೆ ಇದ್ದ ಬಿಳಿ ಕೂದಲು ಎಲ್ಲವೂ ಬಿದ್ದು ಹೋಗಿದ್ದವು&#8230; <img src='http://samarasa.net/samarasa/wp-includes/images/smilies/icon_sad.gif' alt=':-(' class='wp-smiley' /> . ಈಗ ನನ್ನ ತಲೆ ನೋಡಿದರೆ ಬೆಂಗಳೂರಿನಿಂದ ಧಾರವಾಡದ ನಡುವೆ ಸಿಗುವ ಸ್ಟಾಪ್ ಗಳ ಹಾಗೆ ೨೦-೩೦ ಕಿಲೋ ಮೀಟರ್ ದೂರ..ದೂರ ಇವೆ.</p>
<p>ಈಗ ನಾನು ಯಾರಾದರೂ ಮತ್ತೆ ಕೂದಲು ಬರುವ ಹಾಗೇ ಮಾಡುವ ವೈದ್ಯರನ್ನು ಹುಡುಕುತ್ತಾ ಇದ್ದೇನೆ. ಬಿಳಿ ಕೂದಲು ಆದರೂ ಪರವಾಗಿಲ್ಲ. ಏಳು ಬಣ್ಣ ಸೇರಿ ತಾನೇ ಬಿಳಿ ಬಣ್ಣ ಆಗುವದು.</p>
</div>
]]></content:encoded>
			<wfw:commentRss>http://samarasa.net/samarasa/?feed=rss2&amp;p=959</wfw:commentRss>
		<slash:comments>3</slash:comments>
		</item>
		<item>
		<title>ಕರ್ನಾಟಕ ರಾಜಕೀಯ ವರ್ತಮಾನ ಮತ್ತು ಭವಿಷ್ಯ</title>
		<link>http://samarasa.net/samarasa/?p=956</link>
		<comments>http://samarasa.net/samarasa/?p=956#comments</comments>
		<pubDate>Mon, 26 Jul 2010 17:43:22 +0000</pubDate>
		<dc:creator>admin</dc:creator>
				<category><![CDATA[ಸಂಪಾದಕೀಯ]]></category>

		<guid isPermaLink="false">http://samarasa.net/samarasa/?p=956</guid>
		<description><![CDATA[ಎಲ್ಲಾ ರಾಜಕೀಯ ಪಕ್ಷದವರೂ ಭ್ರಷ್ಟರೇ, ಆದರೂ ರಾಜಕೀಯ ಸಂಘಟನೆಗೆ  ಜನರ ಬಗ್ಗೆ ಒಂದು ದೂರದೃಷ್ಟಿ ಇರಬೇಕು. ಕೇವಲ ಅಧಿಕಾರಕ್ಕಾಗಿ ಸಂಘಟನೆ ಮಾಡುವುದು ನಿಲ್ಲಬೇಕು. ಈ ಹಿನ್ನಲೆಯಲ್ಲಿ ರಾಜಕೀಯ ಪಕ್ಷಗಳು ತಮ್ಮಲ್ಲಿ ಕೆಲವು ಬದಲಾವಣೆ ಮಾಡಿಕೊಂಡರೆ ವ್ಯವಸ್ಥೆಯಲ್ಲಿ ಸುಧಾರಣೆ ಆಗಬಹುದು ಎಂದು ನಿರೀಕ್ಷೆಯನ್ನಾದರೂ ಇರಿಸಿಕೊಳ್ಳಬಹುದು ಅಲ್ಲವೇ?]]></description>
			<content:encoded><![CDATA[<p>ವಿಶೇಷ ಸಂಪಾದಕೀಯದ ಲೇಖಕರು: <strong>ವಿವೇಕ ಬೆಟ್ಕುಳಿ</strong>,  ಕುಮಟಾ</p>
<p>ಪ್ರಸ್ಥುತ ಕರ್ನಾಟಕದ ರಾಜಕೀಯ ಪುನ: ರಂಗೇರಿದೆ. ಕಾಂಗ್ರೇಸ್, ಬಿಜೆಪಿ, ಜನತಾದಳಗಳು ತಮ್ಮದೇ ಆದ ನಡವಳಿಕೆಯಿಂದ ಜನರಲ್ಲಿ ಚರ್ಚೆಗೊಳಪಡುತ್ತಿರುವುದು. ಈ ಸಂದರ್ಭದಲ್ಲಿ ರಾಜ್ಯದ ಜನರಲ್ಲಿ ರಾಜಕೀಯದ ಬಗ್ಗೆ ತಾತ್ಸಾರ ಉಂಟಾಗಿ ಎಲ್ಲರೂ ಕೊನೆಯಲ್ಲಿ ರಾಜಕೀಯವನ್ನು ಒಂದು ಮನರಂಜನೆಯನ್ನಾಗಿ ಮಾಡಿಕೊಂಡಿರುವುದು ಕಂಡು ಬರುತ್ತಿದೆ. ಮೌಲ್ಯಯುತ ರಾಜಕೀಯದ ಕೊಡುಗೆಯನ್ನು ನೀಡಿದ ಕರ್ನಾಟಕದ ಇಂದಿನ ರಾಜಕೀಯ ಸ್ಥಿತಿಯನ್ನು ಗಮನಿಸಿದರೇ ನಮ್ಮ ಸಮಾಜದ ಅಧ:ಪತನದ ಕುರುಹುಗಳು ಅಲ್ಲಿಂದಲ್ಲೇ ಕಂಡು ಬರುತ್ತಿವೆ. ಹಿಂದೆ ಬೇರೆ ರಾಜ್ಯದ ರಾಜಕೀಯದ ಸುದ್ದಿಯನ್ನು ಕಥೆಯಂತೆ ಕೇಳುತ್ತಿದ್ದ ಕರ್ನಾಟಕದ ಜನತೆ ಇಂದು ನಮ್ಮ ಎದುರಿಗೆ ರಾಜಕೀಯ ದೊಂಬರಾಟವನ್ನು ನೋಡುವ ಸ್ಥಿತಿ ಬಂದಿರುವುದು. ಈ ಸಂದರ್ಭದಲ್ಲಿ ಯಾರು ನಮ್ಮ ರಾಜ್ಯದಲ್ಲಿ ಹಿತವರು? ಎಂಬ ಪ್ರಶ್ನೇ ನಾವೇ ಹಾಕಿಕೊಂಡರೆ ಉತ್ತರ ಮತಹಾಕಿದ ನಾವೇ ಮೂರ್ಖರು ಎಂಬಂತೆ ಆಗಿರುವುದು. ಈ ಹಿನ್ನಲೆಯಲ್ಲಿ ಪ್ರಸ್ಥುತ ರಾಜಕೀಯ ಪಕ್ಷದ ಸ್ಥಿತಿಯನ್ನು ಈ ಕೆಳಗಿನಂತೆ ವಿಶ್ಲೇಷಿಸಲಾಗಿದೆ.<br />
<strong>ಬಿಜೆಪಿ</strong> : ದಕ್ಷಿಣ ಕರ್ನಾಟಕದಲ್ಲಿ ಮೊದಲ ಬಾರಿಗೆ ಆಡಳಿತಕ್ಕೆ ಬಂದಾಗ ಕರ್ನಾಟಕದ ಜನತೆ ಹೊಸತನತ ಕನಸು ಕಂಡಿತು. ಈ ಕನಸು ಒಂದು ವರ್ಷದೊಳಗೆ ಹುಸಿಮಾಡಿರುವ ಕೀರ್ತಿ ಆಡಳಿತ ಪಕ್ಷಕ್ಕೆ ಸಲ್ಲುತ್ತಿರುವುದು. ರೈತರ ಮೇಲೆ ಗೋಲಿಬಾರ, ಆಂತರಿಕ ಭಿನ್ನಮತ, ಗಣದಣಿಗಳ ಹಿಡಿತದಲ್ಲಿ ಸರ್ಕಾರ, ಹಾಲಪ್ಪ ಪ್ರಕರಣ, ರೇಣುಕಾಚಾರ್ಯ ಪ್ರಕರಣ, ಸಂಪಂಗಿ ಪ್ರಕರಣ , ಬೇಕಾಬಿಟ್ಟಿ ಅಧಿಕಾರಿಗಳ ವರ್ಗಾವಣೆ,  ಇವೆಲ್ಲವೂ ಆಡಳಿತಾರೂಢ ಬಿಜೆಪಿಯ ಮೇಲಿನ ನಂಬಿಕೆ ಕಡಿಮೆಯಾಗಲು ಮುಖ್ಯ ಕಾರಣವಾಗಿರುವುದು. ಅಧಿಕಾರ ಬರುವುದೇ ದುಡ್ಡು ಮಾಡಲಿಕ್ಕೆ ಎಂಬ ರೀತಿ ವರ್ತಿಸುತ್ತಿರುವ ಬಿಜೆಪಿಯ ನಾಯಕರು ದುಡ್ಡಿನಿಂದ ಏನನಾದರೂ ಸಾಧಿಸುವೆವು ಎಂಬ ಮದದಲ್ಲಿ ಇರುವರು. ಹಿಂದಿನಿಂದ ಬಿಜೆಪಿ ಪಕ್ಷಕ್ಕೆ ಇದ್ದ ಮೌಲ್ಯ, ತತ್ವ, ಆದರ್ಶ ಈ ಎಲ್ಲವೂ ಈಗ ಕೇವಲ ಒಂದು ಆದರ್ಶ ಪಕ್ಷದ ಸಂವಿಧಾನ ಮಾತ್ರ ಆಗಿರುವುದು. ಅಂತಹ ಯಾವುದೇ ನಡವಳಿಕೆ ಬಿಜೆಪಿಯಲ್ಲಿ ಇಂದು ಇರುವುದಿಲ್ಲ.  ಇಂದು ಬಿಜೆಪಿ  ಭ್ರಷ್ಟಾಚಾರದ ಜನರ ಪಕ್ಷವಾಗಿ ಮಾರ್ಪಾಡಾಗಿರುವುದು..</p>
<p><strong>ಕಾಂಗ್ರೆಸ್</strong>: ಅರ್ಧ ಶತಮಾನಗಳು ರಾಷ್ಟದಲ್ಲಿ ಆಡಳಿತ ನಡೆಸಿದರೂ, ಸಮುದ್ರಂತೆ ಇರುವ ಪಕ್ಷವಾದರೂ ಈ ಪಕ್ಷವನ್ನು ಬೇರೆ ರಾಜಕೀಯ ಪಕ್ಷದವರೇ ಇದನ್ನು ಮುನ್ನಡೆಸಬೇಕು.  ಕನಾಟಕದ ಕೆಪಿಸಿಸಿ ಅಧ್ಯಕ್ಷರು, ವಿರೋಧ ಪಕ್ಷದ ನಾಯಕರು ಇವರೆಲ್ಲರೂ ಮೂಲ ಜನತಾ ಪಕ್ಷದವರು. ಇವರು ಕಾಂಗ್ರೆಸ್ ಪಕ್ಷವನ್ನು ಮುನ್ನಡೆಸುವ ಸ್ಥಿತಿ ಬಂದಿರುವುದು ಎಂದರೆ ಈ ರಾಜಕೀಯ ಪಕ್ಷಕ್ಕೆ ಏನಾಗಿದೇ ಎಂದು ಹೇಳಬೇಕು. ಆಂತರಿಕ ಕಚ್ಚಾಟ, ಹುದ್ದೆಯ ಆಕಾಂಕ್ಷೆ, ನಿವೃತ್ತಿ ವಯಸ್ಸಾಗಿದ್ದರೂ ಇನ್ನೂ ಅಧಿಕಾರದ ಆಶೆ, ತೀರದ ಸಾಲು ಸಾಲು ನಾಯಕರ ದಂಡು, ಪ್ರತಿಯೊಂದಕ್ಕೂ ಹೈಕಮಾಂಡ ಎಂದು ಬಾಯಿಪಡಿದುಕೊಳ್ಳುವ ನಾಯಕರು ಈ ರೀತಿಯ ವಾತಾವರಣದಲ್ಲಿ ಕಾಂಗ್ರೆಸ್ ಎಂಬುದು ಹಳೆಯ ಹೊಸತನ ಇಲ್ಲದ ಸರ್ಕಸ್ ಕಂಪನಿಯಂತೆ ಆಗಿರುವುದು. ನೆರೆಗಾಗಿ ಸಂಗ್ರಹಿಸಿದ ದುಡ್ಡನ್ನು ಅನ್ಯ ಬಳಕೆಗೆ ವ್ಯಯಿಸಿರುವ ಪ್ರಕರಣ ಈ ಪಕ್ಷದ ಸಂಸ್ಕೃತಿಯನ್ನು ಬಿಂಬಿಸುವುದು.</p>
<p><strong>ಜೆಡಿಎಸ್</strong> : ರಾಜ್ಯದ ರಾಜಕೀಯದ ಪಾಠಶಾಲೆ. ಒಂದು ಹಂತದಲ್ಲಿ ನಾಯಕರನ್ನು ಬೆಳೆಸುವ ಕಾರ್ಯವನ್ನು ಮಾಡುತ್ತಿರುವ ಈ ಪಕ್ಷ ರಾಜ್ಯ ರಾಜಕೀಯದಲ್ಲಿ  ಏಕಪಾತ್ರ ಅಭಿನಯ ಮಾಡುವ ಸಾಮರ್ಥ್ಯ ಇರುವುದು ಇವರಿಗೆ ಮಾತ್ರ. ಅಧಿಕಾರವನ್ನು ಅನುಭವಿಸಿ ಯಾವಾಗ ಮಾತಿಗೆ ತಪ್ಪಿದರೋ ಅಂದೇ ಜೆಡಿಎಸ್ ಪಕ್ಷದ ವರ್ಚಸ್ಸು ಹೋಗಿಬಿಟ್ಟಿದೆ. ದುರಾಶೆಯಿಂದ ಕುಮಾರಸ್ವಾಮಿ ರಾಜ್ಯ ಬಿಟ್ಟು ರಾಷ್ಟದ ಕಡೆಗೆ ಹೆಚ್ಚೆ ಹಾಕಿರುವುದು, ನಾಯಕನಾಗಿ ರೇವಣ್ಣ ಬಂದಿರುವುದು, ಇನ್ನೂ ರಾಜ ರಾಜಕೀಯದಲ್ಲಿ ಹಸ್ತಕ್ಷೇಪ್ತ ಮಾಡುತ್ತಿರುವ ದೊಡ್ಡ ಗೌಡರು, ಈ ವಾತಾವರಣದಿಂದ  ಈ ಪಕ್ಷ ಅಂದರೆ ಏಕ ವ್ಯಕ್ತಿ ಕೃಪಾಪೋಷಿತ ನಾಟಕ ಮಂಡಳಿಯಾಗಿರುವುದು.</p>
<p>ರಾಜ್ಯದ ಪ್ರಮುಖ ರಾಜಕೀಯ ಪಕ್ಷಗಳು ಈ ರೀತಿಯಾಗಿದ್ದ ಮೇಲೆ ರಾಜ್ಯ ಹೇಗೆ ಸುಧಾರಣೆ ಆಗಲು ಸಾಧ್ಯ? ಯಾರು ಹಿತವರು ಈ ಮೂವರೊಳಗೆ? ಕಳ್ಳರಲ್ಲಿ  ಜನಪರ ಕಾಳಜಿ ಇರುವ ಕಳ್ಳರು  ಯಾರು ಎಂಬುದರ ಬಗ್ಗೆ ಚರ್ಚಿಸಲು ಇದು ಒಳ್ಳೆಯ ಸಂದರ್ಭವಾಗಿರುವದು. ಈ ಹಿನ್ನಲೆಯಲ್ಲಿ ಮೂರು ಪ್ರಮುಖ ರಾಜಕೀಯ ಪಕ್ಷಗಳು ಕೆಲವೊಂದು ಬದಲಾವಣೆಯನ್ನು ತಮ್ಮಲ್ಲಿ ಮಾಡಿಕೊಂಡರೆ ಬರುವ ಚುನಾವಣೆ ಸಂದರ್ಭದಲ್ಲಿ ಜನರತ್ತ ಹೋಗಲು ನಿಮ್ಮಲ್ಲಿ ನೈತಿಕತೆ ಇರುವುದು.</p>
<p><strong>ಬಿಜೆಪಿ</strong> :<br />
* ಆರೋಪ ಎದುರಿಸುತ್ತಿರುವ ಬಳ್ಳಾರಿ ಮಂತ್ರಿಗಳನ್ನು, ಸಂಪಂಗಿ,ಹಾಲಪ್ಪ, ರೇಣುಕಾಚಾರ್ಯ ಇವರನ್ನು ಪಕ್ಷದಿಂದ ಉಚ್ಚಾಟಿಸಿ.<br />
* ಮಾನ್ಯ ಮುಖ್ಯಮಂತ್ರಿಗಳು ತಿಂಗಳಲ್ಲಿ ೧೦ ದಿನ ಉತ್ತರಕರ್ನಾಟಕ ಜಿಲ್ಲೆಯಲ್ಲಿ ಕಾಲ ಕಳೆಯಿರಿ.<br />
* ಮುಖ್ಯವಾಗಿ ಇರುವ ಅಧಿಕಾರ ಅವಧಿಯಲ್ಲಿ  ಶುದ್ದ ಕುಡಿಯುವ ನೀರು, ವಸತಿ, ಸಮರ್ಪಕ ಆರೋಗ್ಯ ಸೇವೆ ನೀಡಲು ಮುಂದಾಗಿ.<br />
* ಬೇರೆ ಪಕ್ಷದಿಂದ ಬಂದವರನ್ನು ಎಷ್ಟು ಬೇಕೋ ಅಷ್ಟಕೇ ಇರಿಸಿಕೊಳ್ಳಿ.<br />
* ಮಠ,ದೇವಸ್ಥಾನ ಬಿಟ್ಟು ಬಡವರ ಮನೆ, ಮಕ್ಕಳ ಶಿಕ್ಷಣದ ಬಗ್ಗೆ ಗಮನ ನೀಡಿ.<br />
* ಹಿಂದುತ್ವ ಪ್ರತಿಪಾದಿಸುವ ಮೊದಲು ಕರ್ನಾಟಕದ ಎಲ್ಲಾ ದೇಗುಲದಲ್ಲಿ ಸಹಪಂಕ್ತಿ ಭೋಜನಕ್ಕೆ ಚಾಲನೆ ನೀಡಿರಿ.</p>
<p><strong>ಕಾಂಗ್ರೆಸ್ </strong>:<br />
* ೬೫ ದಾಟಿದ ಎಲ್ಲಾ ನಾಯಕರಿಗೆ ನಿವೃತ್ತರಾಗಲೂ ತಿಳಿಸಿರಿ.<br />
* ಕೃಷ್ಣ ಬೈರೇಗೌಡ, ದಿನೇಶ ಗುಂಡೂರಾವ್, ಮಹಿಮಾ ಪಟೇಲ್ ಇವರಂತಹ ಯುವಕರಿಗೆ ನಾಯಕತ್ವ ಬಿಟ್ಟು ಕೊಡಿ. ವಿಶ್ವನಾಥ, ವೀರಪ್ಪ ಮೋಯಿಲಿ ಇವರಂತವರು ಮಾರ್ಗದರ್ಶನ ನೀಡಿರಿ.<br />
* ಆಂತರಿಕ ಭಿನ್ನಮತ ಬಿಟ್ಟು ದೂರದೃಷ್ಠಿಯನ್ನು ಇರಿಸಿಕೊಂಡು ಕಾರ್ಯನಿರ್ವಹಿಸಿರಿ.<br />
* ಸರ್ಕಾರದ ಜನಪರ ಕಾರ್ಯಗಳಿಗೆ ಸ್ಪಂದಿಸುತ್ತಾ ರಚನಾತ್ಮಕ ವಿರೋಧ ಪಕ್ಷವಾಗಿ ಕಾರ್ಯನಿರ್ವಹಿಸಿರಿ.<br />
* ಎಲ್ಲಾ ನಾಯಕರ ಸಂಪತ್ತನ್ನು ಘೋಷಣೆ ಮಾಡಿ ಉಳಿದ ರಾಜಕೀಯ ಪಕ್ಷದವರಿಗೆ ಮಾದರಿಯಾಗಿರಿ.</p>
<p><strong>ಜೆಡಿಎಸ್</strong> :<br />
* ದೇವೇಗೌಡರು ರಾಜ್ಯ ರಾಜಕೀಯದಿಂದ ನಿವೃತ್ತರಾಗಿ ಸಂಪೂರ್ಣ ಜನಬ್ದಾರಿ ಕುಮಾರಸ್ವಾಮಿಗೆ ವಹಿಸಿರಿ.<br />
* ಕುಮಾರಸ್ವಾಮಿಯವರು ಉತ್ತರಕರ್ನಾಟಕ ಜಿಲ್ಲೆಯಲ್ಲಿ ಹಳ್ಳಿ ಹಳ್ಳಿಗೆ ಹೋಗಿ ಒಂದು ವರ್ಷ ಪಕ್ಷ ಸಂಘಟನೆ ಮಾಡಿರಿ.<br />
* ಸಾಮಾನ್ಯ ವ್ಯಕ್ತಿಯನ್ನು ನಾಯಕನನ್ನಾಗಿ ಮಾಡಲು ಸಾಮರ್ಥ್ಯ ಇರುವುದರಿಂದ ಅಂತಹ ವ್ಯಕ್ತಿಗಳ ಹುಡುಕಾಟ ನಿಮ್ಮ ಸಂಘಟನೆಯ ಒಂದು ಭಾಗವಾಗಿರಲಿ.<br />
* ಬೇರೆ ಪಕ್ಷದವರ ಬಗ್ಗೆ ಟೀಕೆ ಮಾಡುವುದಕ್ಕಿಂತ ಜನರ ಸಮಸ್ಯೆಗಳನ್ನು ಅರ್ಥಪೂರ್ಣವಾಗಿ ಮಾಧ್ಯಮನ ಮೇಲೆ ಬಿಂಬಿಸಲು ಪ್ರಯತ್ನಿಸಿ. ಅದಕ್ಕಾಗಿಯೇ ಪಕ್ಷದ ಒಂದು ಗುಂಪನ್ನು ರಚಿಸಿ. ದತ್ತ, ನಾಣಯ್ಯ ಅವರಂತವರು ಆ ಗುಂಪಿನಲ್ಲಿ ಇರಲಿ.<br />
* ಅಪ್ಪ, ಅಣ್ಣ, ಜಮೀರಂತಹ ಸ್ನೇಹಿತರು ಇವರನ್ನು ಒಂದು ಹಂತದ ವರೆಗೆ ಮಾತ್ರ ಸೇರಿಸಿ ನಿಮ್ಮ  ಉದ್ದೇಶ ಅಧಿಕಾರ ಸಿಗುವುದೋ ಬಿಡುವುದೋ ನಂತರ ಒಂದು ಒಳ್ಳೆ ಜನಪರ ರಾಜಕೀಯ ಸಂಘಟನೆಯನ್ನು ಹುಟ್ಟುಹಾಕುವುದಾಗಿರಲಿ.</p>
<p>ಎಲ್ಲಾ ರಾಜಕೀಯ ಪಕ್ಷದವರೂ ಭ್ರಷ್ಟರೇ, ಆದರೂ ರಾಜಕೀಯ ಸಂಘಟನೆಗೆ  ಜನರ ಬಗ್ಗೆ ಒಂದು ದೂರದೃಷ್ಟಿ ಇರಬೇಕು. ಕೇವಲ ಅಧಿಕಾರಕ್ಕಾಗಿ ಸಂಘಟನೆ ಮಾಡುವುದು ನಿಲ್ಲಬೇಕು. ಈ ಹಿನ್ನಲೆಯಲ್ಲಿ ರಾಜಕೀಯ ಪಕ್ಷಗಳು ತಮ್ಮಲ್ಲಿ ಕೆಲವು ಬದಲಾವಣೆ ಮಾಡಿಕೊಂಡರೆ ವ್ಯವಸ್ಥೆಯಲ್ಲಿ ಸುಧಾರಣೆ ಆಗಬಹುದು ಎಂದು ನಿರೀಕ್ಷೆಯನ್ನಾದರೂ ಇರಿಸಿಕೊಳ್ಳಬಹುದು ಅಲ್ಲವೇ?</p>
<p>ವಿವೇಕ ಬೆಟ್ಕುಳಿ,  ಕುಮಟಾ<br />
vivekpy@gmail.com</p>
]]></content:encoded>
			<wfw:commentRss>http://samarasa.net/samarasa/?feed=rss2&amp;p=956</wfw:commentRss>
		<slash:comments>2</slash:comments>
		</item>
		<item>
		<title>ಸಾಹಿತ್ಯ ಚಿಂತಕ ಕಾನಾಶ್ರೀ &#8220;ಅಭಿನಂದನಾ ಗ್ರಂಥ ಅಕ್ಷಯ&#8221; ಬಿಡುಗಡೆ</title>
		<link>http://samarasa.net/samarasa/?p=952</link>
		<comments>http://samarasa.net/samarasa/?p=952#comments</comments>
		<pubDate>Fri, 23 Jul 2010 13:11:18 +0000</pubDate>
		<dc:creator>admin</dc:creator>
				<category><![CDATA[ಕಾರ್ಯಕ್ರಮಗಳು]]></category>

		<guid isPermaLink="false">http://samarasa.net/samarasa/?p=952</guid>
		<description><![CDATA[ಹೆಚ್ಚಿನ ವಿವರಕ್ಕೆ ಕೆಳಗಿನ ಆಹ್ವಾನ ಪತ್ರಿಕೆ ನೋಡಿ

]]></description>
			<content:encoded><![CDATA[<p>ಹೆಚ್ಚಿನ ವಿವರಕ್ಕೆ ಕೆಳಗಿನ ಆಹ್ವಾನ ಪತ್ರಿಕೆ ನೋಡಿ</p>
<p><a href="http://samarasa.net/samarasa/wp-content/uploads/2010/07/ka-naa-shree1.jpg"><img class="aligncenter size-full wp-image-954" title="ka naa shree" src="http://samarasa.net/samarasa/wp-content/uploads/2010/07/ka-naa-shree1.jpg" alt="" width="369" height="544" /></a></p>
]]></content:encoded>
			<wfw:commentRss>http://samarasa.net/samarasa/?feed=rss2&amp;p=952</wfw:commentRss>
		<slash:comments>0</slash:comments>
		</item>
		<item>
		<title>ಪುಸ್ತಕ ಪರಿಚಯ : ತುಂಗಾ</title>
		<link>http://samarasa.net/samarasa/?p=947</link>
		<comments>http://samarasa.net/samarasa/?p=947#comments</comments>
		<pubDate>Fri, 23 Jul 2010 12:48:13 +0000</pubDate>
		<dc:creator>ಗುರುವೆ</dc:creator>
				<category><![CDATA[ಪುಸ್ತಕ ಪ್ರೀತಿ]]></category>
		<category><![CDATA[ಸಾಹಿತ್ಯ]]></category>

		<guid isPermaLink="false">http://samarasa.net/samarasa/?p=947</guid>
		<description><![CDATA[ತುಂಗಾ ಎಂಬ ತುಂಟ ಮಗು, ಸರ್ಕಾರಿ ಶಾಲೆಯಿಂದ ಹೊರದೂಡಲ್ಪಡುತ್ತಾಳೆ. ಸರ್ಕಾರಿ ಶಾಲೆಯ ಮೇಷ್ಟ್ರುಗಳ ವರ್ತನೆಯ ವೈಖರಿ, ನೀವು ಸರ್ಕಾರಿ ಶಾಲೆಗಳಲ್ಲಿ ಓದಿದ್ದವರಾದರೆ ಕಣ್ಣಿಗೆ ಕಟ್ಟಿ ಬರುತ್ತದೆ. ಈ ಹಂತದಲ್ಲಿ ಬರುವ ತುಂಗಾಳ ಚಿತ್ರಣ, ಅವಳ ಮುಗ್ಧತೆ ಬಹಳ ಉತ್ತಮವಾಗಿ ಮೂಡಿ ಬಂದಿದೆ.]]></description>
			<content:encoded><![CDATA[<p>ಎಷ್ಟೋ ಮಂದಿಗೆ ತಾವು ಪಡೆದ ಶಿಕ್ಷಣದ ಬಗ್ಗೆ, ತಮ್ಮ ಮಕ್ಕಳು ಪಡೆಯುತ್ತಿರುವ ಶಿಕ್ಷಣದ ಬಗ್ಗೆ ಅಸಮಧಾನ ಇದೆ. ಆದರೆ ಏನೂ ಮಾಡಲಾರದ ಪರಿಸ್ಥಿತಿ. ಅಬ್ಬಬ್ಬಾ ಎಂದರೆ ಪೋಷಕರು ತಮ್ಮ ಮಕ್ಕಳ್ಳನ್ನು ದುಬಾರಿ ಶಿಕ್ಷಣವನ್ನು ಪ್ರಖ್ಯಾತಗೊಳಿಸಿರುವ ಅಂತರಾಷ್ಟ್ರೀಯ/ರಾಷ್ಟ್ರೀಯ ಇತ್ಯಾದಿ ಹಣೆಪಟ್ಟಿಯುಳ್ಳ ಶಾಲೆಗಳಿಗೆ ಕಳುಹಿಸಿ ಸಮಾಧಾನ ತಂದುಕೊಳ್ಳುವುದು ಈಗ ಕೆಲವರಿಗೆ ರೂಢಿ, ಕೆಲವರಿಗೆ ಪ್ರತಿಷ್ಟೆ ಮತ್ತೂ ಕೆಲವರಿಗೆ ಅನಿವಾರ್ಯ. ನಮ್ಮ ಸರ್ಕಾರಿ ಶಾಲೆಗಳಿಗೆ ಹೋಲಿಸಿದಾಗ ಈ ದುಬಾರಿ ಶಾಲೆಗಳಲ್ಲಿ ಮಕ್ಕಳು ತೆತ್ತುವ ಶುಲ್ಕಕ್ಕೆ ತಕ್ಕಂತೆ ವಿವಿಧ ಕ್ಷೇತ್ರಗಳಲ್ಲಿ ಪರಿಣಿತಿ ಪಡೆಯುವ ಅಪರಿಮಿತ ಅವಕಾಶಗಳಿದ್ದಾಗ್ಯೂ ಕೂಡ, ಮಕ್ಕಳು ಮತ್ತದೇ ಅನಗತ್ಯ ಸ್ಪರ್ಧೆಗಿಳಿದು ಓದುವ, ಕಲಿಯುವುದು ಒಂದು ಆನಂದ ತರುವ ಆಟವಾಗುವುದರ ಬದಲು ಒಂದು ಸ್ಪರ್ದೆಯಾಗಿ ಹೋಗಿಬಿಡುತ್ತದೆ. ಕಲಿಕೆಗಿಂತ, ಗಳಿಸಿವ ಅಂಕಗಳು ಮೇಲುಗೈ ಪಡೆಯುತ್ತದೆ. ಮಕ್ಕಳು ತಮ್ಮ ಮುಗ್ಧತೆಯನ್ನು ಅಗತ್ಯಕ್ಕೆ ಮೊದಲೇ ಕಳೆದುಕೊಂಡುಬಿಡುತ್ತಾರೆ. ಇದಕ್ಕೆ ಶಾಲೆಗಳನ್ನಷ್ಟೇ ದೂರಲಾಗದೆ, ಕೆಲವೊಮ್ಮೆ ಪೋಷಕರೂ ಕಾರಣರಾಗಿಬಿಡುತ್ತಾರೆ.<br />
<a href="http://samarasa.net/samarasa/wp-content/uploads/2010/07/tunga1.jpg"><img class="aligncenter size-full wp-image-949" title="tunga" src="http://samarasa.net/samarasa/wp-content/uploads/2010/07/tunga1.jpg" alt="" width="535" height="353" /></a><br />
ಇಂತಹದ್ದಕ್ಕೆಲ್ಲ ಉತ್ತರವೆಂಬಂತೇನೋ ಇದೆ, ಮೇಫ್ಲವರ್ ಪ್ರಕಟನೆಯ ವಿ. ಗಾಯತ್ರಿಯವರ ’ತುಂಗಾ’ ಕಾದಂಬರಿ. ಪುಸ್ತಕ ಶೀರ್ಷಿಕೆಯ ಮೇಲೆ ’ಕಾಡುವ ಕಾದಂಬರಿ’ ಎಂಬ ಹಣೆಪಟ್ಟೆ ಹೊಂದಿರುವ ಈ ಪುಸ್ತಕ ನಿಜಕ್ಕೂ ಕಾಡುತ್ತದೆ. ಪ್ರಶ್ನೆಗಳನ್ನು ಹಾಕಿಕೊಳ್ಳುವಂತೆ ಮಾಡುತ್ತದೆ. ಯೊಚಿಸಲು ಉತ್ತೇಜಿಸುತ್ತದೆ. ಜಪಾನಿನ ಟೆಲಿವಿಷನ್ ಕ್ಷೇತ್ರದ ತೆತ್ಸುಕೋ ಕುರೋಯಾನಾಗಿಯ ’ತುತ್ತೋ ಚಾನ್’ ಎಂಬ ಪುಸ್ತಕದಿಂದ ಪ್ರೇರಣೆ ಪಡೆದು ಕನ್ನಡಕ್ಕೆ ಒಗ್ಗಿಸಿ ಒಂದು ಅಪೂರ್ವ ಕೃತಿಯನ್ನು ಸೃಷ್ಟಿಸಿದ್ದಾರೆ ವಿ. ಗಾಯಿತ್ರಿ.</p>
<p>ತುಂಗಾ ಎಂಬ ತುಂಟ ಮಗು, ಸರ್ಕಾರಿ ಶಾಲೆಯಿಂದ ಹೊರದೂಡಲ್ಪಡುತ್ತಾಳೆ. ಸರ್ಕಾರಿ ಶಾಲೆಯ ಮೇಷ್ಟ್ರುಗಳ ವರ್ತನೆಯ ವೈಖರಿ, ನೀವು ಸರ್ಕಾರಿ ಶಾಲೆಗಳಲ್ಲಿ ಓದಿದ್ದವರಾದರೆ ಕಣ್ಣಿಗೆ ಕಟ್ಟಿ ಬರುತ್ತದೆ. ಈ ಹಂತದಲ್ಲಿ ಬರುವ ತುಂಗಾಳ ಚಿತ್ರಣ, ಅವಳ ಮುಗ್ಧತೆ ಬಹಳ ಉತ್ತಮವಾಗಿ ಮೂಡಿ ಬಂದಿದೆ. ತುಂಗಾ ಹೇಗೆ ತಾನು ದೊಡ್ಡವಳಾದ ಮೇಲೆ ಕಂಡಕ್ಟರ್ ಆಗಬೇಕು, ಪೋಲೀಸ್ ಇನ್ಸ್ಪೆಕ್ಟರ್ ಆಗಬೇಕು, ದೊಂಬರಾಟದವಳಾಗಬೇಕು ಎಂದುಕೊಳ್ಳುತ್ತಾಳೆ ಎಂಬುದನ್ನು ಬಹಳ ಚೆನ್ನಾಗಿ ಅಕ್ಷರಗಳಲ್ಲಿ ಮೂಡಿಸಿರುವ ಗಾಯತ್ರಿ, ಓದುಗರನ್ನು ಬಾಲ್ಯಕ್ಕೆ ಎಳೆದೊಯ್ಯುತ್ತಾರೆ. ತುಂಗಾ ಗುಬ್ಬಚ್ಚಿಗಳ ಜೊತೆ ಮಾತನಾಡುವ ಪ್ರಸಂಗವನ್ನು ಮೇಷ್ಟು ತುಂಗಾಳ ತಾಯಿಗೆ ಹೇಳುವುದು, ತುಂಗಾ ದೊಂಬರಾಟದವರನ್ನು ಶಾಲೆಗೆ ಕರೆತರುವುದು ಇತ್ಯಾದಿ ಪ್ರಸಂಗಗಳು ಕಣ್ಣಿಗೆ ಕಟ್ಟುತ್ತವೆ. ಸರ್ಕಾರಿ ಶಾಲೆಯಿಂದ ಹೊರಬಿದ್ದ ತುಂಗಾ ನಂತರ ’ಮಾಂಡವಿ’ ಎಂಬುವವರು ನಡೆಸುವ ಪ್ರಾಥಮಿಕ ಶಾಲೆಗೆ ಸೇರಿಕೊಳ್ಳುತ್ತಾಳೆ. ಈ ಶಾಲೆ ಮಾಮೂಲಿ ಶಾಲೆಯಂತಲ್ಲ. ಮಕ್ಕಳಿಗೆ ಪಾಠಗಳನ್ನು ತಮಗೆ ಯಾವಾಗ ಬೇಕೋ ಆಗ ಕಲಿತುಕೊಳ್ಳಬಹುದು. ಬಹುತೇಕ ಪಠ್ಯೇತರ ಚಟುವಟಿಗೆಗಳಿಗೆ ಸಮಯ ಮೀಸಲು. ಆದರೆ ಯಾವುದರಲ್ಲೂ ಆಡಂಭರವಿಲ್ಲ. (ಖಾಸಗೀ /ಅಂತರಾಷ್ಟ್ರೀಯ ಶಾಲೆಗಳಲ್ಲಿ ನಿಮ್ಮ ಮಕ್ಕಳು ಕಲಿಯುವವರಾಗಿದ್ದರೆ ಈ ಅಸ್ವಾಭಾವಿಕ ಆಡಂಭರತೆ ನಿಮ್ಮ ಅನುಭವಕ್ಕೆ ಬಂದಿರುತ್ತದೆ. ಮಕ್ಕಳು ತಮ್ಮಷ್ಟಕ್ಕೆ ತಾವೇ ಮಾಡುವ ಪಠ್ಯೇತರ ಚಟುವಟಿಕೆಗಳಿಂತಲೂ, ತಮ್ಮ ಮಗು ಚೆನ್ನಾಗಿ ಮಾಡಬೇಕು ಎಂಬ ಹಂಬಲದಿಂದ ಪೋಷಕರೇ ಮಕ್ಕಳ ಮೇಲೆ ಬಿದ್ದು ತಾವೇ ಚಟುವಟಿಕೆಗಳನ್ನು ಮಾಡಿ ಶಾಲೆಗೆ ಕಳುಹಿಸುವುದು ಅತೀ ಸಾಮಾನ್ಯ!). ಈ ಹಂತದಲ್ಲಿ ಕಾದಂಬರಿ, ಮಾಂಡೋವಿಯವರು ತಮ್ಮ ಶಾಲೆಗಳಲ್ಲಿ ಮಾಡುವ ವಿಭಿನ್ನ ಪ್ರಯೋಗಗಳ ವಿವರಣೆಗೆ ಹೋಗಿಬಿಡುತ್ತದೆ. ಕೆಲವೊಮ್ಮೆ ಆ ಪ್ರಯೋಗಗಳೆಲ್ಲಾ ಸರಿಯಾದುವೇ, ಸ್ವಲ್ಪವೂ ಹುಳುಕಿಲ್ಲದವು ಎಂಬ ತೀರ್ಪು ಕೊಡುವಂತೆ ಮುಂದುವರೆಯುತ್ತದೆ. ತುಂಟ ಮಗು ಎಂದು ಪ್ರಸಿದ್ಧಿ ಪಡೆದಿದ್ದ ತುಂಗಾ, ಯಾವ ವಿಶೇಷ ಗಮನವೂ ಇಲ್ಲದೆ, ಸ್ವಾಭಾವಿಕವಾಗಿ ಒಳ್ಳೆಯ ಹುಡುಗಿ ಎಂಬ ಹೆಸರು ಪಡೆಯುತ್ತಾಳೆ. ವಿಕಲಾಂಗ ಮಕ್ಕಳ ತೊಂದರೆಗಳಿಗೆ ಸ್ಪಂದಿಸುತ್ತಾಳೆ. ಇಂತಹ ವಿವರಣೆಗಳು ಹೆಚ್ಚು ಧನಾತ್ಮಕವಾಗಿಯೇ ಕೂಡಿರುವುದು ಕೆಲವೊಮ್ಮೆ ಆಶ್ಚರ್ಯ ತರಿಸುತ್ತದೆ. ಆ ಶಾಲೆ ನಡೆಸುವಾಗ, ಮಾಂಡೋವಿಯವರಿಗೆ ಆಗಬಹುದಾದ ತೊಂದರೆಗಳು, ಅಡೆತಡೆಗಳು ಆಗೊಮ್ಮೆ ಈಗೊಮ್ಮೆ ಸುಳಿದರೂ ಅವಕ್ಕೆ ಹೆಚ್ಚು ಮಾನ್ಯತೆ ಸಿಗದೆ, ಈ ರೀತಿ ಒಂದು ಪರ್ಯಾಯ ಶಾಲೆಯನ್ನು ಸುಸೂತ್ರವಾಗಿ ನಡೆಸಬಹುದು ಎಂಬ ಸಂದೇಶ ಕೊಡುವಂತೆ ಕಾದಂಬರಿ ಮುಂದುವರೆಯುತ್ತದೆ. ಇಲ್ಲಿ ಇನ್ನೊಂದು ಮಹತ್ವದ ಪಾತ್ರ ಎಂದರೆ ತುಂಗಾಳ ಅಮ್ಮನದು. ತಾಯಿ, ಮಗಳು ಎಷ್ಟೇ ತುಂಟಿಯಾದರೂ ಹೊಡೆದು ಬಡೆದು ಬುದ್ಧಿ ಹೇಳುವುದಿಲ್ಲ. ಹೆಚ್ಚು ಬೇಸರಗೊಳ್ಳುವುದಿಲ್ಲ. ಮಗಳ ತುಂಟತನಕ್ಕೆ ನಗುತ್ತಾಳೆ. ಮಗಳ ಆಸೆಗಳಿಗೆ ಆಸರೆಯಾಗುತ್ತಾಳೆ. ಇಲ್ಲಿ ತುಂಗಾಳ ಅಮ್ಮನದು ಒಂದು ಆದರ್ಶ ಪಾತ್ರ! ಇಂದಿನ ಒತ್ತಡದ ಜೀವನದ ದಿನಗಳಲ್ಲಿ ಇಂತಹ   ಪಾತ್ರಗಳು ನಿಜಜೀವನದಲ್ಲಿ ಅಪರೂಪವೇನೋ! ಇನ್ನು ತುಂಗಾಳ ಅಪ್ಪ ಚಂಡೆ ನುಡಿಸುತ್ತಾನೆ ಯಕ್ಷಗಾನದಲ್ಲಿ ಎಂಬುದನ್ನು ಬಿಟ್ಟರೆ, ತುಂಗಾಳ ಮತ್ತು ತನ್ನ ಅಪ್ಪನ ಮಧ್ಯೆ ಹೆಚ್ಚು ಸಂಪರ್ಕವಿಲ್ಲ ಎಂಬುವಂತೆ ಚಿತ್ರಿಣಗೊಂಡಿದೆ ಕಾದಂಬರಿ. ಆದುದರಿಂದ ತುಂಗಾಳ ಅಪ್ಪನ ಬಗ್ಗೆ ಹೆಚ್ಚು ತಿಳಿಯಲು ಸಾಧ್ಯವಿಲ್ಲ.</p>
<p>ಒಟ್ಟಿನಲ್ಲಿ ಒಂದು ಮಗುವಿನ ಶೈಕ್ಷಣಿಕ, ಮಾನಸಿಕ ಬೆಳವಣಿಗೆಗೆ ಒಂದು ಅಪರೂಪದ ಶಾಲೆ ಹೇಗೆ ಸಹಾಯ ಮಾಡುತ್ತದೆ ಎಂಬ ಚಿತ್ರಣವಿರುವ ಈ ಕಾದಂಬರಿ ಅಪೂರ್ವ, ಉಲ್ಲಾಸಕರವಾದ ಓದು! ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಪಟ್ಟವರಂತೂ ಓದಲೇ ಬೇಕಾದ ಪುಸ್ತಕ. ನಿಮ್ಮ ನಿಮ್ಮ ಮಕ್ಕಳ ಶಿಕ್ಷಣದ ಬಗ್ಗೆ ಕಾಳಜಿ ನಿಮಗೆ ಇದ್ದೇ ಇದೆಯಾದ್ದರಿಂದ ನೀವು ತಪ್ಪಿಸಿಕೊಳ್ಳಬಾರದ ಪುಸ್ತಕ. ನನಗೂ ಶಿಕ್ಷಣಕ್ಕೂ ಸಂಬಂಧ ಇಲ್ಲಪ್ಪ ಎನ್ನುವುದಾದರೂ ಒಮ್ಮೆ ಓದಿ ಹೇಗಿದೆ ಹೇಳಿ!</p>
<p>ಇನ್ನುಳಿದಂತೆ, ಜಿ ಎನ್ ಮೋಹನ್ ರವರ ಪುಸ್ತಕದ ಆರಂಭದಲ್ಲಿ ’ಈ ಪುಸ್ತಕ ನಂಗಿಷ್ಟ’ ಎಂಬ ಚಂದದ ಪರಿಚಯ ಮಾಡಿಕೊಡುತ್ತಾರೆ ಪುಸ್ತಕಕ್ಕೆ. ಸೀತಾ ಶಾಲೆಯ ’ಜೇನ್ ಸಾಹಿ’ ಯವರ ವಿದ್ವತ್‌ಪೂರ್ಣ ಮುನ್ನುಡಿಯಿದೆ ಲೇಖನಕ್ಕೆ!</p>
]]></content:encoded>
			<wfw:commentRss>http://samarasa.net/samarasa/?feed=rss2&amp;p=947</wfw:commentRss>
		<slash:comments>2</slash:comments>
		</item>
		<item>
		<title>ವಸುಧೇಂದ್ರರ ಆತ್ಮೀಯ ಕಾರ್ಯಕ್ರಮದ ಸಂಕ್ಷಿಪ್ತ ವಿವರ</title>
		<link>http://samarasa.net/samarasa/?p=941</link>
		<comments>http://samarasa.net/samarasa/?p=941#comments</comments>
		<pubDate>Mon, 12 Jul 2010 18:04:10 +0000</pubDate>
		<dc:creator>ಗುರುವೆ</dc:creator>
				<category><![CDATA[ಪುಸ್ತಕ ಪ್ರೀತಿ]]></category>
		<category><![CDATA[ಸಾಹಿತ್ಯ]]></category>

		<guid isPermaLink="false">http://samarasa.net/samarasa/?p=941</guid>
		<description><![CDATA[ಆಕೃತಿ ಪುಸ್ತಕ ಮಳಿಗೆಯಲ್ಲಿ, ವಸುಧೇಂದ್ರ ತಮ್ಮ ರಕ್ಷಕ ಅನಾಥ ಪುಸ್ತಕದ ’ರಕ್ಷಕ ಅನಾಥ’ ಪ್ರಬಂಧ ಓದಿ ರಂಜಿಸಿದರು. ನೆರೆದಿದ್ದವರನ್ನೆಲ್ಲ ಪರಿಚಯಿಸಿಕೊಳ್ಳುವುದರಿಂದ ಹಿಡಿದು, ಮಕ್ಕಳಲ್ಲಿ ಕನ್ನಡ ಓದುವ ಆಸಕ್ತಿ ಮೂಡಿಸುವುದು ಹೇಗೆ? ದೃಶ್ಯ ಮಾಧ್ಯಮ ಓದಿಗೆ ಪೂರಕವೋ? ಮಾರಕವೋ? ಓದಿನ ಹವ್ಯಾಸ ಹೆಚ್ಚಾಗಲು ಕನ್ನಡದಲ್ಲೂ ನಕಲಿ ಪುಸ್ತಕದ ಹಾವಳಿ ಪ್ರಾರಂಭವಾಗಬೇಕೆ? ಎಂಬಿತ್ಯಾದಿ ಚರ್ಚೆಗಳಾದವು!]]></description>
			<content:encoded><![CDATA[<p><a href="http://samarasa.net/samarasa/wp-content/uploads/2010/07/DSC_0002.jpg"><img class="aligncenter size-full wp-image-943" title="DSC_0002" src="http://samarasa.net/samarasa/wp-content/uploads/2010/07/DSC_0002.jpg" alt="" width="448" height="300" /></a></p>
<p>ಆಕೃತಿ ಪುಸ್ತಕ ಮಳಿಗೆಯಲ್ಲಿ, ವಸುಧೇಂದ್ರ ತಮ್ಮ ರಕ್ಷಕ ಅನಾಥ ಪುಸ್ತಕದ ’ರಕ್ಷಕ ಅನಾಥ’ ಪ್ರಬಂಧ ಓದಿ ರಂಜಿಸಿದರು. ನೆರೆದಿದ್ದವರನ್ನೆಲ್ಲ ಪರಿಚಯಿಸಿಕೊಳ್ಳುವುದರಿಂದ ಹಿಡಿದು, ಮಕ್ಕಳಲ್ಲಿ ಕನ್ನಡ ಓದುವ ಆಸಕ್ತಿ ಮೂಡಿಸುವುದು ಹೇಗೆ? ದೃಶ್ಯ ಮಾಧ್ಯಮ ಓದಿಗೆ ಪೂರಕವೋ? ಮಾರಕವೋ? ಓದಿನ ಹವ್ಯಾಸ ಹೆಚ್ಚಾಗಲು ಕನ್ನಡದಲ್ಲೂ ನಕಲಿ ಪುಸ್ತಕದ ಹಾವಳಿ ಪ್ರಾರಂಭವಾಗಬೇಕೆ? ಎಂಬಿತ್ಯಾದಿ ಚರ್ಚೆಗಳಾದವು!<br />
<a href="http://samarasa.net/samarasa/wp-content/uploads/2010/07/DSC_0001.jpg"><img class="aligncenter size-full wp-image-942" title="DSC_0001" src="http://samarasa.net/samarasa/wp-content/uploads/2010/07/DSC_0001.jpg" alt="" width="448" height="300" /></a><br />
ಹಿರಿಯರೊಬ್ಬರ ’ಅಥಿತಿ ಮತ್ತು ಸಂಸ್ಕೃತಿ’ ಪ್ರಬಂಧವನ್ನು ಓದಲು ಕೇಳಿಕೊಂಡಾಗ, ಅದರಲ್ಲಿರುವ ಕೆಲವು ಸಾಲುಗಳನ್ನು ಎಲ್ಲರ ಮುಂದೆ ಓದುವುದು ಸರಿ ಬರುವುದಿಲ್ಲ ಎಂದುಕೊಂಡು, ಈಗಾಗಲೇ ’ಸಮ್ಮೇಳನ’ದ ಬಗ್ಗೆ ಹಲವಾರು ಬಾರಿ ಮಾತನಾಡಿದ್ದರಿಂದ, ’ರಕ್ಷಕ ಅನಾಥ’ ಪ್ರಬಂಧವನ್ನೇ ಓದಿದರು. ರಕ್ಷಕ ಅನಾಥದ ಕಥೆಯನ್ನು ಶ್ರೋತೃಗಳು ತಮ್ಮ ಜೀವನದಲ್ಲಿ ನಡೆದ ಸಂಗತಿಗಳಿಗೆ ಹೋಲಿಸಿ, ತಮ್ಮ ಅನುಭಗಳನ್ನೂ ಹಂಚಿಕೊಂಡರು. ಕೊನೆಗೆ ವಸುಧೇಂದ್ರರ ಮನೆಯಲ್ಲಿದ್ದ ಆ ಫೋಟೋಗಳ ಗತಿ ಏನಾಯಿತು ಎಂಬ ಪ್ರಶ್ನೆಗೆ, ವಸುಧೇಂದ್ರರ ನಗುವೇ ಉತ್ತರ! ವಸುಧೇಂದ್ರರು ಬರೆಯುವುದು ಹೆಚ್ಚು ಐ.ಟಿ ಕ್ಷೇತ್ರದ ಬಗೆಗೇ ಅಲ್ಲವೇ ಅಂಬುದಕ್ಕೆ, ಹಾಗೇನಿಲ್ಲ, ನನ್ನ ಬಾಲ್ಯದ ದಿನಗಳ ಬಗ್ಗೆ ಬರೆದಿರುವುದೆಲ್ಲಾ ಐ ಟಿ ಕ್ಷೇತ್ರಕ್ಕೆ ಸಂಬಂಧಿಸಿದ್ದಲ್ಲ. ಇನ್ನುಳಿದದ್ದರಲ್ಲಿ ಅದೇ ಹೆಚ್ಚಿರಬಹುದು, ಏಕೆಂದರೆ ನನ್ನ ಅನುಭವಕ್ಕೆ ಬಂದಿರುವುದು ಅವುಗಳೇ ಎಂದರು! ಮುಂದಿನ ದಿನಗಳಲ್ಲಿ ಮಕ್ಕಳಿಗೆ ಸಾಹಿತ್ಯವನ್ನು ರೂಪಿಸುವುದಕ್ಕೆ ಗಂಭೀರ ಚಿಂತನೆ ನಡೆಸುವುದಾಗಿ ಭರವಸೆಯಿತ್ತರು. ಮಕ್ಕಳಿಗೆ ಏನೇ ಮಾಡಿದರೂ ಬಣ್ಣ ಬಣ್ಣವಾಗಿರುತ್ತದೆ. ಕಪ್ಪು ಬಿಳುಪಿನಲ್ಲಿ ಮಾಡಿ ಅವರ ಆಸಕ್ತಿಯನ್ನು ಕುಂದಿಸುವುದಿಲ್ಲವೆಂದರು. ಯಾರೋ ವಸುಧೇಂದ್ರ ರವರನ್ನು ನಿಮ್ಮ ಪುಸ್ತಕಗಳನ್ನು ನಕಲು ಮಾಡುವ ಸಾಧ್ಯತೆಯಿದೆ ಎಚ್ಚರಿಕೆಯಿಂದಿರಿ ಎಂದಿದ್ದರಂತೆ. ಅದಕ್ಕೆ ವಸುಧೇಂದ್ರ ಆಯ್ಯೋ, ಮಾಡಲಿ ಬಿಡಿ. ನನ್ನ ಪುಸ್ತಕವನ್ನು ಹಾಗಾದರೂ ಓದಿದರೆ ನನಗೆ ಬಹಳ ಸಂತೋಷ ಎಂದರಂತೆ. ನಾವೇ ಪುಸ್ತಕದ ಬೆಲೆಯನ್ನು ಅಷ್ಟು ಕಡಿಮೆ ಇಡುತ್ತೇವೆ. ಅದಕ್ಕಿಂತ ಕಡಿಮೆ ಬೆಲೆಯಿಟ್ಟು ಮಾರಾಟ ಮಾಡಲು ಪೈರೆಸಿ ಮಾಡುವವರಿಗೆ ಅಷ್ಟು ಸುಲಭವಲ್ಲ ಎಂಬುದು ವಸುಧೇಂದ್ರ ರವರ ನಂಬಿಕೆ. ಟಿ ವಿ ಯಲ್ಲಿ ಪುಸ್ತಕಗಳನ್ನು ಪರಿಚಯಿಸುವಂತ ಕಾರ್ಯಕ್ರಮಗಳು ಇನ್ನೂ ಹೆಚ್ಚಾಗಬೇಕೆ ಎಂದರು. ಪಾಶ್ಚಿಮಾತ್ಯ ದೇಶಗಳಲ್ಲಿ, ಟಿ ವಿ ಮಾಧ್ಯಮ ಲಗ್ಗೆಯಿಟ್ಟು ಪುಸ್ತಕಗಳನ್ನು ಓದುವರ ಸಂಖ್ಯೆ ಕುಸಿದು, ಅದು ಮತ್ತೆ ಚೇತರಿಸಿಕೊಂಡಿರುವುದನ್ನು ತಿಳಿಸಿ, ನಮ್ಮಲ್ಲೂ ಹೆಚ್ಚು ವ್ಯತ್ಯಾಸವೇನಿಲ್ಲ. ನಮ್ಮಲ್ಲೂ ಪುಸ್ತಕ ಓದುವ ಅರಿವು ಹೆಚ್ಚುತ್ತದೆ. ಎಲ್ಲದ್ದಕ್ಕೂ ಸ್ವಲ್ಪ ಕಾಲಾವಕಾಶ ಬೇಕಾಗುತ್ತದೆ ಎಂದರು!<br />
<a href="http://samarasa.net/samarasa/wp-content/uploads/2010/07/DSC_0004.jpg"><img class="aligncenter size-full wp-image-944" title="DSC_0004" src="http://samarasa.net/samarasa/wp-content/uploads/2010/07/DSC_0004.jpg" alt="" width="448" height="300" /></a><br />
ವಸುಧೇಂದ್ರರ ಪರಿಚಯವೇ ಇಲ್ಲದಿದ್ದ ಮಂದಿಗೆ ವಸುಧೇಂದ್ರರ ಪರಿಚಯವಾದ ಖುಷಿ. ವಸುಧೇಂದ್ರರ ಪರಿಚಯವಿದ್ದವರಿಗೆ ಅವರ ಮಾತುಗಳನ್ನು ಕೇಳುವ, ಅವರ ಕಂಠದಲ್ಲೇ ಅವರ ಪ್ರಬಂಧವನ್ನು ಕೇಳುವ ಖುಷಿ. ಶಿವಮೊಗ್ಗದಿಂದ ತಮ್ಮ ನೆಚ್ಚಿನ ಲೇಖಕ ವಸುಧೇಂದ್ರರನ್ನು ಕಾಣಲು ಬಂದಿದ್ದ ಬೋರಣ್ಣನಿಗೆ, ಇವೆಲ್ಲದರ ಜೊತೆಗೆ ಪುಸ್ತಕಗಳಿಗೆ ವಸುಧೇಂದ್ರರ ಹಸ್ತಾಕ್ಷರಗಳನ್ನು ಹಾಕಿಸಿಕೊಂಡು ಅವರ ಜೊತೆ ಹರಟಿದ ಸಂತೋಷ!<br />
<a href="http://samarasa.net/samarasa/wp-content/uploads/2010/07/DSC_0003.jpg"><img class="aligncenter size-full wp-image-945" title="DSC_0003" src="http://samarasa.net/samarasa/wp-content/uploads/2010/07/DSC_0003.jpg" alt="" width="448" height="300" /></a></p>
]]></content:encoded>
			<wfw:commentRss>http://samarasa.net/samarasa/?feed=rss2&amp;p=941</wfw:commentRss>
		<slash:comments>1</slash:comments>
		</item>
		<item>
		<title>ಮತ್ತೆ ಬರುವ ಹಂಬಲದಿ..</title>
		<link>http://samarasa.net/samarasa/?p=939</link>
		<comments>http://samarasa.net/samarasa/?p=939#comments</comments>
		<pubDate>Wed, 07 Jul 2010 11:01:45 +0000</pubDate>
		<dc:creator>admin</dc:creator>
				<category><![CDATA[ಸಮರಸ - ಕಥೆ/ಕವನ]]></category>

		<guid isPermaLink="false">http://samarasa.net/samarasa/?p=939</guid>
		<description><![CDATA[ನಿನ್ನ ಹರಿವ ರಭಸದ ಮುಂದೆ
ನಾನ್ಯಾರು ನೀ ಹೇಳು..
ಬದುಕ ಬವಣೆಯಲಿ ಬೆಂದ
ಒಂದು ಕೇವಲ ಕಾಳು!]]></description>
			<content:encoded><![CDATA[<p>ಲೇಖಕರು : ರಾಘವೇಂದ್ರ ಹೆಗಡೆ</p>
<p>ನಿನ್ನ ಹರಿವ ರಭಸದ ಮುಂದೆ<br />
ನಾನ್ಯಾರು ನೀ ಹೇಳು..<br />
ಬದುಕ ಬವಣೆಯಲಿ ಬೆಂದ<br />
ಒಂದು ಕೇವಲ ಕಾಳು!<br />
ಬಿದ್ದಾಯಿತು ನಾ ಜಾರಿ<br />
ನಿನ್ನ ಸೆಳೆತದ ಸುಳಿಗೆ..<br />
ಸುಳಿಯುವುದು ಇನ್ನೆಂದು<br />
ನನ್ನೆದೆಗೆ ಬದುಕಹಾಡು..?!</p>
<p>ಆವೇಶದಿ ಉದ್ವೇಗದಿ<br />
ಓಡಿ ಸಾಗರವ ಸೇರುವ<br />
ಆತುರದಿ ನೀನು..<br />
ಇಲ್ಲೇ ತೊರೆಯ ನಡುವೆ<br />
ಗಿಡ ಪೊದೆಗಂಟಿ ಸೆರೆಸಿಕ್ಕು<br />
ಬದುಕುವ ಕಾತರದಿ ನಾನು.!</p>
<p>ನಿನ್ನ ವಿರುದ್ದ ಈಜಿ<br />
ದಡ ಸೇರುವೆನೆಂಬ<br />
ಹುಚ್ಚು ಆಲೋಚನೆಯೆಲ್ಲ ಇಲ್ಲ<br />
ಆದರೆ ನಂದೊಂದು ಪುಟ್ಟ<br />
ಕೋರಿಕೆ ನಿನಗೆ-<br />
ನನ್ನ ಉಳಿಸಿ ನೀ ದಡ ಸೇರಿಸುವೆಯಲ್ಲ.?!</p>
<p>ಅಂದೊಂದು ಖಾಲಿ ಪುಟದಿ<br />
ಬಿತ್ತು ನನ್ನಾಕೃತಿ<br />
ನೀ ಮುನಿದರೆ ಈ ಕ್ಷಣದಿಂದ ಅಲ್ಲೆಲ್ಲ<br />
ನಾ ಕೇವಲ ಒಂದು ಸ್ಮೃತಿ!<br />
ಇರಬಾರದೇಕೆ ನಿನಗೆ<br />
ಈ ಜೀವದಮೇಲೊಂಚೂರು ಪ್ರೀತಿ.!?</p>
<p>ಕೊಚ್ಚಿಕೊಂಡು ಹೋಗುವಂತೆ<br />
ರಭಸದಿ ಉಕ್ಕಿ ಬರುವ<br />
ನಿನ್ನ ಉಗ್ರ ರೂಪದ<br />
ಭೀತಿಯ ನಡುವೆಯೇ ಈ<br />
ಎದೆಯಲಿ ಪುಟ್ಟ ಭರವಸೆಯ<br />
ಕಿಡಿಯೊಂದು ಹೊತ್ತಿದೆ..<br />
ಅದರ ಬೆಳಕನು ಉರಿಸಿ<br />
ದಡ ಕಂಡು ಮತ್ತೆ<br />
ಬದುಕಿ ಮೇಲೆದ್ದು ಬರುವ ಹಂಬಲದಿ ನಾನು&#8230;..!</p>
<p>&#8211; ರಾಘವೇಂದ್ರ ಹೆಗಡೆ</p>
]]></content:encoded>
			<wfw:commentRss>http://samarasa.net/samarasa/?feed=rss2&amp;p=939</wfw:commentRss>
		<slash:comments>1</slash:comments>
		</item>
		<item>
		<title>ರಕ್ಷಕ ಅನಾಥದ ನಿಮ್ಮ ನೆಚ್ಚಿನ ಪ್ರಬಂಧವನ್ನು ವಸುಧೇಂದ್ರ ಓದಲಿದ್ದಾರೆ!!</title>
		<link>http://samarasa.net/samarasa/?p=929</link>
		<comments>http://samarasa.net/samarasa/?p=929#comments</comments>
		<pubDate>Fri, 02 Jul 2010 07:13:29 +0000</pubDate>
		<dc:creator>ಗುರುವೆ</dc:creator>
				<category><![CDATA[ಉಳಿದ]]></category>

		<guid isPermaLink="false">http://samarasa.net/samarasa/?p=929</guid>
		<description><![CDATA[ವಸುಧೇಂದ್ರ ಪ್ರಬಂಧ ಬರೆಯುವಷ್ಟೇ ಚೆನ್ನಾಗಿ, ಅದನ್ನು ಓದುವರೇ? ನಾವು ಅವರ ಪುಸ್ತಕವನ್ನು ಓದಿ ಆನಂದಿಸುವುದಕ್ಕಿಂತ, ಅವರಿಂದಲೇ ಅದನ್ನು ಓದಿಸಿದಾಗ ನಮಗೆ ಹೆಚ್ಚು ಆನಂದ aಸಿಗುವುದೇ? ಇವೆಲ್ಲಾ ಕುತೂಹಲಕ್ಕೆ, ಉತ್ತರ ನಿಮಗೆ 11 ಜುಲೈ 2010 ಭಾನುವಾರ, ಆಕೃತಿ ಪುಸ್ತಕ ಮಳಿಗೆಯಲ್ಲಿ ಸಿಗಲಿದೆ!]]></description>
			<content:encoded><![CDATA[<p><a href="http://samarasa.net/samarasa/wp-content/uploads/2010/07/Akruthi-Logo.jpg"><img class="aligncenter size-full wp-image-932" title="Akruthi Logo" src="http://samarasa.net/samarasa/wp-content/uploads/2010/07/Akruthi-Logo.jpg" alt="" width="112" height="96" /></a></p>
<p>ವಸುಧೇಂದ್ರ ಪ್ರಬಂಧ ಬರೆಯುವಷ್ಟೇ ಚೆನ್ನಾಗಿ, ಅದನ್ನು ಓದುವರೇ? ನಾವು ಅವರ ಪುಸ್ತಕವನ್ನು ಓದಿ ಆನಂದಿಸುವುದಕ್ಕಿಂತ, ಅವರಿಂದಲೇ ಅದನ್ನು ಓದಿಸಿದಾಗ ನಮಗೆ ಹೆಚ್ಚು ಆನಂದ aಸಿಗುವುದೇ? ಇವೆಲ್ಲಾ ಕುತೂಹಲಕ್ಕೆ, ಉತ್ತರ ನಿಮಗೆ 11 ಜುಲೈ 2010 ಭಾನುವಾರ, ಆಕೃತಿ ಪುಸ್ತಕ ಮಳಿಗೆಯಲ್ಲಿ ಸಿಗಲಿದೆ!</p>
<p><a href="http://samarasa.net/samarasa/wp-content/uploads/2010/07/rakshaka_anaatha.jpg"><img class="aligncenter size-full wp-image-933" title="rakshaka_anaatha" src="http://samarasa.net/samarasa/wp-content/uploads/2010/07/rakshaka_anaatha.jpg" alt="" width="397" height="482" /></a></p>
<p>ಬನ್ನಿ,ಭಾಗವಹಿಸಿ, ವಸುಧೇಂದ್ರರ ಜೊತೆ ಹರಟೆ ಹೊಡೆಯೋಣ! ವಸುಧೇಂದ್ರರ ಪುಸ್ತಕದಲ್ಲಿ ನಮಗೆ ಇಷ್ಟವಾದದ್ದನ್ನ, ಇಷ್ಟವಾಗದೆ ಇದ್ದದ್ದನ್ನ ಹೇಳೋಣ! ವಸುಧೇಂದ್ರರಿಗೆ ಸರಿ ಬಂದರೆ ನಮ್ಮ ಹರಟೆ ಅವರ ಮುಂದಿನ ಪುಸ್ತಕದಲ್ಲಿ ಪ್ರಬಂಧವಾಗಬಾರದೇಕೆ?<br />
<a href="http://samarasa.net/samarasa/wp-content/uploads/2010/07/vasudhEndra-signing.jpg"><img class="aligncenter size-full wp-image-934" title="vasudhEndra signing" src="http://samarasa.net/samarasa/wp-content/uploads/2010/07/vasudhEndra-signing.jpg" alt="" width="320" height="240" /></a><br />
ಫೋಟೋ ಕೃಪೆ: http://kadalateera.blogspot.com/2009/02/blog-post_15.html</p>
<p>ಸ್ಥಳ:  <strong>ಆಕೃತಿ ಬುಕ್ಸ್<br />
ನಂ. 28 ( ಹಳೆ ನಂ: 733), 2ನೇ ಮಹಡಿ,<br />
12 ನೇ ಮುಖ್ಯರಸ್ತೆ, 3 ನೇ ಬ್ಲಾಕ್,<br />
ರಾಜಾಜಿನಗರ, ಬೆಂಗಳೂರು- 560010</strong></p>
<p>ದಿನಾಂಕ : <strong>11 ಜುಲೈ 2010 ಭಾನುವಾರ</strong></p>
<p>ಸಮಯ: <strong>ಬೆಳಗ್ಗೆ 11 ಘಂಟೆಗೆ</strong></p>
<p>ಗುರುತು: <strong>ಇ. ಎಸ್. ಐ. ಆಸ್ಪತ್ರೆ ಹತ್ತಿರ, ಸ್ವಾತಿ ಗಿಫ್ಟ್ ಸೆಂಟರ್‌‍ನ ಪಕ್ಕ, ಎಫ್-ಸ್ಕ್ವಾರ್ ಮಳಿಗೆಯ ಮೇಲೆ</strong></p>
<p><strong>ಹೆಚ್ಚಿನ ವಿವರಗಳಿಗೆ ದೂರವಾಣಿಯಲ್ಲಿ ಸಂಪರ್ಕಿಸಲು: 9886694580</strong></p>
<p>ನೀವೂ ಬನ್ನಿ, ನಿಮ್ಮ ಗೆಳೆಯರನ್ನೂ ಕರೆತನ್ನಿ..</p>
<p>ರಕ್ಷಕ ಅನಾಥನ ಬಗ್ಗೆ ಅಕ್ಷರ ವಿಹಾರದಲ್ಲಿ ಹೀಗಿದೆ..<a href="http://aksharavihaara.wordpress.com/2010/05/11/%E0%B2%A8%E0%B2%BF%E0%B2%A6%E0%B3%8D%E0%B2%A6%E0%B3%86%E0%B2%97%E0%B3%86%E0%B2%A1%E0%B2%BF%E0%B2%B8%E0%B2%BF%E0%B2%A6-%E0%B2%9B%E0%B2%82%E0%B2%A6%E0%B2%A6-%E0%B2%AA%E0%B3%81%E0%B2%B8%E0%B2%95%E0%B3%8D/" target="_blank"> ಓದಿ.</a>.</p>
<p>ರಕ್ಷಕ ಅನಾಥದ ಯಾವ ಪ್ರಬಂಧ ವಸುಧೇಂದ್ರ ಓದಬೇಕೆಂದು ನಿಮಗನ್ನಿಸುತ್ತದೆ? ಕೆಳಗೆ ಪ್ರತಿಕ್ರಿಯಿಸಿ..</p>
]]></content:encoded>
			<wfw:commentRss>http://samarasa.net/samarasa/?feed=rss2&amp;p=929</wfw:commentRss>
		<slash:comments>0</slash:comments>
		</item>
		<item>
		<title>ಕನ್ನಡ ಲಿಪಿಯನ್ನು ವಿರೂಪಗೊಳಿಸುತ್ತಿರುವವರ ಗಮನಕ್ಕೆ!</title>
		<link>http://samarasa.net/samarasa/?p=924</link>
		<comments>http://samarasa.net/samarasa/?p=924#comments</comments>
		<pubDate>Thu, 01 Jul 2010 10:13:35 +0000</pubDate>
		<dc:creator>ಗುರುವೆ</dc:creator>
				<category><![CDATA[ಉಳಿದ]]></category>

		<guid isPermaLink="false">http://samarasa.net/samarasa/?p=924</guid>
		<description><![CDATA[ಇದನ್ನು ಎಲ್ಲಾ ಕನ್ನಡ ಪುಸ್ತಕ ಪ್ರಕಾಶಕರ ಮತ್ತು ಸಾರ್ವಜನಿಕರ ಗಮನಕ್ಕೆ ತರಲು ಇಚ್ಛಿಸುತ್ತೇನೆ. ಇನ್ನು ಮುಂದಾದರೂ ಪುಸ್ತಕಗಳನ್ನು ಹೊರತರುವಾಗ ಸ್ವಲ್ಪ ಎಚ್ಚರಿಕೆಯಿಂದ ಟೈಪ್ ಮಾಡಲಿ ಎಂಬ ಉದ್ದೇಶದಿಂದಲೇ ಹೊರತು ಯಾರೋ ಒಬ್ಬ ಪ್ರಕಾಶಕನ ತಪ್ಪುಗಳನ್ನು ಎತ್ತಿ ಹಿಡಿದು ತೊರಿಸುವುದಕ್ಕಲ್ಲ!]]></description>
			<content:encoded><![CDATA[<p>ಇದನ್ನು ಎಲ್ಲಾ ಕನ್ನಡ ಪುಸ್ತಕ ಪ್ರಕಾಶಕರ ಮತ್ತು ಸಾರ್ವಜನಿಕರ ಗಮನಕ್ಕೆ ತರಲು ಇಚ್ಛಿಸುತ್ತೇನೆ. ಇನ್ನು ಮುಂದಾದರೂ ಪುಸ್ತಕಗಳನ್ನು ಹೊರತರುವಾಗ ಸ್ವಲ್ಪ ಎಚ್ಚರಿಕೆಯಿಂದ ಟೈಪ್ ಮಾಡಲಿ ಎಂಬ ಉದ್ದೇಶದಿಂದಲೇ ಹೊರತು ಯಾರೋ ಒಬ್ಬ ಪ್ರಕಾಶಕನ ತಪ್ಪುಗಳನ್ನು ಎತ್ತಿ ಹಿಡಿದು ತೊರಿಸುವುದಕ್ಕಲ್ಲ!</p>
<p><a href="http://samarasa.net/samarasa/wp-content/uploads/2010/07/pu_po.jpg"><img class="aligncenter size-full wp-image-925" title="pu_po" src="http://samarasa.net/samarasa/wp-content/uploads/2010/07/pu_po.jpg" alt="" width="263" height="235" /></a><br />
ಕನ್ನಡವನ್ನು ಗಣಕಯಂತ್ರದಲ್ಲಿ ಟೈಪ್ ಮಾಡಲು ಅಂದವಾದ ಫಾಂಟ್‌ಗಳಿಲ್ಲ ಎಂಬ ಕೊರಗು ಮೊದಲಿನಿಂದಲೂ ಇದೆ! ಈ ಕೊರತೆ ಯೂನಿಕೋಡ್ ನಲ್ಲಿ ಟೈಪ್ ಮಾಡಲು ಸಹಾಯ ಮಾಡುವಂತಹ ತಂತ್ರಾಂಶಗಳಲ್ಲಿ ಸ್ವಲ್ಪ ಹೆಚ್ಚು, ಅಂದರೆ ಯೂನಿಕೋಡ್ ಕನ್ನಡ ಫಾಂಟ್ ಗಳು ಅತಿ ವಿರಳ.</p>
<p>ಈ ಕೊರತೆಯನ್ನು ಬಹುಮಟ್ಟಿಗೆ ನೀಗಿಸಿದ್ದ ತಂತ್ರಾಂಶ &#8220;ನುಡಿ&#8221;. ಆದರೆ ಇದು ಬಳಸುವುದು ANSI ಕೋಡ್‌ಗಳನ್ನ. ಯೋನಿಕೋಡಗಳ, ಆನ್ಸಿ ಕೋಡಗಳ ಚರ್ಚೆ ಸದ್ಯಕ್ಕೆ ಬೇಡ. ಆದರೆ ಈ ನುಡಿ ತಂತ್ರಾಂಶವನ್ನು ಬಳಸುತ್ತಿರುವ ಕನ್ನಡ ಪುಸ್ತಕೋದ್ಯಮದ ಪ್ರಕಾಶಕರು, ’ಪು’, ಪೂ, ಪೊ, ಪೋ ಸಂಯುಕ್ತಾಕ್ಷರಗಳನ್ನು ವಿರೂಪಗೊಳಿಸಿರುವುದು ಬಹಳ ಖೇದಕರವಾದ ಸಂಗತಿ. ನಮಗೆಲ್ಲರಿಗೂ ತಿಳಿದಿರುವಂತೆ ಪ ಅಕ್ಷರಕ್ಕೆ ಉ/ಒ/ಓ/ಒ ಕಾರವನ್ನು ಸೇರಿಸಿದಾಗ,”ಪ’ ಅಕ್ಷರದ ಕೆಳಮಧ್ಯಭಾಗದಿಂದ ಆ ಕೊಂಬುಗಳು/ಓತ್ವಗಳು ಶುರುವಾಗಬೇಕು ಆದರೆ ಈ ’ನುಡ” ತಂತ್ರಾಂಶ ಉಪಯೋಗಿಸಿ ಬರೆದಾಗ ಆ ಕೊಂಬುಗಳು ಪ ಅಕ್ಷರದ ಪಕ್ಕಕ್ಕೆ ಜೋಡಿಸಲಾಗುತ್ತವೆ.ನುಡಿ ತಂತ್ರಾಂಶದ ಫಾಂಟ್ ರೆಂಡರಿಂಗ್ ನಲ್ಲಿರುವ ಈ ತಪ್ಪನ್ನು ಇತ್ತೀಚಿನ ನುಡಿ ತಂತ್ರಾಂಶದಲ್ಲೇನಾದರೂ ಸರಿ ಮಾಡಿದ್ದಾರೇನೋ ಗೊತ್ತಿಲ್ಲ!</p>
<p>ಇತ್ತೀಚೆಗೆ ಬಿಡುಗದೆಯಾದ, ದೇಶಕಾಲದ ವಿಶೇಷ ಸಂಚಿಕೆ, ಭೈರಪ್ಪನವರ ಕವಲು ಪುಸ್ತಕಗಳ ಮೇಲೆ ಕಣ್ಣಾಡಿಸಿದರೆ ಈ ತಪ್ಪುಗಳು ಹೇರಳವಾಗಿ ಕಾಣಿಸಿ ಅಭಾಸವಾಗುತ್ತದೆ.</p>
<p>ನಾವೇನಾದರೂ ನಮ್ಮ ಶಾಲೆಗಳಲ್ಲಿ ಈ ರೀತಿ ಬರೆದದ್ದಾದರೆ ನಮ್ಮ ಮೇಷ್ಟ್ರುಗಳ ಬೆತ್ತದಿಂದ ಒದೆ ಬೇಳುತ್ತಿತ್ತು!</p>
<p><strong>ಪರಿಹಾರ?</strong></p>
<p>ಎರಡು ಮಾರ್ಗಗಳಲ್ಲಿ ಈ ತೊಂದರೆಯನ್ನು ನಿವಾರಿಸಬಹುದಾಗಿದೆ.</p>
<p>೧) ಯೂನಿಕೋಡ್ ನಲ್ಲಿ ಬರೆಯಬಹುದಾದ ಬರಹ ತಂತ್ರಾಂಶವನ್ನು ಉಪಯೋಗಿಸುವುದು. ಉತ್ತಮ ಫಾಂಟ್‌ಗಳಿಗಾಗಿ ನುಡಿ ತಂತ್ರಾಂಶಕ್ಕೆ ಅದನ್ನು ವರ್ಗಾಯಿಸಬೇಕೆಂದರೆ, &#8220;BARAHA CONVERT&#8221; ತಂತ್ರಾಂಶ ಉಪಯೋಗಿಸಿ ಯೂನಿಕೋಡ್‌ನಿಂದ ANSI ಕೋಡ್ ಗೆ ಮಾರ್ಪಡಿಸಿ ನುಡಿಯಲ್ಲಿ ಉಪಯೋಗಿಸಬಹುದು.</p>
<p>೨) <strong>ನುಡಿಯಲ್ಲೇ ಸರಿಯಾದ &#8220;ಪು&#8221; ಸೃಷ್ಟಿಸುವುದು ಹೇಗೆ?</strong><br />
ಪ ಮತ್ತು ವು ಗಳ ಸಹಾಯದಿಂದ ಸರಿಯಾದ ’ಪು’ ಅಕ್ಷರವನ್ನು ಸೃಷ್ಟಿಸಬಹುದಾಗಿದೆ.</p>
<p>ಈ ಕೆಳಗಿನ ಚಿತ್ರ ನೋಡಿ.</p>
<p><a href="http://samarasa.net/samarasa/wp-content/uploads/2010/07/how-to-write-pu.jpg"><img class="aligncenter size-full wp-image-926" title="how to write pu" src="http://samarasa.net/samarasa/wp-content/uploads/2010/07/how-to-write-pu.jpg" alt="" width="418" height="446" /></a><br />
ಈಗಾಗಲೇ ತಪ್ಪು ’ಪು’ ಸಂಯುಕ್ತಾಕ್ಷರವನ್ನು ಟೈಪ್ ಮಾಡಿ ಆಗಿದ್ದರೆ, ಆ ಕಡತವನ್ನು ಮೈಕ್ರೋಸಾಫ್ಟ್ ಆಫೀಸಿನಲ್ಲಿ ತೆಗೆದು, ತಪ್ಪು ’ಪು’ ಅಕ್ಷರದ ಕೋಡನ್ನು ಸರಿ ’ಪು’ ಅಕ್ಷರದ ಕೋಡಿಗೆ ಒಂದೇ ಬಾರಿ ಹುಡುಕಿ ಬದಲಾಯಿಸಬಹುದು!</p>
]]></content:encoded>
			<wfw:commentRss>http://samarasa.net/samarasa/?feed=rss2&amp;p=924</wfw:commentRss>
		<slash:comments>2</slash:comments>
		</item>
	</channel>
</rss>
