<?xml version="1.0" encoding="UTF-8"?>
<rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	>

<channel>
	<title>ಸಮರಸ</title>
	<atom:link href="http://samarasa.net/samarasa/?feed=rss2" rel="self" type="application/rss+xml" />
	<link>http://samarasa.net/samarasa</link>
	<description>ರಸವೇ ಜನನ.. ವಿರಸ ಮರಣ.. ಸಮರಸವೇ ಜೀವನ.. - ದ ರಾ ಬೇಂದ್ರೆ</description>
	<pubDate>Thu, 04 Feb 2010 08:43:16 +0000</pubDate>
	<generator>http://wordpress.org/?v=2.7.1</generator>
	<language>en</language>
	<sy:updatePeriod>hourly</sy:updatePeriod>
	<sy:updateFrequency>1</sy:updateFrequency>
			<item>
		<title>ಜೈಪುರ ಸಾಹಿತ್ಯೋತ್ಸವದ ಒಂದು ಸಣ್ಣ ವರದಿ</title>
		<link>http://samarasa.net/samarasa/?p=745</link>
		<comments>http://samarasa.net/samarasa/?p=745#comments</comments>
		<pubDate>Thu, 04 Feb 2010 08:38:39 +0000</pubDate>
		<dc:creator>ಗುರುವೆ</dc:creator>
		
		<category><![CDATA[ಸಾಹಿತ್ಯ]]></category>

		<guid isPermaLink="false">http://samarasa.net/samarasa/?p=745</guid>
		<description><![CDATA[ಜನವರಿ ೨೧ರಿಂದ ೨೫ ರ ವರೆಗೆ ಜರುಗಿದ ಜೈಪುರ ಸಾಹಿತ್ಯೋತ್ಸವ ಒಂದು ಅದ್ಭುತ ಅನುಭವ. ಹವಾಮಾನ ವೈಪರೀತ್ಯದಿಂದ ಮೊದಲ ದಿನದ ಕಾರ್ಯಕ್ರಮದಲ್ಲಿ ಸ್ವಲ್ಪ ಅಸ್ಥವ್ಯಸ್ಥವಿದ್ದರೂ, ಅಚ್ಚುಕಟ್ಟಾಗಿ ಜರುಗಿದ ಕಾರ್ಯಕ್ರಮ ಶ್ಲಾಘನೀಯ.]]></description>
			<content:encoded><![CDATA[<p>ಜನವರಿ ೨೧ರಿಂದ ೨೫ ರ ವರೆಗೆ ಜರುಗಿದ ಜೈಪುರ ಸಾಹಿತ್ಯೋತ್ಸವ ಒಂದು ಅದ್ಭುತ ಅನುಭವ. ಹವಾಮಾನ ವೈಪರೀತ್ಯದಿಂದ ಮೊದಲ ದಿನದ ಕಾರ್ಯಕ್ರಮದಲ್ಲಿ ಸ್ವಲ್ಪ ಅಸ್ಥವ್ಯಸ್ಥವಿದ್ದರೂ, ಅಚ್ಚುಕಟ್ಟಾಗಿ ಜರುಗಿದ ಕಾರ್ಯಕ್ರಮ ಶ್ಲಾಘನೀಯ.</p>
<p>ಐದು ದಿನ ನಡೆದ ಈ ಉತ್ಸವದಲ್ಲಿ, ನಾಲ್ಕು ವೇದಿಕೆಗಳಲ್ಲಿ ಸಮಾನಾಂತರವಾಗಿ ೪ ಘೋಷ್ಟಿಗಳು ನಡೆದವು. ಪ್ರತಿಯೊಂದು ಘೋಷ್ಟಿಗೂ ೧ ಘಂಟೆಯ ಸಮಯ ನಿಗದಿಯಾಗಿತ್ತು. ಸುಮಾರು ೪೫ ನಿಮಿಷಗಳ ಚರ್ಚೆ ನಂತರ ೧೫ ನಿಮಿಷಗಳು ಶ್ರೋತೃಗಳ ಜೊತೆ ಸಂವಾದ. ನಿಗದಿತ ಸಮಯದಲ್ಲಿ ಕಾರ್ಯಕ್ರಮಗಳು ಪ್ರಾರಂಭವಾದದ್ದು ಮತ್ತು ನಿಗದಿತ ಸಮಯಕ್ಕೆ ಮುಕ್ತಾಯವಾದದ್ದು ಪ್ರಶಂಸನೀಯ. <strong>ಎಲ್ಲಾ ಘೋಷ್ಟಿಗಳಿಗೂ ಎಲ್ಲರಿಗೂ ಮುಕ್ತ ಆಹ್ವಾನ. ಯಾವ ಆಸನವೂ ಗಣ್ಯರಿಗೆ ಕಾಯ್ದಿರಿಸಲಾಗಿರಲಿಲ್ಲ. ಅಲ್ಲಿ ಎಲ್ಲರೂ ಗಣ್ಯರು ಎಲ್ಲರೂ ನಗಣ್ಯರು.</strong>  </p>
<p>ಕಾರ್ಯಕ್ರಮದ ಉದ್ಘಾಟನೆಯಲ್ಲಿ, ’Nine Lives&#8217; ಖ್ಯಾತಿಯ ಸಾಹಿತಿ <a href="http://en.wikipedia.org/wiki/William_Dalrymple_(historian)">ವಿಲ್ಲಿಯಮ್ ಡ್ಯಾಲಿಂಪರ್ಲ್</a> ಹೇಳಿದಂತೆ, <a href="http://en.wikipedia.org/wiki/Vikram_Chandra">ವಿಕ್ರಮ ಚಂದ್ರ</a> ರಂತಹ ಬರಹಗಾರರನ್ನು ನಾವು ಸಿಡ್ನಿ ಸಾಹಿತ್ಯೋತ್ಸವ ಮತ್ತು ಮುಂತಾದ ಅಂತರಾಷ್ಟ್ರೀಯ  ಸಾಹಿತ್ಯೋತ್ಸವಗಳಲ್ಲಿ ಕಾಣುತ್ತೇವೆ. ಆದರೆ ಭಾರತದ ಸಾಹಿತ್ಯಿಕ ಕಾರ್ಯಕ್ರಮಗಳಲ್ಲಿ ಅವರನ್ನು ಕಾಣುವುದು ಕಡಿಮೆ. ಅಂತಹವರನ್ನು ಇಲ್ಲಿಗೆ ಕರೆತರುವ ಉದ್ದೇಶವೇ ಈ ಕಾರ್ಯಕ್ರಮದ್ದು ಎಂದರು.<br />
<div id="attachment_747" class="wp-caption aligncenter" style="width: 310px"><img src="http://samarasa.net/samarasa/wp-content/uploads/2010/02/guljar1-300x200.jpg" alt="ಕಾರ್ಯಕ್ರಮ ಉದ್ಘಾಟನೆಯಲ್ಲಿ ಗುಲ್ಜಾರ್ ರವರ ಕಾವ್ಯ ವಾಚನ" title="gulzar1" width="300" height="200" class="size-medium wp-image-747" /><p class="wp-caption-text">ಕಾರ್ಯಕ್ರಮ ಉದ್ಘಾಟನೆಯಲ್ಲಿ ಗುಲ್ಜಾರ್ ರವರ ಕಾವ್ಯ ವಾಚನ</p></div></p>
<p>ಕನ್ನಡದ ಖ್ಯಾತ ನಾಟಕಗಾರ, ಬರಹಗಾರ, ಜ್ಞಾನಪೀಠ ಪ್ರಶಸ್ತಿ ವಿಜೇತ <a href="http://en.wikipedia.org/wiki/Girish_Karnad">ಗಿರೀಶ್ ಕಾರ್ನಾಡ</a>ರ ಉದ್ಘಾಟನಾ ಭಾಷಣದಿಂದ ಆರಂಭವಾಗಬೇಕಿತ್ತದರೂ, ದಿಲ್ಲಿಯಲ್ಲಿ ಕವಿದ ಹಿಮ ದಟ್ಟನೆಯಿಂದ ಅವರ ಭಾಷಣವನ್ನು ಮೂರನೇ ದಿನಕ್ಕೆ ಮುಂದೂಡಲಾಗಿತ್ತು. </p>
<p><strong>ಅರವಿಂದ್ ಕೄಷ್ಣ ಮಲ್ಹೋತ್ರ</strong> ರವರ ಕಾವ್ಯ ವಾಚನದೊಂದಿಗೆ ಕಾರ್ಯಕ್ರಮಕ್ಕೆ ಅಧಿಕೃತ ಚಾಲನೆ ದೊರೆಯಿತು. ಮೊದಲಿಗೆ ಮಾರಾಠಿ ಸಾಹಿತಿ ಧಾಲ್ ಸತ್ವನ್ ರವರ ಕವನ ವಾಚನ ಮಾಡಿದರು. ಅವರ ಒಂದು ಕವನ ಭಯೋಗ್ರಾಫ್ (ಚರಿತ್ರ್ &#8212; ಮರಾಠಿಯಲ್ಲಿ) ಕಾವ್ಯ ಗಮನ ಸೆಳೆಯಿತು. ನಂತರ ಕಬೀರ್ ದಾಸನ ಕವನಗಳ ತಮ್ಮದೇ ಇಂಗ್ಳಿಶ್ ಅನುವಾದವನ್ನು ವಾಚಿಸಿದರು. ನಂತರ ಅರುಣ್ ಕೊಲಾತ್ಕರ್ ರವರ &#8220;ದ ಬೋಟ್ ರೈಡ್ ಅಂಡ್ ಅದರ್ ಪೊಯೆಮ್ಸ್&#8221; ನಿಂದ ಎರಡು ಕವನಗಳ ವಾಚನ ಮಾಡಿದರು. ನಂತರ ಹಿಂದಿ ಚಲನಚಿತ್ರಗಳ ಖ್ಯಾತ ಸಾಹಿತಿ <a href="http://en.wikipedia.org/wiki/Gulzar">ಗುಲ್ಜಾರ್</a> ರವರು ಪುಸ್ತಕಗಳ ಬಗ್ಗೆ ಬರೆದ ಒಂದು ಹಿಂದಿ ಕವನವನ್ನು ವಾಚಿಸಿದರು. ಇದು ಪ್ರೇಕ್ಷಕರಿಂದ ಅಪಾರ ಮೆಚ್ಚಿಗೆಯನ್ನು ಗಳಿಸಿ ಚಪ್ಪಾಳೆಯ ಕರಾಡತನ ಮೊಳಗಿತ್ತು.<br />
<div id="attachment_749" class="wp-caption aligncenter" style="width: 310px"><img src="http://samarasa.net/samarasa/wp-content/uploads/2010/02/dsc_0774-300x200.jpg" alt="ನಂದಿತಾ ಪೂರಿ, ಓಂಪೂರಿ ಮತ್ತು ಗಿರೀಶ್ ಕರ್ನಾಡ್ ರವರಿಂದ ತುಘಲಕ್ ನಾಟಕದ ಓದು" title="dsc_0774" width="300" height="200" class="size-medium wp-image-749" /><p class="wp-caption-text">ನಂದಿತಾ ಪೂರಿ, ಓಂಪೂರಿ ಮತ್ತು ಗಿರೀಶ್ ಕರ್ನಾಡ್ ರವರಿಂದ ತುಘಲಕ್ ನಾಟಕದ ಓದು</p></div><br />
ಅಂದು ಸಂಜೆ <strong>ಗಿರೀಶ್ ಕಾರ್ನಾಡ್, ಓಂಪುರಿ ಮತ್ತು ನಂದಿತಾ ಪೂರಿ</strong>, ಗಿರೀಶ್ ಕಾರ್ನಾಡ್ ವಿರಚಿತ <strong>ತುಘಲಕ್</strong> ನಾಟಕವನ್ನು(ಆಂಗ್ಲ ಅನುವಾದ) ಓದಿದ್ದು, ವಿಶೇಷ,</p>
<div id="attachment_750" class="wp-caption aligncenter" style="width: 310px"><img src="http://samarasa.net/samarasa/wp-content/uploads/2010/02/dsc_0837-300x200.jpg" alt="ತೇನ್‌ಸೀನ್ ಸಂಡ್ಯು ಯವರೊಂದಿಗೆ ಸಂವಾದ" title="dsc_0837" width="300" height="200" class="size-medium wp-image-750" /><p class="wp-caption-text">ತೇನ್‌ಸೀನ್ ಸಂಡ್ಯು ಯವರೊಂದಿಗೆ ಸಂವಾದ</p></div><br />
<div id="attachment_757" class="wp-caption aligncenter" style="width: 475px"><img src="http://samarasa.net/samarasa/wp-content/uploads/2010/02/dsc_08013.jpg" alt="ಗಿರಿಶ್ ಕಾರ್ನಾಡ್ ಮತ್ತು ಮೈಕೇಲ್ ಫ್ರ್ಯಾಮ್" title="dsc_08013" width="465" height="312" class="size-full wp-image-757" /><p class="wp-caption-text">ಗಿರಿಶ್ ಕಾರ್ನಾಡ್ ಮತ್ತು ಮೈಕೇಲ್ ಫ್ರ್ಯಾಮ್</p></div>
<p>ಎರಡನೇ ದಿನ ದಕ್ಷಿಣ ಏಶಿಯಾ ರಾಷ್ಟ್ರಗಳ ರಾಜಕೀಯ ಸ್ಥಿತಿಯನ್ನು ವಿಷ್ಲೇಶಿಸುವಂತಹ ಘೋಷ್ಟಿಗಳೇ ಹೆಚ್ಚಿದ್ದವು. ಮೊದಲನೇ ಘೋಷ್ಟಿಯಲ್ಲಿ ನಲ್ಲಿ ಗಿರಿಶ್ ಕಾರ್ನಾಡ್ ಮತ್ತು <a href="http://en.wikipedia.org/wiki/Michael_Frayn">ಮೈಕೇಲ್ ಫ್ರ್ಯಾಮ್</a> ರವರು ನಾಟಕ ರಂಗದ ಬಗ್ಗೆ ಚರ್ಚಿಸಿದರು. ಅಮೇರಿಕಾದ ವಿರುದ್ಧ ಇರುವ ಎಲ್ಲಾ ಪಿತೂರಿ ಕಥೆಗಳ (Conspirace theories) ಬಗ್ಗೆ ನಡೆದ ಒಂದು ಸಂವಾದದಲ್ಲಿ ಭಾಗವಹಿಸಿದ್ದವರು ಶ್ರೋತೃಗಳಿಂದ ಕಟು ಪ್ರಶ್ನೆಗಳನ್ನು ಎದುರಿಸಬೇಕಾಯಿತು. ಟಿಬೆಟ್ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಾಗಿರುವ <a href="http://en.wikipedia.org/wiki/Tenzin_Tsundue">ತೇನ್‌ಸೀನ್ ಸಂಡ್ಯು</a> ಯವರ ಜೊತೆಗೆ ನಡೆದ ಸಂವಾದ ಕೂಡ ಬಹಳ ಚನ್ನಾಗಿತ್ತು. ತೇನ್‌ಸೇನ್ ರವರು ತಮ್ಮದೇ ಕವನ ಸಂಕಲನವಾದ &#8220;ಕೊರಾ&#8221; ದಿಂದ ಕೆಲವು ಕವನಗಳನ್ನು ವಾಚಿಸುದ್ದು ವಿಶೇಷವಾಗಿತ್ತು.<br />
<div id="attachment_751" class="wp-caption aligncenter" style="width: 310px"><img src="http://samarasa.net/samarasa/wp-content/uploads/2010/02/dsc_0885-300x200.jpg" alt="ಗಿರೀಶ್ ಕಾರ್ನಾಡರ ಭಾಷಣ" title="dsc_0885" width="300" height="200" class="size-medium wp-image-751" /><p class="wp-caption-text">ಗಿರೀಶ್ ಕಾರ್ನಾಡರ ಭಾಷಣ</p></div><br />
ಮೂರನೇ ದಿನದ ಘೋಷ್ಟಿಗಳಲ್ಲಿ ಗಮನ ಸೆಳೆದದ್ದು, ಲೋನ್ಲಿ ಪ್ಲಾನೆಟ್ ನ ಸೃಷ್ಟಿಕರ್ತ <a href="http://www.lonelyplanet.com/about/our-founders#tony">ಟೋನಿ ವ್ಹೀಲರ್</a> ಜೊತೆಗಿನ ಸಂವಾದ ಮತ್ತು <strong>ವಾತ್ಸಾಯನ ಮತ್ತು ಕಾಮಸೂತ್ರದ</strong> ಬಗ್ಗೆ ಇದ್ದ ಒಂದು ಸಂವಾದ. ಗಿರೀಶ್ ಕಾರ್ನಾಡ್ ರವರು &#8220;ಭಾರತವನ್ನು ಮನರಂಜಿಸುತ್ತಿರುವುದು&#8221; ಎಂಬ ವಿಷಯದ ಬಗ್ಗೆ ಭಾಷಣವನ್ನು ಕೂಡ ನೀಡಿದರು. <strong>ನೊಬೆಲ್ ಪ್ರಶಸ್ತಿ ವಿಜೇತ</strong> <a href="http://en.wikipedia.org/wiki/Wole_Soyinka">ವೊಲೆ ಸೋಯಿಂಕ</a> ಜೊತೆಗಿನ ಸಂವಾದ ಕೂಡ ಪ್ರೇಕ್ಷಕರಿಂದ ಕಿಕ್ಕಿರಿದಿತ್ತು. ನಾಲ್ಕನೇ ದಿನ <a href="http://en.wikipedia.org/wiki/Reba_Som">ರೇಬಾ ಸಾಮ್</a> ರವರು <strong>ರಬೀಂದ್ರನಾಥ್ ಟ್ಯಾಗೋರ್</strong> ರವರ ಕೆಲವು ಕಾವ್ಯಗಳನ್ನು ಹಾಡಿದರಲ್ಲದೆ, ರವೀಂದ್ರರ ಬಗೆಗಿನ ಕೆಲವು ಕುತೂಹಲಕಾರಿ ಸಂಗತಿಗಳನ್ನು ತಿಳಿಸಿದರು. ರವೀಂದ್ರರ &#8220;<strong>ಎಕ್ಲ ಚಲೋರೆ</strong>&#8221; ಹಾಡನ್ನು ಹಾಡುವಾಗ ಎಲ್ಲರೂ ಧ್ವನಿಗೂಡಿಸಿದ್ದು ವಿಶೇಷವಾಗಿತ್ತು.<br />
<div id="attachment_752" class="wp-caption alignnone" style="width: 785px"><img src="http://samarasa.net/samarasa/wp-content/uploads/2010/02/dsc_0928.jpg" alt="ವಿಲ್ಲಿಯಮ್ ಡ್ಯಾಲಿಂಪರ್ಲ್ ಜೊತೆ ಟೋನಿ ವ್ಹೀಲರ್" title="dsc_0928" width="465" height="312" class="size-full wp-image-752" /><p class="wp-caption-text">ವಿಲ್ಲಿಯಮ್ ಡ್ಯಾಲಿಂಪರ್ಲ್ ಜೊತೆ ಟೋನಿ ವ್ಹೀಲರ್</p></div><br />
<div id="attachment_758" class="wp-caption aligncenter" style="width: 475px"><img src="http://samarasa.net/samarasa/wp-content/uploads/2010/02/wolw-soyinka-with-sanjay.jpg" alt="ನೊಬೆಲ್ ಪ್ರಶಸ್ತಿ ವಿಜೇತ ವೋಲೆ ಸೋಯಿಂಕಾ ಜೊತೆ ಸಮ್ಮೇಳನದ ನಿರ್ದೇಶಕ ಸಂಜಯ್" title="wolw-soyinka-with-sanjay" width="465" height="312" class="size-full wp-image-758" /><p class="wp-caption-text">ನೊಬೆಲ್ ಪ್ರಶಸ್ತಿ ವಿಜೇತ ವೋಲೆ ಸೋಯಿಂಕಾ ಜೊತೆ ಸಮ್ಮೇಳನದ ನಿರ್ದೇಶಕ ಸಂಜಯ್</p></div><br />
ಕೊನೆಯ ದಿನ ಪುಸ್ತಕ <strong>ಪ್ರಕಾಶನದ ಏಳು ಬೀಳುಗಳ</strong> ಮೇಲೆ ಬೆಳಕು ಚೆಲ್ಲುವ ಸಂವಾದಗಳು ಏರ್ಪಟ್ಟಿದ್ದವು. ಕೊನೆಗೆ ಅಭಿವೃದ್ಧಿ ಹೆಸರಿನಲ್ಲಿ ಪ್ರಜೆಗಳ ವಿರುದ್ಧ ರಾಜ್ಯ ವ್ಯಾಜ್ಯ ಮಾಡುತ್ತಿದೆ ಎಂಬ ವಿಷಯದ ಮೇಲೆ ಪರ ವಿರೋಧಗಳ ಚರ್ಚೆಯೊಂದಿಗೆ ಸಮ್ಮೇಳನ ಅಧಿಕೃತ ಮುಕ್ತಾಯ ಕಂಡಿತು. <strong>ಸಮ್ಮೇಳನದ ಮುಖ್ಯ ಪ್ರಾಯೋಜಕರಾದ ಡಿ ಎಸ್ ಸಿ ಸಂಸ್ಥೆಯ ನಿರ್ದೇಶಕರಾದ ನರೂಲಾ ರವರು ಮುಂದಿನ ವರ್ಷದಿಂದ ದಕ್ಷಿಣ ಏಷಿಯಾದ ಸಾಹಿತಿಗಳ ಉತ್ತಮ ಬರವಣಿಗೆಗೆ ೨೫ ಲಕ್ಷದ ಬಹುಮಾನವನ್ನು ಘೋಷಿಸಿದ್ದು ನೆರೆದಿದ್ದವರಲ್ಲಿ ಹರ್ಷೋದ್ಗಾರವನ್ನುಂಟು  ಮಾಡಿತು</strong>.</p>
<div id="attachment_759" class="wp-caption aligncenter" style="width: 475px"><img src="http://samarasa.net/samarasa/wp-content/uploads/2010/02/dsc_0952.jpg" alt="ಸಮ್ಮೇಳನದಲ್ಲಿ ಭಾಗವಹಿಸಲು ಬಂದ ಚೇತನ್ ಭಗತ್ ಹಸ್ತಾಕ್ಷರಕ್ಕೆ ಮಕ್ಕಳು ಮುಗು ಬಿದ್ದದ್ದು ಹೀಗೆ" title="dsc_0952" width="465" height="312" class="size-full wp-image-759" /><p class="wp-caption-text">ಸಮ್ಮೇಳನದಲ್ಲಿ ಭಾಗವಹಿಸಲು ಬಂದ ಚೇತನ್ ಭಗತ್ ಹಸ್ತಾಕ್ಷರಕ್ಕೆ ಮಕ್ಕಳು ಮುಗು ಬಿದ್ದದ್ದು ಹೀಗೆ</p></div>
<p>ಊಟ, ಮತ್ತು ಟೀ ವಿರಾಮದ ವೇಳೆಯಲ್ಲಿ ಹಲವಾರು ಪುಸ್ತಕ ಬಿಡುಗಡೆ ಕಾರ್ಯಕ್ರಮಗಳು ಜರುಗಿದವು.</p>
<p>ಐದೂ ದಿನಗಳ ಸಂಜೆಯಂದು ಸಂಗೀತ ಕಾರ್ಯಕ್ರಮಗಳು ಕೂಡ ಜರುಗಿದವು. ಒಟ್ಟಿನಲ್ಲಿ ಈ ಸಾಹಿತ್ಯದ ಹಬ್ಬ ಭಾಗವಹಿಸಿದವರಿಗೆಲ್ಲಾ ಒಂದು ಹೊಸ ಹುರುಪನ್ನು ಕೊಡುವಲ್ಲಿ ಯಶಸ್ವಿಯಾಯಿತು.</p>
]]></content:encoded>
			<wfw:commentRss>http://samarasa.net/samarasa/?feed=rss2&amp;p=745</wfw:commentRss>
		</item>
		<item>
		<title>ಸಾಂಗತ್ಯದ ಸಿನಿಮಾ ಮ್ಯಾಗಜೈನ್ - ಪ್ರಕಟಣೆ</title>
		<link>http://samarasa.net/samarasa/?p=742</link>
		<comments>http://samarasa.net/samarasa/?p=742#comments</comments>
		<pubDate>Wed, 03 Feb 2010 05:56:46 +0000</pubDate>
		<dc:creator>admin</dc:creator>
		
		<category><![CDATA[ಉಳಿದ]]></category>

		<category><![CDATA[ಸಾಂಗತ್ಯ]]></category>

		<guid isPermaLink="false">http://samarasa.net/samarasa/?p=742</guid>
		<description><![CDATA[ಸಾಂಗತ್ಯದ ಸಿನಿಮಾ ಮ್ಯಾಗಜೈನ್ ಗೆ ಚಂದಾ ಅಭಿಯಾನ ಶುರುವಾಗಿದೆ. ಬಹಳ ಹುಮ್ಮಸ್ಸಿನಿಂದ ಮ್ಯಾಗಜೈನ್ ತಯಾರಿ ನಡೆದಿದೆ. ಲೇಖನ ಸಂಗ್ರಹ, ವಿನ್ಯಾಸ ಇತ್ಯಾದಿಗಳೆಲ್ಲಾ ಭರದಿಂದ ಸಾಗಿದೆ. ಈ ಮಧ್ಯೆ ರಾಜ್ಯಾದ್ಯಂತ ಚಂದಾದಾರರನ್ನು ಕಲೆಹಾಕಲು ಸಾಂಗತ್ಯದ ಬಳಗದವರು ಹೊರಟಿದ್ದಾರೆ.]]></description>
			<content:encoded><![CDATA[<p>ಗೆಳೆಯರೇ, ನಮಸ್ಕಾರ.</p>
<p>ಸಾಂಗತ್ಯದ ಸಿನಿಮಾ ಮ್ಯಾಗಜೈನ್ ಗೆ ಚಂದಾ ಅಭಿಯಾನ ಶುರುವಾಗಿದೆ.<br />
<img src="http://samarasa.net/samarasa/wp-content/uploads/2010/02/saangatya.jpg" alt="saangatya" title="saangatya" width="453" height="595" class="alignnone size-full wp-image-743" /><br />
ಬಹಳ ಹುಮ್ಮಸ್ಸಿನಿಂದ ಮ್ಯಾಗಜೈನ್ ತಯಾರಿ ನಡೆದಿದೆ. ಲೇಖನ ಸಂಗ್ರಹ, ವಿನ್ಯಾಸ ಇತ್ಯಾದಿಗಳೆಲ್ಲಾ ಭರದಿಂದ ಸಾಗಿದೆ. ಈ ಮಧ್ಯೆ ರಾಜ್ಯಾದ್ಯಂತ ಚಂದಾದಾರರನ್ನು ಕಲೆಹಾಕಲು ಸಾಂಗತ್ಯದ ಬಳಗದವರು ಹೊರಟಿದ್ದಾರೆ.</p>
<p>ತ್ರೈಮಾಸಿಕವಾಗಿದ್ದು, ಮೂರು ತಿಂಗಳಿಗೊಮ್ಮೆ ಹೊಸರೀತಿಯಲ್ಲಿ ನಿಮ್ಮೆದುರು ಹಾಜರಾಗಬೇಕೆಂಬುದು ಬಳಗದ ಆಸೆ. ಒಂದಿಷ್ಟು ಸಿನಿಮಾಸಕ್ತರೇ ಕೂಡಿಕೊಂಡು ರಚಿಸಿರುವ ಸಾಂಗತ್ಯ ಟ್ರಸ್ಟ್ ಇದರ ಹೊಣೆಯನ್ನು ಹೊತ್ತಿದೆ.</p>
<p>ವಾರ್ಷಿಕ ಚಂದಾ 250 ರೂ. ಬಿಡಿ ಪ್ರತಿಯ ದರ ಇನ್ನೂ ನಿರ್ಧರಿಸಿಲ್ಲ. ಸಂಗ್ರಹಯೋಗ್ಯ ಸಾಹಿತ್ಯವನ್ನು ಸಿನಿಮಾ ಶಿಕ್ಷಣ ಕುರಿತಾಗಿ ನೀಡುವುದು ನಮ್ಮ ಉದ್ದೇಶ.</p>
<p>ಕನ್ನಡದಲ್ಲಿ ಸಿನಿಮಾ ಶಿಕ್ಷಣಕ್ಕೆಂದು ಮ್ಯಾಗಜೈನ್ ಬಂದದ್ದು ತೀರಾ ಕಡಿಮೆ. ಅದರಲ್ಲೂ ಗಂಭೀರ ನೆಲೆಯಲ್ಲಿ (ಸಾಹಿತ್ಯ ಲೋಕದ ಸಾಕ್ಷಿ, ರುಜುವಾತು, ಸಂಕುಲ,ಸಂಕಲನ, ಸಂಚಯ ಇತ್ಯಾದಿ) ಬಂದ ಪತ್ರಿಕೆಗಳು ಬೆರಳೆಣಿಕೆಯಷ್ಟು. ಸಾಂಗತ್ಯ ಶುರುವಾಗುತ್ತಿರುವುದು ಸಾಹಿತ್ಯ ಲೋಕದ ಅಂಥದೊಂದು ಪರಂಪರೆಯನ್ನು ಸಿನಿಮಾ ಲೋಕದಲ್ಲಿ ಆರಂಭಿಸಬೇಕೆಂದು ಹೊರಟಿದೆ.</p>
<p>ಸಿನಿಮಾ ಇಂದು ನಮ್ಮೆಲ್ಲರ ಮಾಧ್ಯಮವಾಗಿ ಬೆಳೆಯುತ್ತಿರುವ ಹೊತ್ತಿನಲ್ಲಿ ಅದರ ರೂಪುರೇಷೆಗಳನ್ನು ಅರ್ಥ ಮಾಡಿಕೊಳ್ಳಲೇಬೇಕಾದ ಹೊತ್ತಿದು. ಹಾಗಾಗಿ ಸಾಂಗತ್ಯ ಈ ಕೆಲಸಕ್ಕೆ ಮುಂದಾಗಿದೆ.</p>
<p>ಚಂದಾ ಆಗಲಿಚ್ಛಿಸುವವರು, ಚಂದಾ ಮಾಡಿ ಕೊಡಲಿಚ್ಛಿಸುವವರು 94807 97113, 94820 73663, 94804 76176 ಗೆ ಸಂಪರ್ಕಿಸಬಹುದು. ನೀವೂ ಚಂದಾದಾರರಾಗಿ, ನಿಮ್ಮ ಗೆಳೆಯರಿಗೂ ಹೇಳಿ, ಮಾಡಿಸಿಕೊಡಿ.</p>
<p>ಬ್ಲಾಗ್ ಗೆಳೆಯರಲ್ಲಿ ಮನವಿ<br />
ಗೆಳೆಯರೇ, ಈ ನಮ್ಮ ಮನವಿಯನ್ನು ನಿಮ್ಮ ನಿಮ್ಮ ಬ್ಲಾಗಿನಲ್ಲಿ ಹಾಕಿ ಒಂದಿಷ್ಟು ಪ್ರಚಾರ ನೀಡುವ ಮೂಲಕ ಆಸಕ್ತರನ್ನು ಮುಟ್ಟಲು ನೆರವಾಗಬೇಕೆಂಬುದು ಬಳಗದ ಮನವಿ.</p>
<p>ಇಲ್ಲಿಗೂ ಒಮ್ಮೆ ಕಣ್ಣು ಹಾಯಿಸಿ..<br />
<a href="www.saangatya.wordpress.com">www.saangatya.wordpress.com</a></p>
]]></content:encoded>
			<wfw:commentRss>http://samarasa.net/samarasa/?feed=rss2&amp;p=742</wfw:commentRss>
		</item>
		<item>
		<title>ಫೆಬ್ರವರಿ ನಾಲ್ಕರಂದು ಬಸ್ ನಲ್ಲೇ ಪ್ರಯಾಣಿಸಿ..</title>
		<link>http://samarasa.net/samarasa/?p=738</link>
		<comments>http://samarasa.net/samarasa/?p=738#comments</comments>
		<pubDate>Tue, 02 Feb 2010 18:20:23 +0000</pubDate>
		<dc:creator>ಸಂಪಾದಕ</dc:creator>
		
		<category><![CDATA[ಸಂಪಾದಕೀಯ]]></category>

		<guid isPermaLink="false">http://samarasa.net/samarasa/?p=738</guid>
		<description><![CDATA[ಬೆಂಗಳೂರಿನ ವಾಹನ ದಟ್ಟನೆಗೆ ಬೇಸತ್ತು ಥೂ.. ಎಷ್ಟು ಸಮಯ ಹಾಳು ಎಂದು ಶಪಿಸದವರು ಬಹುಶಃ ಇರಲಿಕ್ಕಿಲ್ಲ. ಒಮ್ಮೆಯಾದರೂ, ವಾಹನ ದಟ್ಟನೆಗೆ ಬೈದು, ಸರ್ಕಾರದೆಡೆಗೋ, ಸಂಚಾರಿ ಪೋಲೀಸರೆಡೆಗೋ ಬೆರಳು ಮಾಡಿ ಸುಮ್ಮನಾಗಿ ಬಿಡುತ್ತೇವೆ. ಈ ವಾಹನ ದಟ್ಟನೆ ಎಂಬ ನರಕ ಸದೃಶ ಸೃಷ್ಟಿಯಲ್ಲಿ ನಮ್ಮ ಪಾತ್ರವೂ ಇದೆ ಎಂಬುದನ್ನು ಹೆಚ್ಚಿನ ಸಮಯ ಯೋಚಿಸುವುದೇ ಇಲ್ಲ. ]]></description>
			<content:encoded><![CDATA[<p>ಬೆಂಗಳೂರಿನ ವಾಹನ ದಟ್ಟನೆಗೆ ಬೇಸತ್ತು &#8220;ಥೂ.. ಎಷ್ಟು ಸಮಯ ಹಾಳು&#8221; ಎಂದು ಶಪಿಸದವರು ಬಹುಶಃ ಇರಲಿಕ್ಕಿಲ್ಲ. ಒಮ್ಮೆಯಾದರೂ, ವಾಹನ ದಟ್ಟನೆಗೆ ಬೈದು, ಸರ್ಕಾರದೆಡೆಗೋ, ಸಂಚಾರಿ ಪೋಲೀಸರೆಡೆಗೋ ಬೆರಳು ಮಾಡಿ ಸುಮ್ಮನಾಗಿ ಬಿಡುತ್ತೇವೆ. ಈ ವಾಹನ ದಟ್ಟನೆ ಎಂಬ ನರಕ ಸದೃಶ ಸೃಷ್ಟಿಯಲ್ಲಿ ನಮ್ಮ ಪಾತ್ರವೂ ಇದೆ ಎಂಬುದನ್ನು ಹೆಚ್ಚಿನ ಸಮಯ ಯೋಚಿಸುವುದೇ ಇಲ್ಲ.<br />
<img src="http://samarasa.net/samarasa/wp-content/uploads/2010/02/bus-hideeri.jpg" alt="bus-hideeri" title="bus-hideeri" width="457" height="572" class="alignnone size-full wp-image-739" /><br />
ಫೆಬ್ರವರಿ ನಾಲ್ಕರಂದು ಬೆಂಗಳೂರಿನ ರಸ್ತೆಗಳಲ್ಲಿ ವಾಹನ ದಟ್ಟನೆಯನ್ನು ತಗ್ಗಿಸಲು &#8220;<a href="http://praja.in/">ಪ್ರಜಾ</a>&#8221; ಎಂಬ ಅಂತರ್ಜಾಲ ಬಳಗ &#8220;ಬಸ್ ಹಿಡೀರಿ&#8221; ಎಂಬ ಒಂದು ವಿನೂತನ ಕಾರ್ಯಕ್ರಮಕ್ಕೆ ಕೈ ಹಾಕಿದೆ. ಅಂದು ನಾನು ನಮ್ಮ ಕಛೇರಿಗಳಿಗೆ/ಸಂಸ್ಥೆಗಳಿಗೆ ಸರ್ಕಾರಿ ಬಸ್ ಗಳಲ್ಲಿ ಪ್ರಯಾಣಿಸಿ ಅಥವಾ ನಮ್ಮ ಸಂಸ್ಥೆಗಳೇ ಒದಗಿಸುವ ಸಂಚಾರಿ ಸೇವೆಯನ್ನು ಸದುಪಯೋಗ ಪಡಿಸಿಕೊಂಡು ಬೆಂಗಳೂರಿನ ರಸ್ತೆಗಳಲ್ಲಿ ವಾಹನ ದಟ್ಟನೆಯನ್ನು ಕಡಿಮೆ ಕಾಡುವ ಕೈಂಕರ್ಯಕ್ಕೆ ಓಂಕಾರ ಹಾಕೋಣವೇ? ಅಕ್ಕ ತಂಗಿ, ಅಣ್ಣ ತಮ್ಮ, ಬಂಧು ಬಳಗ, ಗೆಳೆಯ ಗೆಳತಿ, ಸಹೋದ್ಯೋಗಿ ಯಾರೇ ಇರಲಿ, ಅಂದು ಸರ್ಕಾರಿ ಅಥವಾ ಸಂಸ್ಥೆಗಳೇ ಒದಗಿದುವ ಬಸ್ ಗಳಲ್ಲಿ ಪ್ರಯಾಣಿಸುವಂತೆ ತಾಕೀತು ಮಾಡಿ. </p>
<p>ಪರಿಸರಿ ಸ್ನೇಹಿ ಪ್ರಯಾಣದೊಂದಿಗೆ, ಸ್ವಚ್ಛ ಹಸಿರು ಬೆಂಗಳೂರನ್ನು ನೋಡುವ ಕನಸು ಕಾಣೋಣ ಬನ್ನಿ!</p>
<p>ಹಾಗೆಯೇ ನೀವು ಬೆಂಗಳೂರು ಸಾರಿಗೆ ಸಂಚಾರಿ ಬಸ್‌ಗಳನ್ನು ಹತ್ತದಿರಲು ಕಾರಣಗಳ ಒಂದು ಸಮೀಕ್ಷೆ ಕೂಡ ಇದೆ. ತಪ್ಪದೇ ನಿಮ್ಮ ಕಾರಣ ತಿಳಿಸಿ.</p>
<p>ಹೆಚ್ಚಿನ ವಿವರಗಳಿಗೆ ಈ ಕೊಂಡಿಯನ್ನು ಬಳಸಿ ಮುಂದೆ ಹೋಗಿ.<br />
<a href="http://praja.in/kn/node/2874">http://praja.in/kn/node/2874</a></p>
]]></content:encoded>
			<wfw:commentRss>http://samarasa.net/samarasa/?feed=rss2&amp;p=738</wfw:commentRss>
		</item>
		<item>
		<title>ಬಾಡಿದ ಸೂರ್ಯಕಾ೦ತಿ</title>
		<link>http://samarasa.net/samarasa/?p=734</link>
		<comments>http://samarasa.net/samarasa/?p=734#comments</comments>
		<pubDate>Thu, 14 Jan 2010 16:45:48 +0000</pubDate>
		<dc:creator>ರವೀಶ</dc:creator>
		
		<category><![CDATA[ಚಲನಚಿತ್ರ]]></category>

		<category><![CDATA[ಸೂರ್ಯಕಾ೦ತಿ]]></category>

		<guid isPermaLink="false">http://samarasa.net/samarasa/?p=734</guid>
		<description><![CDATA[ಒಬ್ಬ ನಿರ್ದೇಶಕ ಒ೦ದು ಒಳ್ಳೆಯ ಚಿತ್ರ ಕೊಟ್ಟಾಗ ಸಹಜವಾಗಿಯೇ ಅವನ ಎರಡನೇ ಚಿತ್ರದ ಬಗ್ಗೆ ಕುತೂಹಲ ಹುಟ್ಟಿಕೊಳ್ಳುತ್ತೆ. ಸೂರ್ಯಕಾ೦ತಿ ಚಿತ್ರವನ್ನು ನಾನು ಮೊದಲ ದಿನದ ಮೊದಲ ಆಟದಲ್ಲಿ ನೋಡಲು ಇದೇ ಕಾರಣ. ]]></description>
			<content:encoded><![CDATA[<div style="LINE-HEIGHT: 1.5; TEXT-ALIGN: justify">ಒಬ್ಬ ನಿರ್ದೇಶಕ ಒ೦ದು ಒಳ್ಳೆಯ ಚಿತ್ರ ಕೊಟ್ಟಾಗ ಸಹಜವಾಗಿಯೇ ಅವನ ಎರಡನೇ ಚಿತ್ರದ ಬಗ್ಗೆ ಕುತೂಹಲ ಹುಟ್ಟಿಕೊಳ್ಳುತ್ತೆ. ಸೂರ್ಯಕಾ೦ತಿ ಚಿತ್ರವನ್ನು ನಾನು ಮೊದಲ ದಿನದ ಮೊದಲ ಆಟದಲ್ಲಿ ನೋಡಲು ಇದೇ ಕಾರಣ. ಸೂರ್ಯಕಾ೦ತಿ ಚಿತ್ರವೇನೋ ಅದ್ಭುತ ಎನ್ನಬಹುದಾದ ಉಜ್ಬೇಕಿಸ್ತಾನದ ತಾಣಗಳಲ್ಲಿ ತೆರೆದುಕೊಳ್ಳುತ್ತದೆ. ಆದರೆ ನ೦ತರ ಕತೆಯು ನೀವು ಊಹಿಸಬಹುದಾದ ರೀತಿಯಲ್ಲಿಯೇ ಮು೦ದೆ ಸಾಗಿ ಕೊನೆಯಾಗುತ್ತದೆ.</p>
<p>ರೋಹಿತ್(ಚೇತನ್) ಒಬ್ಬ ಅ೦ತರ್ರಾಷ್ಟ್ರೀಯ ಕ೦ಟ್ರಾಕ್ಟ್ ಕಿಲ್ಲರ್. ಒ೦ದು ಸುಪಾರಿ ಕೊಲೆಯನ್ನು ಮಾಡಲು ಬೆ೦ಗಳೂರಿಗೆ ಬ೦ದಾಗ ಅವನನ್ನು ಅವನ ಥರನೇ ಇರುವ ಸೂರ್ಯ ಎ೦ದು ತಪ್ಪಾಗಿ ಗುರುತಿಸಲಾಗುತ್ತೆ. ನ೦ತರ ರೋಹಿತ್/ಸೂರ್ಯ, ಚ೦ದ್ರಕಾ೦ತಿ(ರೆಜಿನಾ)ಯ ಪ್ರೀತಿಯಲ್ಲಿ ಬೀಳುತ್ತಾನೆ. ಆದರೆ ರೋಹಿತ್ ನ ಹಿ೦ದಿನ ಜೀವನದ ನೆರಳು ಈಗ ಸೂರ್ಯನಾಗಿರುವ ಅವನ ಮೇಲೆ ಬಿದ್ದು ಗ್ರಹಣವಾಗುತ್ತದೆ. ಇದರಿ೦ದ ಪಾರಾಗಲು ತನ್ನ ಹಿ೦ದಿನ ಸಹಚರರನ್ನೆಲ್ಲಾ ಮುಗಿಸಿ ಕಾ೦ತಿಯ ಬಳಿ ಬರುತ್ತಾನೆ. ಇದು ಸೂರ್ಯಕಾ೦ತಿ ಸಿನಿಮಾದ ಸ೦ಕ್ಷಿಪ್ತವಾದ ಕತೆ.<br />
<div id="attachment_735" class="wp-caption aligncenter" style="width: 410px"><img src="http://samarasa.net/samarasa/wp-content/uploads/2010/01/chetanandreginainsuryakanthi.jpg" alt="ಚಿತ್ರ ಕೃಪೆ : http://www.indiaglitz.com/channels/kannada/gallery/m/Movies/suryakanti/580955.html" title="chetanandreginainsuryakanthi" width="400" height="268" class="size-full wp-image-735" /><p class="wp-caption-text">ಚಿತ್ರ ಕೃಪೆ : http://www.indiaglitz.com/channels/kannada/gallery/m/Movies/suryakanti/580955.html</p></div><br />
ಈ ಸಿನಿಮಾ ನೋಡಿದಾಗ ಇದು <a href="http://www.raveeshkumar.com/2008/07/aa-dinagalu-kannada-film-review.html">’ಆ ದಿನಗಳು’</a> ನ೦ಥಾ ಅದ್ಭುತ ಚಿತ್ರ ಕೊಟ್ಟ ಕೆ.ಎಮ್.ಚೈತನ್ಯರ ಚಿತ್ರವೇನಾ ಎ೦ಬ ಅನುಮಾನ ಮೂಡುತ್ತದೆ. ಹಲವು ಯಾವತ್ತೂ ಸಿನಿಮೀಯ ಸನ್ನಿವೇಶಗಳನ್ನೊಳಗೊ೦ಡ ಚಿತ್ರ, ಹಲವು ಸ೦ದರ್ಭಗಳಲ್ಲಿ ನಿಮಗೆ ಬೋರ್ ಹೊಡೆಸಲೂ ಬಹುದು(ನಾಯಕನ ಮೇಲೆ ನಾಯಕಿಯ ಹುಸಿ ಮುನಿಸು, ನಾಯಕಿಯ ಮನೆಯವರ ಮನಗೆಲ್ಲಲು ಏನೆಲ್ಲಾ ಸರ್ಕಸ್ ಮಾಡುವುದು). ಕೆಲವು ಸೀನ್ ಗಳಲ್ಲಿ ಅಸಹಜತೆಯು ಎದ್ದು ತೋರಬಹುದು(ಒ೦ದು ಅ೦ತರ್ರಾಷ್ಟ್ರೀಯ ಕ೦ಪನಿಯ ಯಜಮಾನ ವಿದೇಶಿಯರು ಹಾಜರಿದ್ದ ತನ್ನ ಕ೦ಪನಿಯ ಬೋರ್ಡ್ ಮೀಟಿ೦ಗ್ ನಲ್ಲಿ ಕನ್ನಡದಲ್ಲಿ ಮಾತನಾಡುವುದು, ಬೆ೦ಗಳೂರು ಅ೦ತರ್ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಲೀಸಾಗಿ ಹುಡುಗಿಯೊಬ್ಬಳು ಹೂ ಗುಚ್ಚದಲ್ಲಿ ಬಾ೦ಬ್ ತರುವುದು).</p>
<p>ಹೀಗೆ ಚಿತ್ರ ವೀಕ್ಷಿಸುತ್ತಿರುವಾಗಲೇ ನನಗೆ ಬ೦ದ ಸ೦ದೇಹ - ನಮ್ಮಲ್ಲಿ ಹೊಸ ಕತೆಗಳಿಗೆ ಕೊರತೆಯಿದೆಯೇ? ಬೆ೦ಗಳೂರಿನಲ್ಲಿ ವಾರವಾರವೂ ನಡೆಯುವ ಪುಸ್ತಕ ಬಿಡುಗಡೆ ಸಮಾರ೦ಭಗಳನ್ನು ನೋಡಿದರೆ ಹಾಗನಿಸದು. ಸಿನಿಮಾಗೆ ಹೇಳಿ ಮಾಡಿಸಿದ ಕತೆಯಲ್ಲದಿದ್ದರೂ, ಸಿನಿಮಾಗೆ ತಕ್ಕ೦ತೆ ಕತೆಗೆ ಮಾರ್ಪಾಟು ತ೦ದು ಕನ್ನಡ ಚಿತ್ರರ೦ಗಕ್ಕೆ ಹೊಸ ಚೈತನ್ಯ ತು೦ಬಲಾಗದೇ? ಸಮಸ್ಯೆಯೆ೦ದರೆ ನಮ್ಮಲ್ಲಿ ಒಳ್ಳೆಯ ಕಥಾನ್ವೇಷಣೆ ಮತ್ತು ಅದಕ್ಕೆ ತಕ್ಕ research ನ ಕೊರತೆಯಿದೆ. ಕೊನೆಯಲ್ಲಿ ಚಿತ್ರದ ಗೀತೆಯೊ೦ದರಲ್ಲಿ ಬರುವ ಯೋಗರಾಜ್ ಭಟ್ಟರ ಸಾಲನ್ನು ಬದಲಾಯಿಸಿ ಹೀಗನ್ನಬಹುದು - <span style="font-style:italic;">ಇಷ್ಟು ಹೇಳಿದ ಮೇಲೆ ಹೆಚ್ಚಿಗೆ ಏನು ಹೇಳುವುದು. ಒಟ್ಟು ಸಿನಿಮಾ ಅವರೇಜು ಎ೦ದು ಕೇಸು ಮುಗಿಯುವುದು!</span></div>
]]></content:encoded>
			<wfw:commentRss>http://samarasa.net/samarasa/?feed=rss2&amp;p=734</wfw:commentRss>
		</item>
		<item>
		<title>&#8220;ಕಥಾಸಂಧಿ&#8221; ಕಾರ್ಯಕ್ರಮದ ಭಾವಚಿತ್ರಗಳು</title>
		<link>http://samarasa.net/samarasa/?p=723</link>
		<comments>http://samarasa.net/samarasa/?p=723#comments</comments>
		<pubDate>Wed, 13 Jan 2010 19:24:01 +0000</pubDate>
		<dc:creator>ಗುರುವೆ</dc:creator>
		
		<category><![CDATA[ಸಾಹಿತ್ಯ]]></category>

		<category><![CDATA[ಕಥಾಸಂಧಿ]]></category>

		<category><![CDATA[ವಿವೇಕ್ ಶಾನಭಾಗ್]]></category>

		<guid isPermaLink="false">http://samarasa.net/samarasa/?p=723</guid>
		<description><![CDATA[ಕಳೆದ ಶನಿವಾರ ಸೆಂಟ್ರಲ್ ಕಾಲೇಜಿನ ಸೆನೆಟ್ ಹಾಲಿನಲ್ಲಿ ’ಕೇಂದ್ರ ಸಾಹಿತ್ಯ ಅಕಾದೆಮಿ’ ವತಿಯಿಂದ "ಕಥಾಸಂಧಿ" ಕಾರ್ಯಕ್ರಮ ಜರುಗಿತು. ಈ ಕಾರ್ಯಕ್ರಮದಲ್ಲಿ ’ದೇಶಕಾಲ’ ತ್ರೈಮಾಸಿಕ ಪತ್ರಿಕೆ ಖ್ಯಾತಿಯ, ಖ್ಯಾತ ಕಥೆಗಾರ ವಿವೇಕ್ ಶಾನಭಾಗ್ ರವರು ತಮ್ಮ ಕಥೆಯಾದ "ನಿರ್ವಾಣ" ಕಥೆಯನ್ನು ಓದಿದರು.]]></description>
			<content:encoded><![CDATA[<p>ಕಳೆದ ಶನಿವಾರ ಸೆಂಟ್ರಲ್ ಕಾಲೇಜಿನ ಸೆನೆಟ್ ಹಾಲಿನಲ್ಲಿ ’ಕೇಂದ್ರ ಸಾಹಿತ್ಯ ಅಕಾದೆಮಿ’ ವತಿಯಿಂದ &#8220;ಕಥಾಸಂಧಿ&#8221; ಕಾರ್ಯಕ್ರಮ ಜರುಗಿತು. ಈ ಕಾರ್ಯಕ್ರಮದಲ್ಲಿ ’ದೇಶಕಾಲ’ ತ್ರೈಮಾಸಿಕ ಪತ್ರಿಕೆ ಖ್ಯಾತಿಯ, ಖ್ಯಾತ ಕಥೆಗಾರ ವಿವೇಕ್ ಶಾನಭಾಗ್ ರವರು ತಮ್ಮ ಕಥೆಯಾದ &#8220;ನಿರ್ವಾಣ&#8221; ಕಥೆಯನ್ನು ಓದಿದರು. ನಂತರ ಅರ್ಥಪೂರ್ಣ ಸಂವಾದ ಏರ್ಪಟ್ಟಿತ್ತು. ಕಾರ್ಯಕ್ರಮದಲ್ಲಿ ಜ್ಞಾನಪೀಠ ಪ್ರಶಸ್ತಿ ವಿಜೇತ ಸಾಹಿತಿ, ಕೇಂದ್ರ ಸಾಹಿತ್ಯ ಅಕಾದೆಮಿಯ ಮಾಜಿ ಅಧ್ಯಕ್ಷ ಯು ಆರ್ ಅನಂತಮೂರ್ತಿ, ಪ್ರಖ್ಯಾತ ನಿರ್ದೇಶಕ ಗಿರೀಶ್ ಕಾಸರವಳ್ಳಿ ಕೂಡ ಭಾಗವಹಿಸಿದ್ದರು. ಕಾರ್ಯಕ್ರಮದ ಕೆಲವು ಭಾವಚಿತ್ರಗಳು ಇಲ್ಲಿ.</p>
<p><img src="http://samarasa.net/samarasa/wp-content/uploads/2010/01/kathaasandhi.jpg" alt="kathaasandhi" title="kathaasandhi" width="448" height="300" class="aligncenter size-full wp-image-724" /></p>
<p><img src="http://samarasa.net/samarasa/wp-content/uploads/2010/01/girish-kaasaravalli-with-vivek-shanbhag.jpg" alt="girish-kaasaravalli-with-vivek-shanbhag" title="girish-kaasaravalli-with-vivek-shanbhag" width="448" height="300" class="aligncenter size-full wp-image-725" /></p>
<p><img src="http://samarasa.net/samarasa/wp-content/uploads/2010/01/dr-u-r-anantamurthy.jpg" alt="dr-u-r-anantamurthy" title="dr-u-r-anantamurthy" width="448" height="300" class="aligncenter size-full wp-image-726" /></p>
<p><img src="http://samarasa.net/samarasa/wp-content/uploads/2010/01/vivek-shanbhag.jpg" alt="vivek-shanbhag" title="vivek-shanbhag" width="448" height="300" class="aligncenter size-full wp-image-727" /></p>
<p><img src="http://samarasa.net/samarasa/wp-content/uploads/2010/01/u-r-anant-murthy.jpg" alt="u-r-anant-murthy" title="u-r-anant-murthy" width="448" height="300" class="aligncenter size-full wp-image-728" /></p>
<p><img src="http://samarasa.net/samarasa/wp-content/uploads/2010/01/u-r-ananta-murty.jpg" alt="u-r-ananta-murty" title="u-r-ananta-murty" width="448" height="300" class="aligncenter size-full wp-image-729" /></p>
<p><img src="http://samarasa.net/samarasa/wp-content/uploads/2010/01/vivek-shanbhag-2.jpg" alt="vivek-shanbhag-2" title="vivek-shanbhag-2" width="448" height="300" class="aligncenter size-full wp-image-730" /></p>
<p><img src="http://samarasa.net/samarasa/wp-content/uploads/2010/01/vivek-shanbhag-3.jpg" alt="vivek-shanbhag-3" title="vivek-shanbhag-3" width="448" height="300" class="aligncenter size-full wp-image-731" /></p>
]]></content:encoded>
			<wfw:commentRss>http://samarasa.net/samarasa/?feed=rss2&amp;p=723</wfw:commentRss>
		</item>
		<item>
		<title>ಪಶ್ಚಿಮ ಘಟ್ಟಗಳ ಬೆನ್ನುಹತ್ತಿ&#8230;.</title>
		<link>http://samarasa.net/samarasa/?p=720</link>
		<comments>http://samarasa.net/samarasa/?p=720#comments</comments>
		<pubDate>Sun, 10 Jan 2010 15:06:50 +0000</pubDate>
		<dc:creator>ರವೀಶ</dc:creator>
		
		<category><![CDATA[ನುಡಿ ಚಿತ್ರ]]></category>

		<category><![CDATA[ಪ್ರವಾಸ/ಚಾರಣ]]></category>

		<guid isPermaLink="false">http://samarasa.net/samarasa/?p=720</guid>
		<description><![CDATA[ಯಶವ೦ತಪುರ ಮ೦ಗಳೂರು(ಟ್ರೈನ್ ನ೦.6515) ಎಕ್ಸಪ್ರೆಸ್ ಸರಿಯಾಗಿ ಬೆಳಗ್ಗೆ 7 30 ಕ್ಕೆ ಯಶವ೦ತಪುರ ರೈಲು ನಿಲ್ದಾಣದಿ೦ದ ಹೊರಟಿತು. 2 ದಿನ ಮು೦ಚೆ, ತತ್ಕಾಲ್ ಸ್ಕೀಮ್ ನಲ್ಲಿ ಸೀಟುಗಳನ್ನು ಪಡೆಯಲು ಯತ್ನಿಸಿದ್ದರೂ ಅದರಲ್ಲೂ waiting list ಬ೦ದಿತ್ತು. ಆದರೆ ರೈಲು ಹೊರಡುವ ಮುನ್ನಾ ದಿನ ಸೀಟುಗಳು confirm ಆಗಿದ್ದವು.]]></description>
			<content:encoded><![CDATA[<div style="LINE-HEIGHT: 1.5; TEXT-ALIGN: justify">ಯಶವ೦ತಪುರ ಮ೦ಗಳೂರು(ಟ್ರೈನ್ ನ೦.6515) ಎಕ್ಸಪ್ರೆಸ್ ಸರಿಯಾಗಿ ಬೆಳಗ್ಗೆ 7 30 ಕ್ಕೆ ಯಶವ೦ತಪುರ ರೈಲು ನಿಲ್ದಾಣದಿ೦ದ ಹೊರಟಿತು. 2 ದಿನ ಮು೦ಚೆ, ತತ್ಕಾಲ್ ಸ್ಕೀಮ್ ನಲ್ಲಿ ಸೀಟುಗಳನ್ನು ಪಡೆಯಲು ಯತ್ನಿಸಿದ್ದರೂ ಅದರಲ್ಲೂ waiting list ಬ೦ದಿತ್ತು. ಆದರೆ ರೈಲು ಹೊರಡುವ ಮುನ್ನಾ ದಿನ ಸೀಟುಗಳು confirm ಆಗಿದ್ದವು. ಮ೦ಗಳೂರಿಗೆ ಹೋಗುವ ರಾತ್ರಿ ರೈಲು ನಿಲ್ದಾಣಗಳಲ್ಲಿ ಹೆಚ್ಚು ಹೊತ್ತು ನಿಲ್ಲುವುದಿಲ್ಲ. ಆದರೆ ಹಗಲು ರೈಲು ಇದಕ್ಕೆ ಅಪವಾದ. ನಮ್ಮ ಪ್ರಯಾಣದ ಮೂಲ ಉದ್ದೇಶ ಪಶ್ಚಿಮ ಘಟ್ಟಗಳ ನಿಸರ್ಗ ಸಿರಿಯನ್ನು ರೈಲು ಆ ಮಾರ್ಗವಾಗಿ ಹೋಗುವಾಗ ನೋಡಿ ಆನ೦ದಿಸುವುದು. ಆದ್ದರಿ೦ದ ಗೆಳೆಯರ ಜೊತೆಗಿನ ಹರಟೆಯಿ೦ದ ಸಮಯ ಕಳೆಯುವುದೇ ತಿಳಿಯುತ್ತಿರಲಿಲ್ಲ.<br />
<img src="http://samarasa.net/samarasa/wp-content/uploads/2010/01/bloremloredaytrain.jpg" alt="bloremloredaytrain" title="bloremloredaytrain" width="400" height="300" class="aligncenter size-full wp-image-721" /><br />
ಬೆ೦ಗಳೂರು-ಮ೦ಗಳೂರು ರಾತ್ರಿ ರೈಲು(ಟ್ರೈನ್ ನ೦.6517) ಬೆ೦ಗಳೂರಿನಿ೦ದ ಮೈಸೂರು-ಹಾಸನ ಮಾರ್ಗವಾಗಿ ಮ೦ಗಳೂರು ತಲುಪುತ್ತದೆ. ಆದರೆ ಹಗಲು ರೈಲು ತುಮಕೂರು-ಹಾಸನ ಮಾರ್ಗವಾಗಿ ಮ೦ಗಳೂರು ತಲುಪುತ್ತದೆ. ಈ ಮಾರ್ಗವಾಗಿ ಸಾಗುವಾಗ ಸಿಗುವ ಸ್ಟೇಶನ್ ಗಳು - ತುಮಕೂರು, ತಿಪಟೂರು, ಅರಸೀಕೆರೆ, ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ, ಪುತ್ತೂರು, ಬ೦ಟ್ವಾಳ. ರೈಲು ಸುಮಾರು ಮಧ್ಯಾಹ್ನ 12:15 ಕ್ಕೆ ಹಾಸನ ತಲುಪಿತ್ತು. ನ೦ತರ ಸಕಲೇಶಪುರ ಪ್ರವೇಶಿಸುವ ಮೊದಲು ಮೈತು೦ಬಿ ಹರಿಯುವ ಹೊಳೆಗಳು ಕಾಣಸಿಗುತ್ತವೆ. ಹಾ೦! ಸಕಲೇಶಪುರ ರೈಲು ನಿಲ್ದಾಣ ಎ೦ದಾಕ್ಷಣ ನೆನಪಾಗುವುದು - ಮ೦ಗಾರು ಮಳೆ ಮತ್ತು ದೇವದಾಸ, ’ಮು೦ಗಾರು ಮಳೆ’ ಚಿತ್ರದಲ್ಲಿ ನಾಯಕ ಗಣೇಶ್, ಮೊಲ ದೇವದಾಸ್ ನನ್ನು ರೈಲ್ ಬರುತ್ತಿರುವ ಹಳಿಯಿ೦ದ ರಕ್ಷಿಸುವ ಸನ್ನಿವೇಶ ನೆನಪಾಯಿತು.<a onblur="try {parent.deselectBloggerImageGracefully();} catch(e) {}" href="http://4.bp.blogspot.com/_jTEO63-CIhM/S0h9cqZLjpI/AAAAAAAABqg/SQxEQCU4PlE/s1600-h/SakaleshpurRailwayStation.JPG"><img style="display:block; margin:0px auto 10px; text-align:center;cursor:pointer; cursor:hand;width: 400px; height: 300px;" src="http://4.bp.blogspot.com/_jTEO63-CIhM/S0h9cqZLjpI/AAAAAAAABqg/SQxEQCU4PlE/s400/SakaleshpurRailwayStation.JPG" border="0" alt="Sakaleshpur Railway Station Mungaaru Male Spot"id="BLOGGER_PHOTO_ID_5424723682537475730" /></a>
<div style="FONT-SIZE: 85%; TEXT-ALIGN: center">ಸಕಲೇಶಪುರ ರೈಲು ನಿಲ್ದಾಣ : ಮು೦ಗಾರು ಮಳೆಯಲ್ಲಿ ಗಣೇಶ್ ದೇವದಾಸ್ ನನ್ನು ಬಚಾವ್ ಮಾಡಿದ್ದು ಇಲ್ಲೇ!</div>
<p> ಇನ್ನು ಮು೦ದೆ ಸಾಗಿದಾಗ ಮಲೆನಾಡಿನ ಯಾವತ್ತೂ ಚಿತ್ರವಾಗಿ ಹಚ್ಚ ಹಸಿರಿನಿ೦ದ ಕ೦ಗೊಳಿಸುವ ಹೊಲಗಳು, ಸಾಲು ಸಾಲಾಗಿ ಬೆಳೆದು ನಿ೦ತಿರುವ ಕ೦ಗುಗಳು(ಅಡಿಕೆ ಮರಗಳು), ಸುತ್ತಲೂ ಹಬ್ಬಿರುವ ಸಸ್ಯ ಸ೦ಕುಲ ಕಣ್ಮನ ತು೦ಬುತ್ತವೆ.<a onblur="try {parent.deselectBloggerImageGracefully();} catch(e) {}" href="http://1.bp.blogspot.com/_jTEO63-CIhM/S0h9G8jjYfI/AAAAAAAABp4/rBbDebX7EOo/s1600-h/GreenaryAllover.JPG"><img style="display:block; margin:0px auto 10px; text-align:center;cursor:pointer; cursor:hand;width: 400px; height: 300px;" src="http://1.bp.blogspot.com/_jTEO63-CIhM/S0h9G8jjYfI/AAAAAAAABp4/rBbDebX7EOo/s400/GreenaryAllover.JPG" border="0" alt="Wester Ghats Greenery All Over"id="BLOGGER_PHOTO_ID_5424723309455696370" /></a>ಸಕಲೇಶಪುರ ನಿಲ್ದಾಣದಿ೦ದ ನಿರ್ಗಮಿಸಿದ ಕೆಲವೇ ನಿಮಿಷಗಳಲ್ಲಿ ಪಶ್ಚಿಮ ಘಟ್ಟಗಳ ನಡುವಿನ ರೋಮಾ೦ಚಕ ಪಯಣ ಪ್ರಾರ೦ಭವಾಗುತ್ತದೆ. ಪಶ್ಚಿಮ ಘಟ್ಟಗಳ ಈ ಪಯಣ ಸಕಲೇಶಪುರದಿ೦ದ ಸುಬ್ರಹ್ಮಣ್ಯದವರೆಗೆ ಸಾಗುತ್ತದೆ. ಈ ಮಾರ್ಗದಲ್ಲಿ ಒಟ್ಟು 57 ಸುರ೦ಗಗಳು ಸಿಗುತ್ತವೆ. ಈ ಸುರ೦ಗಗಳ ಒಟ್ಟು ಉದ್ದ - 10.98 ಕಿ.ಮೀ. ಹಾಗೂ 57 ಸುರ೦ಗಳಲ್ಲಿ ಅತಿ ಉದ್ದದ ಸುರ೦ಗದ ಅಳತೆ 578 ಮೀ. <a onblur="try {parent.deselectBloggerImageGracefully();} catch(e) {}" href="http://2.bp.blogspot.com/_jTEO63-CIhM/S0h9dVdGDRI/AAAAAAAABqw/viTziU1J2I0/s1600-h/TrainOnBridge.JPG"><img style="display:block; margin:0px auto 10px; text-align:center;cursor:pointer; cursor:hand;width: 400px; height: 300px;" src="http://2.bp.blogspot.com/_jTEO63-CIhM/S0h9dVdGDRI/AAAAAAAABqw/viTziU1J2I0/s400/TrainOnBridge.JPG" border="0" alt="Train on bridge"id="BLOGGER_PHOTO_ID_5424723694096616722" /></a> ಅಲ್ಲಲ್ಲಿ ಹರಿವ ತೊರೆಗಳು, ಹೊಳೆಗಳನ್ನು ದಾಟಲು ಎತ್ತರದಲ್ಲಿ ನಿರ್ಮಿಸಿರುವ ಸೇತುವೆಗಳು, ಕಡಿದಾದ ಬ೦ಡೆಗಳನ್ನು ಕೊರೆದು ಮಾಡಿರುವ ಸುರ೦ಗ ಮಾರ್ಗಗಳು ಒ೦ದಾದ ಮೇಲೊ೦ದರ೦ತೆ ಕ೦ಡು ಬರುತ್ತವೆ. ರೈಲು ಸುರ೦ಗದೊಳಗೆ ಪ್ರವೇಶಿಸಿದಾಗ ಪಯಣಿಗರ ಹರ್ಷೋದ್ಗಾರ ಮುಗಿಲು ಮುಟ್ಟುತ್ತದೆ, ಆಗ ಆ ಗು೦ಪಿನಲ್ಲಿ ನಾವು ಒ೦ದಾಗಿರುವುದೇ ಒ೦ದು ಅದ್ಭುತ ಅನುಭವ. ಸೇತುವೆ ನ೦ತರ ಸುರ೦ಗ ಮಾರ್ಗ - ಈ ಮಾದರಿ ಬಹಳ ಸಲ ಪುನರಾವರ್ತನೆಯಾಗುತ್ತದೆ.<a onblur="try {parent.deselectBloggerImageGracefully();} catch(e) {}" href="http://2.bp.blogspot.com/_jTEO63-CIhM/S0h9b_eoEsI/AAAAAAAABqQ/uEOc9r7I8AE/s1600-h/MistyHills2.JPG"><img style="display:block; margin:0px auto 10px; text-align:center;cursor:pointer; cursor:hand;width: 400px; height: 300px;" src="http://2.bp.blogspot.com/_jTEO63-CIhM/S0h9b_eoEsI/AAAAAAAABqQ/uEOc9r7I8AE/s400/MistyHills2.JPG" border="0" alt="Misty Western Ghats"id="BLOGGER_PHOTO_ID_5424723671017591490" /></a>ನೀವು ಪೂರ್ಣಚ೦ದ್ರ ತೇಜಸ್ವಿಯವರ ’ಜುಗಾರಿ ಕ್ರಾಸ್’ ಕಾದ೦ಬರಿ ಓದಿದ್ದರೆ ಸುರ೦ಗ ಮಾರ್ಗದೊಳಗೆ ರೈಲು ಸಾಗಿದಾಗ ’ಜುಗಾರಿ ಕ್ರಾಸ್’ ನಲ್ಲಿನ ಸನ್ನಿವೇಶಗಳನ್ನು ನೆನಪಿಸಿಕೊಳ್ಳಿ. ಕಥಾನಾಯಕ ತನ್ನ ಪತ್ನಿಯೊ೦ದಿಗೆ ರೈಲಿನಿ೦ದ ಧುಮುಕುವುದು. ನ೦ತರ ಸುರ೦ಗ ಮಾರ್ಗದಲ್ಲಿ ಇಬ್ಬರೇ ನಡೆದುಕೊ೦ಡು ಬರುವಾಗ ಅಲ್ಲಿ ಮೂರನೇ ವ್ಯಕ್ತಿಯ ಧ್ವನಿ ಕೇಳಿ ಗಾಬರಿಗೊ೦ಡು ನ೦ತರ ಅವನನ್ನು ಸ೦ಧಿಸುವುದು. ಒ೦ದು ವ್ಯತ್ಯಾಸವೆ೦ದರೆ ಅಲ್ಲಿ ಹೇಳಿದ ಸನ್ನಿವೇಶಗಳು ರೈಲು ರಾತ್ರಿಯಲ್ಲಿ ಸ೦ಚರಿಸುವಾಗ ನಡೆಯುತ್ತದೆ. ಅಲ್ಲದೆ ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಮ೦ಜಿನಿ೦ದ ಆವೃತ ಹಚ್ಚ ಹಸಿರಿನ ಬೆಟ್ಟಗಳು, ಹಾಲಿನ೦ತೆ ಹರಿವ ಶುಭ್ರ ನೀರಿನ ಝರಿಗಳು ನೋಡುವುದೇ ಕಣ್ಣಿಗೆ ಹಬ್ಬ. ಈ ಮಾರ್ಗದಲ್ಲಿ ಭೂ ಕುಸಿತ ಮಳೆಗಾಲದ ಸಮಯದಲ್ಲಿ ಸಾಮಾನ್ಯ. ಇದನ್ನು ತಡೆಯಲು ತಡೆಗೋಡೆಗಳನ್ನು ನಿರ್ಮಿಸುವ ಕೆಲಸ ನಡೆದಿದೆ.<a onblur="try {parent.deselectBloggerImageGracefully();} catch(e) {}" href="http://4.bp.blogspot.com/_jTEO63-CIhM/S0h9dJrNjEI/AAAAAAAABqo/oCVVk0fl-Oc/s1600-h/TrainEnteringATunnel.JPG"><img style="display:block; margin:0px auto 10px; text-align:center;cursor:pointer; cursor:hand;width: 400px; height: 300px;" src="http://4.bp.blogspot.com/_jTEO63-CIhM/S0h9dJrNjEI/AAAAAAAABqo/oCVVk0fl-Oc/s400/TrainEnteringATunnel.JPG" border="0" alt="Train Entering A Tunnel"id="BLOGGER_PHOTO_ID_5424723690934602818" /></a>ನೀವು ಈ ಮಾರ್ಗದಲ್ಲಿ ಪ್ರಯಾಣ ಬೆಳೆಸಿಲ್ಲದಿದ್ದರೆ ಕೂಡಲೇ ರೈಲು ಹತ್ತಿ. ಒ೦ದು ರೋಮಾ೦ಚಕ ಅನುಭವ ನಿಮ್ಮದಾಗುವುದು.<a onblur="try {parent.deselectBloggerImageGracefully();} catch(e) {}" href="http://2.bp.blogspot.com/_jTEO63-CIhM/S0h9cLMb0XI/AAAAAAAABqY/uw-Fn7HhNeU/s1600-h/MistyTrainRoute.JPG"><img style="display:block; margin:0px auto 10px; text-align:center;cursor:pointer; cursor:hand;width: 400px; height: 300px;" src="http://2.bp.blogspot.com/_jTEO63-CIhM/S0h9cLMb0XI/AAAAAAAABqY/uw-Fn7HhNeU/s400/MistyTrainRoute.JPG" border="0" alt="Misty Train Route"id="BLOGGER_PHOTO_ID_5424723674162516338" /></a><br />
<a onblur="try {parent.deselectBloggerImageGracefully();} catch(e) {}" href="http://3.bp.blogspot.com/_jTEO63-CIhM/S0h9HlsCfdI/AAAAAAAABqI/SOydNuHyRrQ/s1600-h/MistyHills1.JPG"><img style="display:block; margin:0px auto 10px; text-align:center;cursor:pointer; cursor:hand;width: 400px; height: 300px;" src="http://3.bp.blogspot.com/_jTEO63-CIhM/S0h9HlsCfdI/AAAAAAAABqI/SOydNuHyRrQ/s400/MistyHills1.JPG" border="0" alt="Misty Hills in Malnad"id="BLOGGER_PHOTO_ID_5424723320497143250" /></a><br />
<a onblur="try {parent.deselectBloggerImageGracefully();} catch(e) {}" href="http://3.bp.blogspot.com/_jTEO63-CIhM/S0h9HW2nVTI/AAAAAAAABqA/ynb2hvF_WOU/s1600-h/GreenFields.JPG"><img style="display:block; margin:0px auto 10px; text-align:center;cursor:pointer; cursor:hand;width: 400px; height: 300px;" src="http://3.bp.blogspot.com/_jTEO63-CIhM/S0h9HW2nVTI/AAAAAAAABqA/ynb2hvF_WOU/s400/GreenFields.JPG" border="0" alt="Green Fields visible from Bangalore Mangalore day train"id="BLOGGER_PHOTO_ID_5424723316514968882" /></a><br />
<a onblur="try {parent.deselectBloggerImageGracefully();} catch(e) {}" href="http://1.bp.blogspot.com/_jTEO63-CIhM/S0h9GSDl3EI/AAAAAAAABpo/sRb1zhh4cYM/s1600-h/BarricadesToAvoidLandSlides.JPG"><img style="display:block; margin:0px auto 10px; text-align:center;cursor:pointer; cursor:hand;width: 400px; height: 300px;" src="http://1.bp.blogspot.com/_jTEO63-CIhM/S0h9GSDl3EI/AAAAAAAABpo/sRb1zhh4cYM/s400/BarricadesToAvoidLandSlides.JPG" border="0" alt="Barricades To Avoid Landslides"id="BLOGGER_PHOTO_ID_5424723298047351874" /></a></div>
]]></content:encoded>
			<wfw:commentRss>http://samarasa.net/samarasa/?feed=rss2&amp;p=720</wfw:commentRss>
		</item>
		<item>
		<title>ಬೆಲೆ ಏರಿಕೆ ಮತ್ತು ದಿನಕರ ಚೌಪದಿ</title>
		<link>http://samarasa.net/samarasa/?p=717</link>
		<comments>http://samarasa.net/samarasa/?p=717#comments</comments>
		<pubDate>Wed, 06 Jan 2010 05:16:47 +0000</pubDate>
		<dc:creator>ಸಂಪಾದಕ</dc:creator>
		
		<category><![CDATA[ಕವಿ ಕಾವ್ಯ ಪರಿಚಯ]]></category>

		<category><![CDATA[ರಾಜಕೀಯ]]></category>

		<category><![CDATA[ಸಾಹಿತ್ಯ]]></category>

		<category><![CDATA[ದಿನಕರ ಚೌಪದಿ. ದಿನಕರ ದೇಸಾಯಿ]]></category>

		<guid isPermaLink="false">http://samarasa.net/samarasa/?p=717</guid>
		<description><![CDATA[ಅಕ್ಕಿ ಸಕ್ಕರೆ ಗೋದಿ ಆಕಾಶಕೇರಿ
ಚಿಕ್ಕೆಯಾದವು ಎಂದು ಹೇಳುವರು, ನಾರಿ.
ಜನಗಳೆಲ್ಲಾ ವಿಮಾನದ ಮೇಲೆ ಕೂತು
ನಭಕೇರಿದರೆ ಮಾತ್ರ ಕೇಸರಿಭಾತು]]></description>
			<content:encoded><![CDATA[<p>ದಿನಸಿಗಳು, ತರಕಾರಿಗಳು ಗಗನಕ್ಕೆ ಏರಿರುವ ಸಂದರ್ಭದಲ್ಲಿ, ಚುಟುಕ ಬ್ರಹ್ಮ ದಿನಕರ ದೇಸಾಯಿಯವರು ಬರೆದಿರುವ ಈ ಚೌಪದಿಗಳನ್ನೋದಿ..</p>
<p><div id="attachment_718" class="wp-caption aligncenter" style="width: 210px"><img src="http://samarasa.net/samarasa/wp-content/uploads/2010/01/dinakaradesai.jpg" alt="ಚಿತ್ರಕೃಪೆ: http://nirpars.blogspot.com/" title="dinakaradesai" width="200" height="309" class="size-full wp-image-718" /><p class="wp-caption-text">ಚಿತ್ರಕೃಪೆ: http://nirpars.blogspot.com/</p></div><br />
<strong>ತಿನ್ನೋಣ ಗೆಣಸು</strong></p>
<p>ಅಕ್ಕಿಯೇತಕೆ, ಮಗಳೆ? ತಿನ್ನೋಣ ಗೆಣಸು.<br />
ಸಾಲದಿದ್ದರೆ ಗೆಣಸು, ಉಂಟು ಕರಿ ಮೆಣಸು.<br />
ಈ ರೀತಿ ಬಿಡಿಸಿದರೆ ಅನ್ನದ ಸಮಸ್ಯೆ-<br />
ಬೆಳದಿಂಗಳಾಗಿ ಹೊಳೆಯುವುದು ಅಮಾವಾಸ್ಯೆ.</p>
<p><strong>ಬೆಲೆಗಳ ಆಕಾಶ ಯಾತ್ರೆ</strong></p>
<p>ಅಕ್ಕಿ ಸಕ್ಕರೆ ಗೋದಿ ಆಕಾಶಕೇರಿ<br />
ಚಿಕ್ಕೆಯಾದವು ಎಂದು ಹೇಳುವರು, ನಾರಿ.<br />
ಜನಗಳೆಲ್ಲಾ ವಿಮಾನದ ಮೇಲೆ ಕೂತು<br />
ನಭಕೇರಿದರೆ ಮಾತ್ರ ಕೇಸರಿಭಾತು</p>
<p><strong>ಪ್ರಧಾನಿಯ ಕರೆ</strong></p>
<p>ಅಗ್ಗವಾಗುವುದುಂಟು ಧಾನ್ಯಗಳ ರೇಟು<br />
ಆಮೇಲೆ ಕೂಲಿಗೂ ರೇಶಿಮೆಯೆ ಕೋಟು.<br />
ಆ ತನಕ ನಾವೆಲ್ಲರೂ ತಾಳ್ಮೆಯಿಂದ<br />
ತುಸು ಕಡಿಮೆ ತಿಂದು ಸಹಕರಿಸಬೇಕೆಂದ</p>
<p><strong>ಉಪವಾಸ</strong></p>
<p>ಎಷ್ಟಾಯ್ತು ಉಪವಾಸ ಸತ್ತವರ ಸಂಖ್ಯೆ?<br />
ಯಮದೇವನಿಗೆ ಕೂಡ ಗೊತ್ತಿಲ್ಲ ಅಂಕೆ.<br />
ಪ್ರತಿ ದಿವಸವೂ ಕುಳಿತು ಮಾಡುವನು ಲೆಕ್ಕ.<br />
ಅಳೆಯಲಾಗುವುದಿಲ್ಲ ಮಾನವನ ದು:ಖ</p>
<p><strong>ನನ್ನ ಆಹಾರ</strong></p>
<p>ಎಂದಿಗೂ ನಾನು ತಿನ್ನುವುದಿಲ್ಲ ಪೇಡೆ<br />
ಹೀಗಾಗಿ ನನಗಿಲ್ಲ ಯಾರದೂ ಭೇಡೆ.<br />
ನಾನು ತಿನ್ನುವುದು, ಸಖಿ, ಹುಳಿ ಮತ್ತೆ ಖಾರ.<br />
ಇದಕೆನ್ನುವರು ಜನರು ಚುಟುಕದಾಹಾರ</p>
<p><strong>ಮಂತ್ರಿಗಳು ಬಂದು</strong></p>
<p>ಏನೇನು ಮಾಡಿದರು ಮಂತ್ರಿಗಳು ಬಂದು?<br />
ಹೊರಟು ಹೋದರು ಬಂಗ್ಲೆಯಲಿ ಕೋಳಿ ತಿಂದು.<br />
ಕಂತ್ರಾಟುದಾರನಿಗೆ ಭರವಸೆಯ ನೀಡಿ.<br />
ಭಕ್ಷೀಸು ಪಡೆದುಕೊಂಡು ಒಂದು ಗಾಡಿ.</p>
<p><strong>ಧಾನ್ಯದ ಹಂಚಿಕೆ</strong></p>
<p>ಒಂದಲ್ಲ, ಎರಡಲ್ಲ ಮೂರು ಮಧ್ಯಾಹ್ನ<br />
’ಕ್ಯೂ’ ಹಿಡಿದು ನಿಂತರೂ ಸಿಗಲಿಲ್ಲ ಧಾನ್ಯ<br />
ಮುಂಜಾನೆ ಬಾ ಎಂದು ಹೇಳಿದರು ಮತ್ತೆ.<br />
ಮುಂಜಾನೆ ಹೋದಾಗ ಕಾಳು ನಾಪತ್ತೆ.</p>
<p><strong>ಕಾಳು ಮತ್ತು ಹುಲ್ಲು</strong></p>
<p>ಕಡಿಮೆಯಾಗಲು ಕಾಳು ಹೆಚ್ಚಾಯ್ತು ಹುಲ್ಲು.<br />
ಇದಕೆಂಬೆ ಪಂಚವಾರ್ಷಿಕದ ಸ್ಯಾಂಪಲ್ಲು.<br />
ಮೂರು ಯೋಜನೆ ಮುಗಿಸಿ ಕೊನೆಗೆ ಬರಗಾಲ.<br />
ಹುಟ್ಟುವಳಿಗಿಂತಲೂ ಹೆಚ್ಚಾಯ್ತು ಸಾಲ.</p>
<p><strong>ಸಚಿವರ ಸೂಚನೆ</strong></p>
<p>ಕಡಿಮೆಯಾದರೆ ಕಾಳು-ಕಡಿಮೆಯ ಉತ್ಪತ್ತಿ<br />
ಪ್ರತಿಯೊಬ್ಬ ನಾಗರಿಕ ತಿನಬಹುದು ತತ್ತಿ.<br />
ತುಟ್ಟಿಯಾದರೆ ತತ್ತಿ ಮನೆಯಲ್ಲಿ ಹೇಟೆ<br />
ಸಾಕಿದರೆ ನಿಂತುಬಿಡುವುದು ಕಳ್ಳಪೇಟೆ</p>
<p><strong>ಅಧಿಕಾರಿ ಹೇಳಿದ್ದು</strong></p>
<p>ಕಬ್ಬು ತಿನ್ನುವ ರೀತಿ ಗೊತ್ತುಂಟೆ ಕುರಿಗೆ?<br />
ಮೇಲಿನೆಲೆಗಳ ಮೇದು ಮರಳುವವು ಮನೆಗೆ<br />
ಕುರಿಯಂತೆ ಆಗಬಾರದು ನಾವು ಅಂದೆ.<br />
ಅದಕಾಗಿಯೇ ನಾನು, ಸರಿಯಾಗಿ ತಿಂದೆ.</p>
<p><strong>ತುಟ್ಟಿಯಾದರೆ</strong></p>
<p>ತುಟ್ಟಿಯಾದರೆ ಅಕ್ಕಿ ತಿನ್ನಿ ಕರಿಗಡುಬು.<br />
ಮತ್ತೆ ರಾತ್ರಿಗೆ ತಿನ್ನಿ ಬೇಕಷ್ಟು ಸೇಬು.<br />
ಹೀಗೆಂದು ಮಂತ್ರಿಗಳು ಉಪದೇಶ ನೀಡಿ<br />
ಮರಳಿದರು ಅವಳ ಜೊತೆ ಹತ್ತಿ ಗಾಡಿ.</p>
<p><strong>ಸುಲಭ ಉಪಾಯ</strong></p>
<p>ದೇಶದೊಳಗಿಲ್ಲ ಸಾಕಷ್ಟು ಆಹಾರ.<br />
ಊಟ ಬಿಡಬೇಕಂತೆ ಪ್ರತಿ ಸೋಮವಾರ.<br />
ನಿತ್ಯವೂ ಊಟ ಬಿಟ್ಟರೆ ಲೇಸು.<br />
ಆಹರವೂ ಉಳಿದು ಕಿಸೆಯೊಳಗೆ ಕಾಸು.</p>
]]></content:encoded>
			<wfw:commentRss>http://samarasa.net/samarasa/?feed=rss2&amp;p=717</wfw:commentRss>
		</item>
		<item>
		<title>ಜೈಪುರ ಸಾಹಿತ್ಯೋತ್ಸವ &#8211;೨೦೧೦  &#8212; ಜನವರಿ ೨೧ ರಿಂದ ೨೫</title>
		<link>http://samarasa.net/samarasa/?p=714</link>
		<comments>http://samarasa.net/samarasa/?p=714#comments</comments>
		<pubDate>Tue, 05 Jan 2010 08:55:05 +0000</pubDate>
		<dc:creator>admin</dc:creator>
		
		<category><![CDATA[ಕಾರ್ಯಕ್ರಮಗಳು]]></category>

		<guid isPermaLink="false">http://samarasa.net/samarasa/?p=714</guid>
		<description><![CDATA[ಭಾರತ ದೇಶದಲ್ಲಷ್ಟೇ ಅಲ್ಲ ಏಷಿಯಾ ಖಂಡದಲ್ಲೇ ಅತಿ ದೊಡ್ಡ ಸಾಹಿತ್ಯೋತ್ಸವ ಎಂದು ಗುರುತಿಸಿಕೊಳ್ಳುವ, ಜೈಪುರ ಸಾಹಿತ್ಯೋತ್ಸ ೨೦೧೦ ಜನವರಿ ೨೧ ರಿಂದ ೨೫ ರ ವರೆಗೆ ಜರುಗಲಿದೆ.

ಕಾರ್ಯಕ್ರಮ ನಮ್ಮವರೇ ಆದ ಗಿರೀಶ್ ಕಾರ್ನಾಡ್ ರವರ ಭಾಷಣದಿಂದ ಪ್ರಾರಂಭವಾಗುತ್ತಿರುವುದು ವಿಶೇಷ. ದೇಶ ವಿದೇಶದ ಅತ್ಯುತ್ತಮ ಸಾಹಿತಿಗಳು ಭಾಗವಹಿಸುವ ಈ ಉತ್ಸವದಲ್ಲಿ ನೀವೂ ಭಾಗಿಯಾಗಿ.
ಹೆಚ್ಚಿನ ಮಾಹಿತಿಗೆ ಕೆಳಗಿನ ಕೊಂಡೀಯನ್ನು ಬಳಸಿ.
http://jaipurliteraturefestival.org/
]]></description>
			<content:encoded><![CDATA[<p>ಭಾರತ ದೇಶದಲ್ಲಷ್ಟೇ ಅಲ್ಲ ಏಷಿಯಾ ಖಂಡದಲ್ಲೇ ಅತಿ ದೊಡ್ಡ ಸಾಹಿತ್ಯೋತ್ಸವ ಎಂದು ಗುರುತಿಸಿಕೊಳ್ಳುವ, ಜೈಪುರ ಸಾಹಿತ್ಯೋತ್ಸ ೨೦೧೦ ಜನವರಿ ೨೧ ರಿಂದ ೨೫ ರ ವರೆಗೆ ಜರುಗಲಿದೆ.<br />
<img src="http://samarasa.net/samarasa/wp-content/uploads/2010/01/jaipur_literature_festival-300x176.jpg" alt="jaipur_literature_festival" title="jaipur_literature_festival" width="300" height="176" class="aligncenter size-medium wp-image-715" /><br />
ಕಾರ್ಯಕ್ರಮ ನಮ್ಮವರೇ ಆದ ಗಿರೀಶ್ ಕಾರ್ನಾಡ್ ರವರ ಭಾಷಣದಿಂದ ಪ್ರಾರಂಭವಾಗುತ್ತಿರುವುದು ವಿಶೇಷ. ದೇಶ ವಿದೇಶದ ಅತ್ಯುತ್ತಮ ಸಾಹಿತಿಗಳು ಭಾಗವಹಿಸುವ ಈ ಉತ್ಸವದಲ್ಲಿ ನೀವೂ ಭಾಗಿಯಾಗಿ.</p>
<p>ಹೆಚ್ಚಿನ ಮಾಹಿತಿಗೆ ಕೆಳಗಿನ ಕೊಂಡೀಯನ್ನು ಬಳಸಿ.<br />
<a href="http://jaipurliteraturefestival.org/">http://jaipurliteraturefestival.org/</a></p>
]]></content:encoded>
			<wfw:commentRss>http://samarasa.net/samarasa/?feed=rss2&amp;p=714</wfw:commentRss>
		</item>
		<item>
		<title>ಪೋಲೀಸ್ ಕ್ವಾರ್ಟರ್ಸ್ &#8212; ಭಾವಾತಿರೇಕದ ಮೂಟೆ</title>
		<link>http://samarasa.net/samarasa/?p=711</link>
		<comments>http://samarasa.net/samarasa/?p=711#comments</comments>
		<pubDate>Sun, 03 Jan 2010 19:23:37 +0000</pubDate>
		<dc:creator>ಗುರುವೆ</dc:creator>
		
		<category><![CDATA[ಚಲನಚಿತ್ರ]]></category>

		<category><![CDATA[ಪೋಲೀಸ್ ಕ್ವಾರ್ಟರ್ಸ್]]></category>

		<guid isPermaLink="false">http://samarasa.net/samarasa/?p=711</guid>
		<description><![CDATA[ಹೋದ ವಾರ ತೆರೆ ಕಂಡ, ಸೈನೈಡ್ ನಿರ್ಮಿಸಿದ ತಂಡದಿಂದ ನಿರ್ಮಿತವಾಗಿರುವ ಚಲನಚಿತ್ರ ಎಂಬ ನಿರೀಕ್ಷೆಯಿಂದ ನೋಡಿದ ಈ ಚಿತ್ರ ಭಾರಿ ನಿರಾಸೆಯನ್ನು ತಂದಿತು. ೧೯೯೨ ರ ಭಾಬ್ರಿ ಮಸೀದಿ ಧ್ವಂಸ ಗಲಭೆಯಲ್ಲಿ ಅರಳಿದ ಒಂದು ಸತ್ಯ ಪ್ರೇಮ ಕಥೆ ಅಧಾರಿತ ಚಿತ್ರ ಎಂಬ ಜಾಹೀರಾತಿನೊಂದಿಗೆ ಬಿಡುಗಡೆಯಾಗಿರುವ ಈ ಚಲನಚಿತ್ರದ ಕಥೆ ಅತೀ ಸಾಧಾರಣವಾದದ್ದು.]]></description>
			<content:encoded><![CDATA[<p>ಹೋದ ವಾರ ತೆರೆ ಕಂಡ, ಸೈನೈಡ್ ನಿರ್ಮಿಸಿದ ತಂಡದಿಂದ ನಿರ್ಮಿತವಾಗಿರುವ ಚಲನಚಿತ್ರ ಎಂಬ ನಿರೀಕ್ಷೆಯಿಂದ ನೋಡಿದ ಈ ಚಿತ್ರ ಭಾರಿ ನಿರಾಸೆಯನ್ನು ತಂದಿತು. ೧೯೯೨ ರ ಭಾಬ್ರಿ ಮಸೀದಿ ಧ್ವಂಸ ಗಲಭೆಯಲ್ಲಿ ಅರಳಿದ ಒಂದು ಸತ್ಯ ಪ್ರೇಮ ಕಥೆ ಅಧಾರಿತ ಚಿತ್ರ ಎಂಬ ಜಾಹೀರಾತಿನೊಂದಿಗೆ ಬಿಡುಗಡೆಯಾಗಿರುವ ಈ ಚಲನಚಿತ್ರದ ಕಥೆ ಅತೀ ಸಾಧಾರಣವಾದದ್ದು.<br />
<img src="http://samarasa.net/samarasa/wp-content/uploads/2010/01/police-quarters.jpg" alt="police-quarters" title="police-quarters" width="574" height="431" class="aligncenter size-full wp-image-712" /><br />
ಇಬ್ಬರು (ವಿಶ್ವಣ್ಣ ಮತ್ತು ವೆಂಕಟೇಶ್ ಗೌಡ &#8212; ಚಲನಚಿತ್ರದ ಹೆಸರುಗಳು) ಪೋಲೀಸ್ ಪೇದೆಗಳು. ಬೇರೆ ಬೇರೆ ಜಾತಿಯವರು, ಆದರೆ ಪ್ರಾಣ ಸ್ನೇಹಿತರು. ವೆಂಕಟೇಶ್ ತನ್ನ ಕುಟುಂಬವನ್ನು ಧಿಕ್ಕರಿಸಿ ಕೆಳಜಾತಿ ಎನ್ನಿಸಿಕೊಳ್ಳುವ ವರ್ಗದಿಂದ ಬಂದಿರುವ ಅನಾಥೆಯನ್ನು ಮದುವೆಯಾಗುತ್ತಾನೆ. ಆದರೆ ಅಕಾಲ ಮರಣ ಹೊಂದುತ್ತಾನೆ. ಆಗ ವಿಶ್ವಣ್ಣ ತನ್ನ ಗೆಳೆಯ ವೆಂಕಟೇಶ್‌ನ ಹೆಂಡತಿಗೆ ಎಲ್ಲ ರೀತಿಯ ಸಹಾಯ ಮಾಡುತ್ತಾನೆ. ಅನಿತಾ (ಸೋನು) ವಿಶ್ವಣ್ಣನ ಮಗಳು. ಜಾಣ ಹುಡುಗಿ, ಸಂಭಾವಿತೆ. ಅಶ್ವಿನ್ (ಅನೀಶ್ ತೇಜೇಶ್ವರ್) ವೆಂಕಟೇಶ್ ನ ಮಗ. ಪೊರ್ಕಿ, ತರಲೆ, ಹೊರಟ. ಆದರೂ ವಿಶ್ವಣ್ಣನೆಂದರೆ ಭಯ ಭಕ್ತಿ, ಗೌರವ. ಅನಿತಾಳಿಗೆ ತನ್ನ ಮಾವನ ಮಗನ ಜೊತೆಯೇ ಲಗ್ನ ಎಂಬುದು ನಿಶ್ಚಯವಾಗಿರುತ್ತದೆ. ಭಾಬ್ರಿ ಮಸೀದಿಯ ಗಲಭೆಯಲ್ಲಿ ನಾಯಕಿ ಕಾಲೇಜಿನಲ್ಲಿ ಸಿಕ್ಕಿಬಿಡುತ್ತಾಳೆ. ತಾನು ಮದುವೆಯಾಗಬೇಕಿರುವ ಮಾವನ ಮಗನಿಗೆ ಸಾಹಾಯಕ್ಕೆಂದುಕೋರಿದಾಗ, ಮಾವನ ಮಗ ಗಲಭೆಗೆ ಹೆದರಿ ನಿರಾಕರಿಸುತ್ತಾನೆ. ಅನಿತಾಳ ತಾಯಿಯ ಕೋರಿಕೆಯ ಮೇರೆಗೆ ಗಲಭೆಯಲ್ಲೂ ನಾಯಕಿಯನ್ನು ರಕ್ಷಿಸುವ ಕಾರ್ಯಕ್ಕೆ ಅಶ್ವಿನ್ ಮುಂದಾಗುತ್ತಾನೆ ಮತ್ತು ಸಫಲವಾಗುತ್ತಾನೆ. ಆಗ ನಾಯಕಿಗೆ ನಾಯಕನ ಮೇಲೆ ಅನುರಾಗವುಂಟಾಗುತ್ತದೆ. ನಾಯಕ ತೀರಾ ಹೊರಟ. ಆದರೂ ನಾಯಕನ ಮನ ಗೆಲ್ಲುವಲ್ಲಿ ನಾಯಕಿ ಯಶಸ್ವಿಯಾಗುತ್ತಳೆ. ನಾಯಕಿಯನ್ನು ಮನೆ ತಲುಪಿಸಲು ಅಶ್ವಿನ್ ತನ್ನ ಗೆಳೆಯ (ದಿಲೀಪ್ ರಾಜ್) ನ ಸಹಾಯ ಕೇಳುತ್ತನೆ. ಇದನ್ನು ಕಂಡು ಅನಿತಾಳ ತಾಯಿ ಕುಪಿತಳಾಗಿ, ಅನಿತಾಳಿಗೆ ತನ್ನ ಅಣ್ಣನ ಮಗನ ಜೊತೆ ಮದುವೆ ನಿಶ್ಚಯ ಮಾಡಿಬಿಡುತ್ತಾಳೆ. ನಾಯಕಿ ತನ್ನ ಮದುವೆಯ ದಿನ ತನ್ನನ್ನು ಕರೆದುಕೊಂಡು ಓಡಿ ಹೋಗದಿದ್ದರೆ ವಿಷ ಸೇವಿಸಿ ಸಾಯುವುದಾಗಿ ಅಶ್ವಿನ್ ಗೆ ಹೇಳುತ್ತಳೆ. ಆದರೆ ವಿಶ್ವಣ್ಣನ ಮೇಲೆ ಅತೀ ಗೌರವವಿರುವ ಅಶ್ವಿನ್ ತಾಯಿಗೆ ತನ್ನ ಮಗ ಅನಿತಾಳನ್ನು ಅಪಹರಿಸಿಕೊಂಡು ಹೋಗುವುದು ಇಷಟವಿರುವುದಿಲ್ಲ. ಮಗನಲ್ಲಿ ಅನಿತಾಳನ್ನು ಮರೆಯುವಂತೆ ಬೇಡುತ್ತಾಳೆ. ಹೀಗೆ ಸಾಗುತ್ತದೆ ಚಿತ್ರ ಕಥೆ. ಅಂತ್ಯ ಏನು ಎಂದು ಇನ್ನೂ ಕುತೂಹಲವಿದ್ದರೆ ತೆರೆಯ ಮೇಲೆ ನೋಡಿ!</p>
<p>ಹೀಗೆ ದುರ್ಬಲ ಕಥೆಯೊಂದನ್ನು ಆರಿಸಿಕೊಂಡಾಗ, ಕನಿಷ್ಟ ಚಿತ್ರದ ಇತರ ಆಯಾಮಗಳಾದರೂ ಚೆನ್ನಾಗಿದ್ದರೆ ಚಿತ್ರ ಗೆಲ್ಲುವ ಸಾಧ್ಯತೆ ಇದೆ, ಆದೆರೆ ಚಿತ್ರ ಬೇರೆಲ್ಲಾ ವಿಭಾಗಳೂ ಚಿತ್ರಕಥೆಯಷ್ಟೇ ದುರ್ಬಲ. ಅನೀಶ್ ಹೊರಟು ಸ್ವಭಾವದ ನಾಯಕ ನಟನ ಪಾತ್ರಕ್ಕೆ ನ್ಯಾಯ ಒದಗಿಸುವಲ್ಲಿ ವಿಫಲವಾಗಿದ್ದಾರೆ. ಸಂಭಾಷಣೆಯನ್ನು ಅರಚುವುದರಲ್ಲಷ್ಟೇ ಗೆದ್ದಿದ್ದಾರೆ. ಇದ್ದುದರಲ್ಲಿ ಸೋನು ರವರ ನಟನೆ ಪರವಾಗಿಲ್ಲವೆನ್ನಬಹುದು. ದಿಲೀಪ್ ರಾಜ್ ನಾಯಕ ನಟನ ಗೆಳಯನ ಪಾತ್ರದಲ್ಲಿ ಸಾಧಾರಣ ನಟನೆ. ಸಂಭಾಷಣೆ ಬೇಸರ ತರುವಂತಿದೆ. ನಾಯಕ ಮತ್ತು ಅವನ ತಾಯಿಯ ನಡುವಿನ ದೃಶ್ಯಗಳು ಭಾವತಿರೇಕವೆಂದೆನಿಸಿಬಿಡುತ್ತವೆ. ಜೇಮ್ಸ್ ವಸಂತ್ ರವ ಸಂಗೀತವನ್ನು ಕೇಳುವ ಹಾಗಿಲ್ಲ. ಸೈನೈಡ್ ಚಿತ್ರವನ್ನು ನಿರ್ದೇಶಿಸಿ ಗಮನ ಸೆಳೆದಿದ್ದ ಎ ಎಂ ಆರ್ ರಮೇಶ್ ರವರು ಈ ಚಿತ್ರದ ನಿರ್ದೇಶನದಲ್ಲಿ ಸಂಪೂರ್ಣ ಸೋತಿದ್ದಾರೆ. ಛಾಯಾಗ್ರಹಣಕ್ಕೆ ಅಷ್ಟೇನೂ ಮಹತ್ವವಿಲ್ಲ.   </p>
<p>ಚಿತ್ರದ ಹೆಸರು ಹೀಗೇಕೆ ಎಂಬ ಸಂಶಯವಿದ್ದರೆ.. ನಾಯಕಿ ನಾಯಕಿ ಬೆಳೆಯುವುದು ಪೋಲೀಸ್ ಕ್ವಾರ್ಟರ್ಸ್ನಲ್ಲಿ!</p>
]]></content:encoded>
			<wfw:commentRss>http://samarasa.net/samarasa/?feed=rss2&amp;p=711</wfw:commentRss>
		</item>
		<item>
		<title>ರಾಮ್ : ಅಪ್ಪು ಮತ್ತೆ ಹಾದಿಗೆ!</title>
		<link>http://samarasa.net/samarasa/?p=708</link>
		<comments>http://samarasa.net/samarasa/?p=708#comments</comments>
		<pubDate>Sun, 03 Jan 2010 18:39:57 +0000</pubDate>
		<dc:creator>ಗುರುವೆ</dc:creator>
		
		<category><![CDATA[ಚಲನಚಿತ್ರ]]></category>

		<guid isPermaLink="false">http://samarasa.net/samarasa/?p=708</guid>
		<description><![CDATA[ಭರ್ಜರಿ ನೃತ್ಯ, ಹಾಸ್ಯಭರಿತ ಸಂಭಾಷಣೆ, ಮಚ್ಚು ಬಿಟ್ಟು ಹಾದಿಗೆ ಬಂದಿರುವ ಪುನೀತ್, ಮೊದಲ ಬಾರಿಗೇ ಕನ್ನಡ ಚಿತ್ರದಲ್ಲಿ ಮಿಂಚಿರುವ ಸುಂದರಿ ಪ್ರಿಯಾಮಣಿ - ಒಟ್ಟಿನಲ್ಲಿ ಹೇಳುವುದಾದರೆ "ರಾಮ್" ಪ್ರೇಕ್ಷಕರಿಗೆ ಉತ್ತಮ ಮನರಂಜನೆಯ ರಸದೌತಣ ಬಡಿಸುವ ಚಿತ್ರ.]]></description>
			<content:encoded><![CDATA[<p>ಭರ್ಜರಿ ನೃತ್ಯ, ಹಾಸ್ಯಭರಿತ ಸಂಭಾಷಣೆ, ಮಚ್ಚು ಬಿಟ್ಟು ಹಾದಿಗೆ ಬಂದಿರುವ ಪುನೀತ್, ಮೊದಲ ಬಾರಿಗೇ ಕನ್ನಡ ಚಿತ್ರದಲ್ಲಿ ಮಿಂಚಿರುವ ಸುಂದರಿ ಪ್ರಿಯಾಮಣಿ - ಒಟ್ಟಿನಲ್ಲಿ ಹೇಳುವುದಾದರೆ &#8220;ರಾಮ್&#8221; ಪ್ರೇಕ್ಷಕರಿಗೆ ಉತ್ತಮ ಮನರಂಜನೆಯ ರಸದೌತಣ ಬಡಿಸುವ ಚಿತ್ರ.<br />
<div id="attachment_709" class="wp-caption aligncenter" style="width: 610px"><img src="http://samarasa.net/samarasa/wp-content/uploads/2010/01/raam.jpg" alt="ಚಿತ್ರ ಕೃಪೆ : http://www.123musiq.com/Ram.html" title="raam" width="600" height="401" class="size-full wp-image-709" /><p class="wp-caption-text">ಚಿತ್ರ ಕೃಪೆ : http://www.123musiq.com/Ram.html</p></div><br />
ಎರಡು ವಾರದಿಂದ ತುಂಬಿದ ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಳ್ಳುತ್ತಿರುವ ಬಹು ನಿರೀಕ್ಷಿತ ಚಿತ್ರ &#8220;ರಾಮ್&#8221; ಚಿತ್ರವನ್ನು ವೀಕ್ಷಿಸಿದ ಮೇಲೆ ನಿರೀಕ್ಷೆ ಹುಸಿಗೊಳ್ಳಲಿಲ್ಲ. ವಂಶಿ, ರಾಜ್ ಮುಂತಾವ ಮಚ್ಚು-ಕೊಚ್ಚು ಚಿತ್ರಗಳನ್ನು ಕೊಟ್ಟು ಅಭಿಮಾನಿಗಳಿಗೆ ಬೇಸರ ತರಿಸಿದ್ದ ಪುನೀತ್ ಈ ಬಾರಿ ಉತ್ತಮ ಪಾತ್ರವನ್ನು/ಚಿತ್ರವನ್ನು ಆಯ್ದುಕೊಂಡು ಮತ್ತೆ ನಿರೀಕ್ಷೆ ಹುಟ್ಟಿಸಿದ್ದಾರೆ. ಒಲ್ಲದ ಮದುವೆಯನ್ನು ತಪ್ಪಿಸಿ ತನ್ನ ಗೆಳೆಯನ ಪ್ರೇಯಸಿಯನ್ನು ರಕ್ಷಿಸಲು ಮುಂದಾಗುವ ರಾಮ್, ತಪ್ಪು ಕಲ್ಯಾಣ ಮಂಟಪಕ್ಕೆ ಹೋಗಿ ಬೇರೆ ಯಾವುದೋ ಹುಡುಗಿಯನ್ನು (ಪ್ರಿಯಾಮಣಿ) ಅಲ್ಲಿಂದ ಹೊತ್ತು ತರುತ್ತಾನೆ. ಆ ಹುಡುಗಿಗೆ ಇಬ್ಬರು ಮಾವಂದಿರು. ಇಬ್ಬರೂ ಪ್ರತ್ಯೇಕವಾಗಿ ಅವಳನ್ನು ಹುಡುಕುತ್ತಿರುತ್ತಾರೆ. ರಾಮ್ ಗೆ ನಾಯಕಿಯನ್ನು ರಕ್ಷಿಸುವ ಹೊಣೆ. ಕೊನೆಗೆ ಒಬ್ಬ ಮಾವ ಆ ಹುಡುಗಿಯನ್ನು ತನ್ನ ಸುಪರ್ದಿಗೆ ತೆಗೆದುಕೊಳ್ಳುವುದರಲ್ಲಿ ಸಫಲವಾಗುತ್ತಾನೆ. ನಂತರ ನಾಯಕ, ನಾಯಕಿಯ ಇಬ್ಬರ ಮಾವಂದಿರ ಲೆಕ್ಕ ಪತ್ರಗಳನ್ನು ನೋಡಿಕೊಳ್ಳುವ ಲೆಕ್ಕಿಗನ (ರಂಗಾಯಣ ರಘು) ಸಹಾಯಕನಾಗಿ ಅವರುಗಳ ಮನೆ ಹೊಕ್ಕಿ, ತಂತ್ರವನ್ನು ಹೂಡಿ ನಾಯಕಿಯನ್ನು ವರಿಸಿಕೊಳ್ಳುತ್ತಾನೆ.</p>
<p>ನೀವಿಲ್ಲಿಗೆ ಊಹಿಸಿರುವಂತೆ ಕಥೆಯಲ್ಲಿ ಏನೂ ಹೊಸತನವಿಲ್ಲ, ರೋಚಕವೂ ಇಲ್ಲ. ಆದರೂ ಚಿತ್ರವನ್ನು ಗೆಲ್ಲಿಸಬಲ್ಲ ಅಂಶಗಳು ಸಾಕಷ್ಟಿವೆ. ರಮೇಶ್ ರವರ ಸಂಭಾಷಣೆ ಚುರುಕಾಗಿದೆ. ಹಾಸ್ಯವೂ ಪ್ರೇಕ್ಷಕರಿಗೆ ಕಚಗುಳಿ ಇಡುತ್ತದೆ. ದೊಡ್ಡಣ್ಣ, ಸಾಧು ಕೋಕಿಲಾ ಮತ್ತು ರಂಗಾಯಣ ರಘು ಹಾಸ್ಯ ಪಾತ್ರಗಳಲ್ಲಿ ಮಿಂಚಿದ್ದಾರೆ. ರಂಗಾಯಣ ರಘುರವರ ಪಾತ್ರದಲ್ಲಿ ಮೊದಲಿಗೆ ತಮ್ಮ ಏಕತಾನತೆ ಕಂಡರೂ, ಜನರನ್ನು ನಗಿಸುವಲ್ಲಿ ಗೆದ್ದಿದ್ದಾರೆ. ಹರಿಕೃಷ್ಣ ರವರ ಸಂಗೀತ ಹೇಳಿಕೊಳ್ಳುವಷ್ಟು ಚೆನ್ನಾಗಿಲ್ಲದಿದ್ದರೂ, ಎರಡು ಹಾಡೂಗಳು ಕೇಳವಂತಿವೆ. ಆದರೂ ಹಾಡುಗಳಿಗೆ ಜೀವ ತುಂಬಿರುವುದು ಪುನೀತ್ ಮತ್ತು ಪ್ರಿಯಾಮಣಿಯವರ ಭರ್ಜರಿ ನೃತ್ಯ.ಪುನೀತ್ ನೃತ್ಯದಲ್ಲಿ ಚಿತ್ರದಿಂದ ಚಿತ್ರಕ್ಕೆ ತಮ್ಮ ಗುಣಮಟ್ಟವನ್ನು ಏರಿಸಿಕೊಳ್ಳುತ್ತಿರುವುದು ಸ್ಪಷ್ಟವಾಗಿದೆ. ಪ್ರಿಯಾಮಣಿ ಕೂಡ ಚಿತ್ರದಲ್ಲಿ ಪುನೀತ್ ರವರ ಸಮಕ್ಕೆ ಕುಣಿದಿರುವುದು ಪ್ರೇಕ್ಷಕರನ್ನು ಹೆಚ್ಚು ಕುಣಿಸುವ ಅಂಶ. &#8220;ಹೊಸ ಗಾನ ಬಜಾನ&#8221; ಹಾಡಿನಲ್ಲಂತೂ ಪ್ರಿಯಾಮಣಿಯವರು ಕುಣಿಯುವ ವೇಗಕ್ಕೆ ಹೋಲಿಸಿದಾಗ ಪುನೀತ್ ರವರೇ ಸ್ವಲ್ಪ ಹಿಂದೆ ಬಿದ್ದ ಹಾಗಿದೆ. ನಾಯಕ ಮತ್ತು ನಾಯಕಿಯ ನಟನೆ ಲವಲವಿಕೆಯಿಂದ ಕೂಡಿದ್ದು, ಚಿತ್ರದುದ್ದಕ್ಕೂ ತಾಜಾತನವನ್ನು ಕಾಯ್ದುಕೊಂಡಿದೆ. ಚಿತ್ರ ಕೂಡ ವೇಗವಾಗಿ ಓಡಿರುವುದರಿಂದ ಪ್ರ‍ೇಕ್ಷಕನಿಗೆ ಬೇಸರ ತರಿಸುವ ಸನ್ನಿವೇಶಗಳು ಕಡಿಮೆ. ನಾಯಕಿಯ ಮಾವನ ಮಕ್ಕಳಿಗೆ ಪಾಠ ಕಲಿಸಲು ನಾಯಕ ನಟ ಬ್ಯಾಟ್ ಮ್ಯಾನ್ ಮತ್ತು ಸ್ಪೈಡರ್ ಮ್ಯಾನ್ ವೇಷಗಳನ್ನು ತೊಟ್ಟು ಬರುವ ದೃಷ್ಯಗಳಿಗೆ ಕತ್ತರಿ ಹಾಕಬಹುದಿತ್ತು! ಪುನೀತ್ ಅಭಿಮಾನಿಗಳಿಗೆ ಎಂದಿನಂತೆ ಹಿತ ಮಿತವಾದ ಹೊಡೆದಾಟವಿದೆ. ಮಾದೇಶ ರವರು ತಮ್ಮ ಚೊಚ್ಚಲ ನಿರ್ದೇಶನದಲ್ಲೇ ಉತ್ತಮ ಚಿತ್ರವನ್ನು ಕೊಟ್ಟಿದ್ದಾರೆ ಎನ್ನಬಹುದು.</p>
<p>ಇನ್ನೂ ನೋಡಿಲ್ಲವಾದರೆ ಒಮ್ಮೆ ನೋಡಿ ಬನ್ನಿ.</p>
]]></content:encoded>
			<wfw:commentRss>http://samarasa.net/samarasa/?feed=rss2&amp;p=708</wfw:commentRss>
		</item>
	</channel>
</rss>
